
ಕೊಲಂಬೊ(ಜೂ.16]: ಹಣಕಾಸು ಅವ್ಯವಹಾರ, ಪಿಚ್ ಫಿಕ್ಸಿಂಗ್ ಆರೋಪ ಹೀಗೆ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ಕ್ರಿಕೆಟ್ ತಂಡಕ್ಕೆ ಮತ್ತೊಂದು ಹಿನ್ನಡೆಯುಂಟಾಗಿದೆ. ಲಂಕಾ ಕ್ರಿಕೆಟ್ ಸಂಸ್ಥೆಯ ‘ವ್ಯವಸ್ಥೆ ಮೇಲೆ ವಿಶ್ವಾಸವಿಲ್ಲ’ ಎಂದು ಹೇಳಿರುವ ಲಂಕಾ ಮಾಜಿ ನಾಯಕ ಮಹೇಲಾ ಜಯವರ್ಧನೆ, ಗೆಲುವಿಗಾಗಿ ಪರಿತಪಿಸುತ್ತಿರುವ ರಾಷ್ಟ್ರೀಯ ತಂಡಕ್ಕೆ ಸಲಹೆ ನೀಡಲು ನಿರಾಕರಿಸಿದ್ದಾರೆ.
‘ಕಳೆದ ವರ್ಷದಲ್ಲಿ ತಂಡದ ಅಭಿವೃದ್ದಿಗಾಗಿ ಸೂಚಿಸಿದ್ದ ಎಲ್ಲಾ ಶಿಫಾರಸುಗಳನ್ನು ಲಂಕಾ ಕ್ರಿಕೆಟ್ ಸಂಸ್ಥೆ ತಳ್ಳಿ ಹಾಕಿದೆ. ಇನ್ನೊಮ್ಮೆ ಅಂತಹ ಕೆಟ್ಟ ಅನುಭವವಾಗುವುದು ಬೇಡ. ಸಮಯ ವ್ಯರ್ಥಗೊಳಿಸಿವುದಿದ್ದರೆ ನಮ್ಮನ್ನು ಕರೆಯಬೇಡಿ ಎಂದು ತಿಳಿಸಿದ್ದೇನೆ’ ಎಂದು ಜಯವರ್ಧನೆ ಹೇಳಿದ್ದಾರೆ.
ಶ್ರೀಲಂಕಾ ತಂಡದ ಮಾಜಿ ನಾಯಕ ಜಯವರ್ಧನೆ 149 ಟೆಸ್ಟ್ ಪಂದ್ಯಗಳನ್ನಾಡಿ 11,814 ರನ್ ಸಿಡಿಸಿದ್ದಾರೆ. ಇನ್ನು 448 ಏಕದಿನ ಪಂದ್ಯಗಳಲ್ಲಿ ಲಂಕಾ ತಂಡವನ್ನು ಪ್ರತಿನಿಧಿಸಿದ್ದ ಮಹೇಲಾ 12,650 ರನ್ ಸಿಡಿಸಿದ್ದಾರೆ. ಜತೆಗೆ 55 ಟಿ20 ಪಂದ್ಯಗಳಲ್ಲೂ ಆಡಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.