ಬೇಕಿತ್ತಾ ಇದು..? ಮಂಜ್ರೇಕರ್‌ ಟ್ವೀಟ್‌ಗೆ ತಿವಾರಿ ಸಿಡಿಮಿಡಿ..!

Published : Oct 04, 2018, 04:33 PM IST
ಬೇಕಿತ್ತಾ ಇದು..? ಮಂಜ್ರೇಕರ್‌ ಟ್ವೀಟ್‌ಗೆ ತಿವಾರಿ ಸಿಡಿಮಿಡಿ..!

ಸಾರಾಂಶ

‘ಬಂಗಾಳ ಹಾಗೂ ಜಾರ್ಖಂಡ್‌ ನಡುವಿನ ಪಂದ್ಯವನ್ನು ಸ್ಥಗಿತಗೊಳಿಸಬೇಕಾಯಿತು. ಫಲಿತಾಂಶಕ್ಕೆ ವಿಜೆಡಿ ಮಾದರಿ ಅನುಸರಿಸಬೇಕಾಯಿತು. ಬೌಲಿಂಗ್‌ ತಂಡ 50 ಓವರ್‌ ಎಸೆಯಲು 4 ಗಂಟೆ 18 ನಿಮಿಷ ತೆಗೆದುಕೊಂಡಿತು’ ಎಂದು ಮಂಜ್ರೇಕರ್‌ ಟ್ವೀಟ್‌ ಮಾಡಿದ್ದರು. 

ಚೆನ್ನೈ[ಅ.04]: ವಿಜಯ್‌ ಹಜಾರೆ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್‌ ವಿಚಾರವಾಗಿ ವೀಕ್ಷಕ ವಿವರಣೆಗಾರ ಸಂಜಯ್‌ ಮಂಜ್ರೇಕರ್‌ ಮಾಡಿದ ಟ್ವೀಟ್‌ಗೆ ಬಂಗಾಳ ಕ್ರಿಕೆಟ್‌ ತಂಡದ ನಾಯಕ ಮನೋಜ್‌ ತಿವಾರಿ ಕೆಂಡಾಮಂಡಲಗೊಂಡಿದ್ದಾರೆ. 

‘ಬಂಗಾಳ ಹಾಗೂ ಜಾರ್ಖಂಡ್‌ ನಡುವಿನ ಪಂದ್ಯವನ್ನು ಸ್ಥಗಿತಗೊಳಿಸಬೇಕಾಯಿತು. ಫಲಿತಾಂಶಕ್ಕೆ ವಿಜೆಡಿ ಮಾದರಿ ಅನುಸರಿಸಬೇಕಾಯಿತು. ಬೌಲಿಂಗ್‌ ತಂಡ 50 ಓವರ್‌ ಎಸೆಯಲು 4 ಗಂಟೆ 18 ನಿಮಿಷ ತೆಗೆದುಕೊಂಡಿತು’ ಎಂದು ಮಂಜ್ರೇಕರ್‌ ಟ್ವೀಟ್‌ ಮಾಡಿದ್ದರು. 

ಇದಕ್ಕೆ ಉತ್ತರಿಸಿದ ತಿವಾರಿ,

‘ವಿಷಯ ತಿಳಿದುಕೊಂಡು ಮಾತನಾಡಿ. ಸುಮ್ಮನೆ ಟ್ವೀಟ್‌ ಮಾಡಬೇಡಿ. ನಾವು ಆಡಿದ ಮೈದಾನದಲ್ಲಿ ಚೆಂಡು ಬೌಂಡರಿಯಿಂದ ಪಕ್ಕದ ತೋಪಿಗೆ ಹೋದರೆ ಚೆಂಡನ್ನು ಹುಡುಕಲು ಎಷ್ಟುಸಮಯ ಬೇಕು ಎನ್ನುವುದು ನಿಮಗೆ ತಿಳಿದಿದೆಯೇ?, ಸುಡು ಬಿಸಿಲಿನಲ್ಲಿ ಪಂದ್ಯ ನಡೆಯುತ್ತಿದೆ. ಬ್ಯಾಟ್ಸ್‌ಮನ್‌ ಒಬ್ಬ ಗಾಯಗೊಂಡು ಆತನನ್ನು ಮೈದಾನದಿಂದ ಹೊರ ಕೊಂಡೊಯ್ಯಲು ಸಾಕಷ್ಟುಸಮಯ ವ್ಯರ್ಥವಾಯಿತು. ಎದುರಾಳಿ ಆಟಗಾರ ಬ್ಯಾಟ್‌ ಗಾತ್ರದ ನಿಯಮ ಉಲ್ಲಂಘಿಸಿದ ಕಾರಣ, ರೆಫ್ರಿ ಪರಿಶೀಲನೆ ನಡೆಸಲು ಸಮಯ ಹಿಡಿಯಿತು. ವಾಸ್ತವ ತಿಳಿಯದೆ ಟೀಕಿಸುವುದು ಸರಿಯಲ್ಲ’ ಎಂದು ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

U19 Asia Cup ವೈಭವ್ ಸೂರ್ಯವಂಶಿ ದ್ವಿಶತಕ ಜಸ್ಟ್‌ ಮಿಸ್; ಉದ್ಘಾಟನಾ ಪಂದ್ಯದಲ್ಲೇ ಬೃಹತ್ ಮೊತ್ತ ಗಳಿಸಿದ ಭಾರತ!
U19 Asia Cup: ಮತ್ತೆ ಸಿಕ್ಸರ್ ಸುರಿಮಳೆ ಹರಿಸಿ ಸ್ಪೋಟಕ ಶತಕ ಚಚ್ಚಿದ ವೈಭವ್ ಸೂರ್ಯವಂಶಿ!