ಗಂಗೂಲಿಗೆ ಜೀವ ಬೆದರಿಕೆವೊಡ್ಡಿದ ಆರೋಪಿಯ ಬಂಧನ

By Suvarna Web DeskFirst Published Jan 14, 2017, 8:24 AM IST
Highlights

ವಿದ್ಯಾಸಾಗರ ವಿಶ್ವವಿದ್ಯಾಲಯದಲ್ಲಿ ಜ.19ರಂದು ನಡೆಯುವ ಕಾರ್ಯಕ್ರಮದಲ್ಲಿ ದಾದಾನಿಗೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು.

ಕೋಲ್ಕತಾ(ಜ.14): ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿಗೆ ಜೀವಬೆದರಿಕೆ ಹಾಕಿದ್ದ 39 ವರ್ಷದ ಆರೋಪಿಯಾದ ನಿರ್ಮಲ್ಯ ಸಮಂತ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಸುದ್ದಿಪತ್ರಿಕೆ ಮಾರಾಟಗಾರನಾದ ಸಮಂತ ಪಶ್ಚಿಮ ಮಿಡ್ನಾಪುರದ ನಿವಾಸಿ, ಜನವರಿ 7ನೇ ತಾರೀಕಿನಂದು ಗಂಗೂಲಿಗೆ ಬರೆದ ಪತ್ರದಲ್ಲಿ ವಿದ್ಯಾಸಾಗರ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ, ಮನೆಗೆ ವಾಪಾಸ್ ಹಿಂತಿರುಗುವುದಿಲ್ಲ ಎಂದು ಬೆದರಿಕೆ ಪತ್ರ ರವಾನಿಸಿದ್ದರು.

ವಿದ್ಯಾಸಾಗರ ವಿಶ್ವವಿದ್ಯಾಲಯದಲ್ಲಿ ಜ.19ರಂದು ನಡೆಯುವ ಕಾರ್ಯಕ್ರಮದಲ್ಲಿ ದಾದಾನಿಗೆ ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು.

ಗಂಗೂಲಿ ಕೂಡ ತಮಗೆ ಜೀವಬೆದರಿಕೆ ಬಂದಿದೆ ಎಂದು ಸ್ಪಷ್ಟನೆ ನೀಡಿದ ಬಳಿಕ ಕೋಲ್ಕತಾ ಪೊಲೀಸರು ಚುರುಕಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸದ್ಯ ನಿರ್ಮಲ್ಯ ಸಮಂತ ಅವರನ್ನು ಬಂಧಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ ಎಂದು ಸ್ಪೋರ್ಟ್ಸ್ ಕ್ರೀಡಾ ವರದಿ ಮಾಡಿದೆ.    

click me!