ಬಿಸಿಸಿಐ-ಆದಿತ್ಯ ವರ್ಮಾ ಜಟಾಪಟಿ- ಮಗನಿಗೆ ಅಮಾನತು ಶಿಕ್ಷೆ!

Published : Sep 05, 2018, 08:49 PM ISTUpdated : Sep 09, 2018, 09:15 PM IST
ಬಿಸಿಸಿಐ-ಆದಿತ್ಯ ವರ್ಮಾ ಜಟಾಪಟಿ- ಮಗನಿಗೆ ಅಮಾನತು ಶಿಕ್ಷೆ!

ಸಾರಾಂಶ

ಬಿಸಿಸಿಐ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಬಿಹಾರ್ ಕ್ರಿಕೆಟ್ ಸಂಸ್ಥೆ ಕಾರ್ಯದರ್ಶಿ ಆದಿತ್ಯ ವರ್ಮಾಗೆ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ಮಾ ಹಾಗೂ ಬಿಸಿಸಿಐ ನಡುವಿನ ಜಗಳದಲ್ಲಿ ವರ್ಮಾ ಪುತ್ರ ಅಮಾನತ್ತಾಗಿದ್ದಾರೆ. ಇಲ್ಲಿದೆ ಜಟಾಪಟಿ ವಿವರ.

ಬಿಹಾರ್(ಸೆ.05): ಬಿಸಿಸಿಐ ಹಾಗೂ ಬಿಹಾರ್ ಕ್ರಿಕೆಟ್ ಸಂಸ್ಥೆಯ ಸೆಕ್ರೆಟರಿ ಅದಿತ್ಯ ವರ್ಮಾ ಜಗಳ ಇಂದು ನಿನ್ನೆಯದಲ್ಲ. ಐಪಿಎಲ್ ಟೂರ್ನಿಯ ಅವ್ಯವಹಾರ, ಫಿಕ್ಸಿಂಗ್ ಹಾಗೂ ಬಿಸಿಸಿಐ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಅದಿತ್ಯ ವರ್ಮಾ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶ್ರೀನಿವಾಸನ್ ಸೇರಿದಂತೆ ಭಾರತೀಯ ಕ್ರಿಕೆಟ್ ಸಂಸ್ಥೆಯನ್ನ ಎದುರುಹಾಕಿಕೊಂಡು ಹೋರಾಟ ನಡೆಸಿದ್ದ ಅದಿತ್ಯ ವರ್ಮಾಗೆ ಬಿಸಿಸಿಐ ಶಾಕ್ ನೀಡಿದೆ. ಎನ್ಒಸಿ ಇಲ್ಲದೆ ಇತರ ರಾಜ್ಯದ ಅನಧೀಕೃತ ಲೀಗ್ ಆಡಿದ ಕಾರಣಕ್ಕೆ ಅದಿತ್ಯ ವರ್ಮಾ ಪುತ್ರ ಲಖನ್ ರಾಜಾಗೆ 2 ವರ್ಷಗಳ ಅಮಾನತು ಶಿಕ್ಷೆ ವಿಧಿಸಿದೆ.

ಆದಿತ್ಯ ವರ್ಮಾ ಪುತ್ರ ಲಖನ್ ರಾಜ ಬಿಸಿಸಿಐ ನಿಯಮ ಉಲ್ಲಂಘಿಸಿದ್ದಾರೆ. ಬಿಹಾರ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಗೋಪಾಲ್ ಬೊಹ್ರಾ ಎಚ್ಚರಿಕೆಯನ್ನೂ ನೀಡದೇ ಬರೋಬ್ಬರಿ 2 ವರ್ಷಗಳ ಅಮಾನತು ಶಿಕ್ಷೆ ವಿಧಿಸಿದ್ದಾರೆ.

ಅಮಾನತು ವಿರುದ್ಧ ಅದಿತ್ಯ ವರ್ಮಾ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಶೋಕಾಸ್ ನೊಟೀಸ್ ನೀಡದೇ ನೇರವಾಗಿ ಅಮಾನತು ಶಿಕ್ಷೆ ನೀಡಿದ್ದು ಸರಿಯಲ್ಲ. ಉದ್ದೇಶ ಪೂರ್ವಕವಾಗಿ ನನ್ನ ಮಗನ ಭವಿಷ್ಯ ಹಾಳು ಮಾಡುತ್ತಿದ್ದಾರೆ ಎಂದು ವರ್ಮಾ ದೂರು ದಾಖಲಿಸಿದ್ದಾರೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

3 ಗಂಟೆ ಕಾದರೂ ಕರಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು
Ind vs SA: ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ಗಿಲ್ ಔಟ್, ಯಾರಿಗೆ ಸಿಗತ್ತೆ ಚಾನ್ಸ್?