IPL ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ: ಬದ್ಧವೈರಿಗಳ ಕಾದಾಟಕ್ಕೆ ವಾಂಖೇಡೆ ಮೈದಾನ ರೆಡಿ

Published : Apr 07, 2018, 03:12 PM ISTUpdated : Apr 14, 2018, 01:12 PM IST
IPL ಉದ್ಘಾಟನಾ ಪಂದ್ಯಕ್ಕೆ ಕ್ಷಣಗಣನೆ: ಬದ್ಧವೈರಿಗಳ ಕಾದಾಟಕ್ಕೆ ವಾಂಖೇಡೆ ಮೈದಾನ ರೆಡಿ

ಸಾರಾಂಶ

ಇಲ್ಲಿನ ವಾಂಖೇಡೆ ಕ್ರೀಡಾಂಗಣ ಈ ಆವೃತ್ತಿಯ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಅದ್ಧೂರಿ ಉದ್ಘಾಟನಾ ಸಮಾರಂಭದ ಬಳಿಕ ನಡೆಯಲಿರುವ ಪಂದ್ಯ, ಕ್ರಿಕೆಟ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಸಿಎಸ್‌'ಕೆ ಹಾಗೂ ಮುಂಬೈ ಬದ್ಧ ವೈರಿಗಳಾಗಿದ್ದು ಶುಭಾರಂಭದ ನಿರೀಕ್ಷೆಯಲ್ಲಿವೆ.

ಮುಂಬೈ(ಏ.07): 3 ಬಾರಿ, ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಐಪಿಎಲ್ 11ನೇ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ 2 ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಸವಾಲನ್ನು ಎದುರಿಸಲಿದೆ.

ಇಲ್ಲಿನ ವಾಂಖೇಡೆ ಕ್ರೀಡಾಂಗಣ ಈ ಆವೃತ್ತಿಯ ಮೊದಲ ಪಂದ್ಯಕ್ಕೆ ಆತಿಥ್ಯ ವಹಿಸಲಿದೆ. ಅದ್ಧೂರಿ ಉದ್ಘಾಟನಾ ಸಮಾರಂಭದ ಬಳಿಕ ನಡೆಯಲಿರುವ ಪಂದ್ಯ, ಕ್ರಿಕೆಟ್ ಅಭಿಮಾನಿಗಳ ಕುತೂಹಲ ಕೆರಳಿಸಿದೆ. ಸಿಎಸ್‌'ಕೆ ಹಾಗೂ ಮುಂಬೈ ಬದ್ಧ ವೈರಿಗಳಾಗಿದ್ದು ಶುಭಾರಂಭದ ನಿರೀಕ್ಷೆಯಲ್ಲಿವೆ.

10 ವರ್ಷಗಳ ಮುಂಬೈ ತಂಡದಲ್ಲಿದ್ದ ಹರ್ಭಜನ್ ಸಿಂಗ್, ಈ ಬಾರಿ ಚೆನ್ನೈ ಜೆರ್ಸಿ ತೊಟ್ಟು ಆಡಲಿದ್ದಾರೆ. ರೋಹಿತ್ ಶರ್ಮಾ ಮುಂಬೈ ತಂಡವನ್ನು ಮುನ್ನಡೆಸುವ ಜತೆಗೆ ಬ್ಯಾಟಿಂಗ್‌'ನಲ್ಲೂ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಅವರಿಗೆ ಇಶಾನ್ ಕಿಶನ್, ಎವಿನ್ ಲೀವಿಸ್, ಪೊಲ್ಲಾರ್ಡ್, ಸೂರ್ಯಕುಮಾರ್, ಸಿದ್ಧೇಶ್ ಲಾಡ್‌ರಿಂದ ಬೆಂಬಲ ದೊರೆಯಲಿದೆ. ಪಾಂಡ್ಯ ಸಹೋದರರು (ಹಾರ್ದಿಕ್, ಕೃನಾಲ್) ಪ್ರಮುಖ ಪಾತ್ರ ವಹಿಸಬೇಕಿದೆ. ಹರ್ಭಜನ್ ಮಾತ್ರವಲ್ಲದೇ ಮುಂಬೈಗೆ ಮಾಲಿಂಗ ಸೇವೆಯೂ ಲಭ್ಯವಿಲ್ಲ. ಹೀಗಾಗಿ ಬುಮ್ರಾ ಮೇಲೆ ಒತ್ತಡ ಹೆಚ್ಚಿದೆ. ಅವರಿಗೆ ಮುಸ್ತಫಿಜುರ್ ಹಾಗೂ ಪ್ಯಾಟ್ ಕಮಿನ್ಸ್‌ರಿಂದ ಬೆಂಬಲದ ಅಗತ್ಯವಿದೆ. ಅನನುಭವಿ ಸ್ಪಿನ್ನರ್‌ಗಳು ಮುಂಬೈ ದೌರ್ಬಲ್ಯ.

ಸಿಎಸ್‌ಕೆಗೆ ತಾರಾ ಬಲ: ಮತ್ತೊಂದೆಡೆ ಧೋನಿ ಜತೆ ರೈನಾ, ಜಡೇಜಾ, ಬ್ರಾವೋ, ವಾಟ್ಸನ್, ಡುಪ್ಲೆಸಿ, ಮುರಳಿ ವಿಜಯ್, ರಾಯುಡುರಂತಹ ತಾರಾ ಆಟಗಾರರ ಬಲ ಚೆನ್ನೈಗಿದೆ. ಉಪಯುಕ್ತ ಆಲ್ರೌಂಡರ್ ಕೇದಾರ್ ಜಾಧವ್, ಮುಂಬೈ ವೇಗಿ ಶಾರ್ದೂಲ್ ಠಾಕೂರ್ ವಾಂಖೆಡೆ ಪಿಚ್‌ಗೆ ಹೇಳಿ ಮಾಡಿಸಿದ ಬೌಲರ್‌ಗಳಾಗಿದ್ದಾರೆ.

ಸ್ಥಳ: ಮುಂಬೈ

ಸಮಯ: ಸಂಜೆ.08ಕ್ಕೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಪ್‌ ತುಳಿತ ತನಿಖಾ ವರದಿ ಹೈಕೋರ್ಟ್‌ ಪರಾಮರ್ಶೆಗೆ
ದೇಶದ ಅಗ್ರ ಟಿ20 ಟೂರ್ನಿಯಲ್ಲೇ ಮ್ಯಾಚ್‌ ಫಿಕ್ಸಿಂಗ್‌, ನಾಲ್ವರು ಕ್ರಿಕೆಟಿಗರ ಸಸ್ಪೆಂಡ್‌ ಮಾಡಿ ತನಿಖೆಗೆ ಆದೇಶಿಸಿದ ಬಿಸಿಸಿಐ!