
ಕಾಮೆಂಟರಿ ಬಾಕ್ಸ್ ಎಂದರೆ ಅಲ್ಲೊಂದಿಷ್ಟು ತಮಾಷೆ, ಕಾವೇರಿದ ವಾತಾವರಣ ಎಲ್ಲವೂ ಇರುತ್ತೆ. ನಿನ್ನೆಯ ಭಾರತ-ನ್ಯೂಜಿಲೆಂಡ್ ನಡುವಿನ ಪಂದ್ಯದ ಸಂದರ್ಭ ಆಗಿದ್ದೂ ಇದೆ. ಭಾರತದ ಮಾಜಿ ಕ್ರಿಕೆಟಿಗರಾದ ರವಿಶಾಸ್ತ್ರೀ ಮತ್ತು ಸುನಿಲ್ ಗವಾಸ್ಕರ್ ಜೊತೆ ಕಾಮೆಂಟರಿ ಮಾಡುತ್ತಿದ್ದ ನ್ಯೂಜಿಲೆಂಡ್`ನ ಮಾಜಿ ಕ್ರಿಕೆಟಿಗ ಸ್ಕಾಟ್ ಸ್ಟ್ಐರಿಸ್ ಮಧ್ಯದಲ್ಲೇ ಕಾಮೆಮಟರಿ ಬಾಕ್ಸ್`ನಿಂದ ಎದ್ದು ಹೊರನಡೆದಿದ್ದಾರೆ.
ಅಂದಹಾಗೆ, ಸ್ಟೈರಿಸ್ ಕಾಮೆಂಟರಿ ಬಾಕ್ಸ್`ನಿಂದ ಹೊರ ಹೋಗಲು ಕಾರಣ ಕೇದಾರ್ ಜಾಧವ್. ಕೇದಾರ್ ಜಾಧವ್ ವಿಕೆಟ್ ಪಡೆದರೆ ನಾನು ಕಾಮೆಂಟರಿ ಬಾಕ್ಸ್`ನಿಂದ ಹೊರ ಹೋಗುತ್ತೇನೆಂದು ಸ್ಟೈರಿಸ್ ಸವಾಲು ಹಾಕಿದ್ದರು. ಇದರ ಮಧ್ಯೆಯೇ ಕೇದಾರ್ ಜಾಧವ್, ಕೇನ್ ವಿಲಿಯಮ್ಸ್ ಎಲ್`ಬಿಡಬ್ಲ್ಯೂಗೆ ಅಂಪೈರ್`ಗೆ ಮನವಿ ಮಾಡಿದರು. ಕೂಡಲೇ ಅಂಪೈರ್ ಬೆರಳೆತ್ತಿ ವಟ್ ಎಂದು ತೀರ್ಪಿತ್ತರು. ಇದರಿಂದಾಗಿ ಮುಜುಗರಕ್ಕೊಳಗಾದ ಸ್ಟ್ಐರಿಸ್ ಕಾಮೆಂಟರಿ ಬಾಕ್ಸ್`ನಿಂದ ಹೊರ ನಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.