
ಬೆಂಗಳೂರು: ಭಾರತದ ಅಂಡರ್-17 ಫುಟ್ಬಾಲ್ ತಂಡವು ಅತಿದೊಡ್ಡ ಗೆಲುವು ಸಾಧಿಸಿದೆ. ವಿಶ್ವ ಫುಟ್ಬಾಲ್'ನ ದೈತ್ಯ ರಾಷ್ಟ್ರವೆನಿಸಿದ ಇಟಲಿ ಅಂಡರ್-17 ತಂಡದ ವಿರುದ್ಧ ಭಾರತದ ಕಿರಿಯರು 2-0 ಗೋಲುಗಳಿಂದ ಜಯಭೇರಿ ಭಾರಿಸಿದ್ದಾರೆ. ಅಂಡರ್-17 ವಿಶ್ವಕಪ್'ಗೆ ಅಣಿಯಾಗುತ್ತಿರುವ ಭಾರತದ ಹುಡುಗರಿಗೆ ಈ ಜಯ ಹೊಸ ಹುಮ್ಮಸ್ಸು ಮೂಡಿಸಲಿದೆ.
ನಿನ್ನೆ ಸಂಜೆ ಇಟಲಿಯ ಅರಿಜೋ ನಗರದಲ್ಲಿ ನಡೆದ ಪಂದ್ಯದಲ್ಲಿ ಭಾರತದ ಪರ ಅಭಿಜಿತ್ ಸರ್ಕಾರ್(31ನೇ ನಿಮಿಷ) ಮತ್ತು ರಾಹುಲ್ ಪ್ರವೀಣ್ (80ನೇ ನಿಮಿಷ) ಗೋಲು ಗಳಿಸಿದರು. ಈ ಪಂದ್ಯದಲ್ಲಿ ಭಾರತೀಯರೇ ಹೆಚ್ಚು ಮೇಲುಗೈ ಸಾಧಿಸಿದ್ದು ಗಮನಾರ್ಹ. 8ನೇ ನಿಮಿಷದಲ್ಲಿ ಕೋಮಲ್ ತಾಟಲ್, 13ನೇ ನಿಮಿಷದಲ್ಲಿ ಅನಿಕೇತ್, 75ನೇ ನಿಮಿಷದಲ್ಲಿ ರಾಹುಲ್ ಪ್ರವೀಣ್ ಗೋಲು ಗಳಿಸುವ ಅವಕಾಶದಿಂದ ಸ್ವಲ್ಪದರಲ್ಲೇ ವಂಚಿತರಾಗಿದ್ದರು. ಇಲ್ಲದಿದ್ದರೆ ಭಾರತದ ಹುಡುಗರು ಇನ್ನಷ್ಟು ಗೋಲುಗಳ ಅಂತರದಿಂದ ಗೆಲುವು ಸಾಧಿಸುವ ಸಾಧ್ಯತೆ ಇತ್ತು.
ಈ ಬಾರಿಯ ಅಂಡರ್-17 ವಿಶ್ವಕಪ್ ಭಾರತದಲ್ಲೇ ನಡೆಯಲಿರುವುದರಿಂದ ಭಾರತ ತಂಡ ನೇರವಾಗಿ ವಿಶ್ವಕಪ್'ಗೆ ಕ್ವಾಲಿಫೈ ಆಗಿದೆ. 2013ರಿಂದಲೇ ವಿಶ್ವಕಪ್'ಗಾಗಿ ತಂಡವನ್ನು ಸಜ್ಜುಗೊಳಿಸುತ್ತಿರುವ ಭಾರತವು ಈಗಾಗಲೇ ಸಾಕಷ್ಟು ಪ್ರಯೋಗಗಳನ್ನು ಮಾಡಿ ತಂಡವನ್ನು ಅಣಿಗೊಳಿಸಿದೆ. ಹಲವು ಬಾರಿ ವಿದೇಶೀ ಪ್ರವಾಸ ಮಾಡಿ ಬಲಿಷ್ಠ ರಾಷ್ಟ್ರಗಳೊಂದಿಗೆ ಪಂದ್ಯವನ್ನು ಆಯೋಜಿಸುತ್ತಿದೆ. ಅಕ್ಟೋಬರ್ 6ರಿಂದ 28ರವರೆಗೆ ನಡೆಯಲಿರುವ ಈ ಕಿರಿಯರ ವಿಶ್ವಕಪ್'ನಲ್ಲಿ ಭಾರತ ಪಾಲ್ಗೊಳ್ಳುತ್ತಿರುವುದು ಇದೇ ಮೊದಲಾಗಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.