ಅಸ್ಸಾಮ್ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ ಜಯ; ರಣಜಿಯಲ್ಲಿ ರಾಜ್ಯಕ್ಕೆ ಶುಭಾರಂಭ

Published : Oct 17, 2017, 01:39 PM ISTUpdated : Apr 11, 2018, 12:36 PM IST
ಅಸ್ಸಾಮ್ ವಿರುದ್ಧ ಕರ್ನಾಟಕಕ್ಕೆ ಇನ್ನಿಂಗ್ಸ್ ಜಯ; ರಣಜಿಯಲ್ಲಿ ರಾಜ್ಯಕ್ಕೆ ಶುಭಾರಂಭ

ಸಾರಾಂಶ

ಅಸ್ಸಾಮ್ ತಂಡದ ಮೊದಲ ಇನ್ನಿಂಗ್ಸ್ 145 ರನ್'ಗೆ ಮುಕ್ತಾಯಗೊಂಡಿತು. ಆ ನಂತರ ಕರ್ನಾಟಕ ತಂಡ 7 ವಿಕೆಟ್ ನಷ್ಟಕ್ಕೆ 469 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆರ್.ಸಮರ್ಥ್ ಮತ್ತು ಕೆ.ಗೌತಮ್ ಅಮೋಘ ಶತಕ ಭಾರಿಸಿದರು. ಶ್ರೇಯಸ್ ಗೋಪಾಲ್ ಮತ್ತು ಸ್ಟುವರ್ಟ್ ಬಿನ್ನಿ ಕೂಡ ಉತ್ತಮ ಪ್ರದರ್ಶನ ನೀಡಿದರು. ಒಟ್ಟಾರೆ 324 ರನ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆಡಿದ ಪ್ರವಾಸಿ ಅಸ್ಸಾಮ್ ತಂಡ ಸ್ವಲ್ಪವೂ ಪ್ರತಿರೋಧವಿಲ್ಲದೇ ಹೀನಾಯ ಸೋಲುಂಡಿತು.

ಮೈಸೂರು(ಅ. 17): ಕರ್ನಾಟಕ ಕ್ರಿಕೆಟ್ ತಂಡ ಈ ಬಾರಿಯ ರಣಜಿ ಟ್ರೋಫಿಯಲ್ಲಿ ಶುಭಾರಂಭ ಮಾಡಿದೆ. ಇಲ್ಲಿಯ ಜಯಚಾಮರಾಜೇಂದ್ರ ಒಡೆಯರ್ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಮುಕ್ತಾಯಗೊಂಡ ಎ ಗುಂಪಿನ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಕರ್ನಾಟಕ ಇನ್ನಿಂಗ್ಸ್ ಮತ್ತು 121 ರನ್'ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ನಿನ್ನೆ ತನ್ನ 2ನೇ ಇನ್ನಿಂಗ್ಸಲ್ಲಿ 6 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದ್ದ ಅಸ್ಸಾಂ ತಂಡ ಇಂದು ನಾಲ್ಕನೇ ದಿನದಾಟದಲ್ಲಿ 203 ರನ್'ಗೆ ಆಲೌಟ್ ಆಯಿತು. ಗೋಕುಲ್ ಶರ್ಮಾ ಮತ್ತು ಶಿಬಶಂಕರ್ ರಾಯ್ ಹೊರತುಪಡಿಸಿ ಉಳಿದವರಾರೂ ಪ್ರತಿರೋಧ ಒಡ್ಡಲು ವಿಫಲರಾದರು. ಕರ್ನಾಟಕದ ಕೆ.ಗೌತಮ್, ಅಭಿಮನ್ಯು ಮಿಥುನ್ ಮತ್ತು ಆರ್.ವಿನಯ್'ಕುಮಾರ್ ಅವರ ಮಾರಕ ಬೌಲಿಂಗ್ ದಾಳಿಗೆ ಅಸ್ಸಾಮ್ ಪಡೆ ತತ್ತರಿಸಿತು. ಮೊದಲ ಇನ್ನಿಂಗ್ಸಲ್ಲಿ ಭರ್ಜರಿ ಶತಕ ಭಾರಿಸಿದ್ದ ಆಫ್'ಸ್ಪಿನ್ನರ್ ಗೌತಮ್ ಒಟ್ಟಾರೆ 7 ವಿಕೆಟ್ ಪಡೆದು ಆಲ್'ರೌಂಡ್ ಪ್ರದರ್ಶನದೊಂದಿಗೆ ಗೆಲುವಿನ ರೂವಾರಿಯಾದರು.

ಇದಕ್ಕೆ ಮೊದಲು ಅಸ್ಸಾಮ್ ತಂಡದ ಮೊದಲ ಇನ್ನಿಂಗ್ಸ್ 145 ರನ್'ಗೆ ಮುಕ್ತಾಯಗೊಂಡಿತು. ಆ ನಂತರ ಕರ್ನಾಟಕ ತಂಡ 7 ವಿಕೆಟ್ ನಷ್ಟಕ್ಕೆ 469 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಆರ್.ಸಮರ್ಥ್ ಮತ್ತು ಕೆ.ಗೌತಮ್ ಅಮೋಘ ಶತಕ ಭಾರಿಸಿದರು. ಶ್ರೇಯಸ್ ಗೋಪಾಲ್ ಮತ್ತು ಸ್ಟುವರ್ಟ್ ಬಿನ್ನಿ ಕೂಡ ಉತ್ತಮ ಪ್ರದರ್ಶನ ನೀಡಿದರು. ಒಟ್ಟಾರೆ 324 ರನ್ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆಡಿದ ಪ್ರವಾಸಿ ಅಸ್ಸಾಮ್ ತಂಡ ಸ್ವಲ್ಪವೂ ಪ್ರತಿರೋಧವಿಲ್ಲದೇ ಹೀನಾಯ ಸೋಲುಂಡಿತು.

ಕರ್ನಾಟಕ ತಂಡಕ್ಕೆ ಇನ್ನಿಂಗ್ಸ್ ಗೆಲುವು ದಕ್ಕಿದ್ದರಿಂದ 1 ಬೋನಸ್ ಅಂಕ ಸೇರಿದಂತೆ ಒಟ್ಟು 7 ಪಾಯಿಂಟ್ ಪ್ರಾಪ್ತವಾಯಿತು. ಎ ಗುಂಪಿನ ಅಂಕಪಟ್ಟಿಯಲ್ಲಿ ಕರ್ನಾಟಕ 2ನೇ ಸ್ಥಾನಕ್ಕೆ ಜಂಪ್ ಆಯಿತು.

ರಾಜ್ಯ ತಂಡ ತನ್ನ ಮುಂದಿನ ಪಂದ್ಯವನ್ನು ಅ.24ರಿಂದ ಹೈದರಾಬಾದ್ ವಿರುದ್ಧ ಆಡಲಿದೆ. ಶಿವಮೊಗ್ಗದಲ್ಲಿ ಆ ಪಂದ್ಯ ನಡೆಯಲಿದೆ.

ಅಸ್ಸಾಮ್ ಮೊದಲ ಇನ್ನಿಂಗ್ಸ್ 59.1 ಓವರ್ 145 ರನ್ ಆಲೌಟ್
(ಗೋಕುಲ್ ಶರ್ಮಾ 55, ರಿಶವ್ ದಾಸ್ 26 ರನ್ - ಕೆ.ಗೌತಮ್ 20/4, ಶ್ರೇಯಸ್ ಗೋಪಾಲ್ 43/3, ವಿನಯ್'ಕುಮಾರ್ 17/2)

ಕರ್ನಾಟಕ ಮೊದಲ ಇನ್ನಿಂಗ್ಸ್ 126.4 ಓವರ್ 469/7(ಡಿಕ್ಲೇರ್)
(ಕೆ.ಗೌತಮ್ 149, ಆರ್.ಸಮರ್ಥ್ 123, ಶ್ರೇಯಸ್ ಗೋಪಾಲ್ 50, ಸ್ಟುವರ್ಟ್ ಬಿನ್ನಿ 41, ಮಯಂಕ್ ಅಗರ್ವಾಲ್ 31, ವಿನಯ್'ಕುಮಾರ್ 27 ರನ್ - ಅರುಪ್ ದಾಸ್ 113/4, ಎಸ್.ಪುರಕಾಯಸ್ಥ 80/3)

ಅಸ್ಸಾಮ್ ಎರಡನೇ ಇನ್ನಿಂಗ್ಸ್ 73.1 ಓವರ್ 203 ರನ್ ಆಲೌಟ್
(ಗೋಕುಲ್ ಶರ್ಮಾ 66, ಶಿಬಶಂಕರ್ ರಾಯ್ 44, ರಿಶವ್ ದಾಸ್ 21 ರನ್ - ಆರ್.ವಿನಯ್'ಕುಮಾರ್ 31/4, ಕೆ.ಗೌತಮ್ 39/3, ಅಭಿಮನ್ಯು ಮಿಥುನ್ 47/3)

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಜು ಸ್ಯಾಮ್ಸನ್ ನನ್ನ ಅಣ್ಣನಿದ್ದಂತೆ; ಇಬ್ಬರ ಪೈಪೋಟಿ ಬಗ್ಗೆ ಮನಬಿಚ್ಚಿ ಮಾತಾಡಿದ ಜಿತೇಶ್ ಶರ್ಮಾ
ದಕ್ಷಿಣ ಆಫ್ರಿಕಾ ಎದುರು ಗೆದ್ದರೂ ನಿಂತಿಲ್ಲ ಚಿಂತೆ: 2ನೇ ಟಿ20ಗೆ ಭಾರತ ತಂಡದಲ್ಲಿ ಬದಲಾವಣೆ?