
ಗಾಲೆ(ಜು.29): ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು 4 ದಿನಗಳಲ್ಲಿ ಮುಕ್ತಾಯಗೊಳಿಸಿ 304 ರನ್'ಗಳಿಂದ ಮಣಿಸಿದೆ. ಈ ಮೂಲಕ 3 ಟೆಸ್ಟ್'ಗಳ ಸರಣಿಯನ್ನು 1-0 ರಿಂದ ಮುನ್ನಡೆ ಸಾದಿಸಿದೆ.
ಟೀಂ ಇಂಡಿಯಾ ನೀಡಿದ್ದ 550 ರನ್'ಗಳ ಗುರಿಯನ್ನು 2ನೇ ಇನ್ನಿಂಗ್ಸ್'ನಲ್ಲಿ ಬೆನ್ನಟ್ಟಿದ ಲಂಕಾ ತಂಡದವರು 245 ರನ್'ಗಳಿಗೆ ತನ್ನೆಲ್ಲ ವಿಕೇಟ್ ಕಳೆದುಕೊಂಡು 304 ರನ್ನಗಳಿಂದ ಸೋಲನ್ನೊಪ್ಪಿಕೊಂಡರು.
ಒಂದು ಹಂತದಲ್ಲಿ ಆರಂಭಿಕ ಬ್ಯಾಟ್ಸ್'ಮೆನ್ ಕರುಣಾರತ್ನೆ(97:208 ಎಸೆತ,9 ಬೌಡರಿ) ಹಾಗೂ ದಿಕ್'ವೆಲ್ಲಾ(67: 94 ಎಸೆತ, 10 ಬೌಂಡರಿ) ಪ್ರತಿರೋಧ ತೋರಿದರಾದರೂ ಸ್ಪಿನ್ನರ್ ಅಶ್ವಿನ್' ಮೋಡಿಗೆ ವಿಕೇಟ್ ವಿಕೇಟ್ ಒಪ್ಪಿಸಿ ಪೆವಿಲಿಯನ್'ಗೆ ತೆರಳಿದರು. ಮಂಡೀಸ್(36) ಹಾಗೂ ಪೆರೇರಾ(21) ರನ್'ಗಳನ್ನು ಗಳಿಸಿದ್ದನ್ನು ಹೊರತು ಪಡಿಸಿದರೆ ಉಳಿದ ಬ್ಯಾಟ್ಸ್'ಮೆನ್'ಗಳ ಭಾರತದ ಬೌಲರ್'ಗಳಿಗೆ ಬಹುಬೇಗನೆ ವಿಕೇಟ್ ಒಪ್ಪಿಸಿದರು.
ಗಾಯದ ಸಮಸ್ಯೆಯಿಂದ 76.5 ಓವರ್'ಗಳಲ್ಲಿ ತಂಡ 8 ವಿಕೇಟ್ ನಷ್ಟಕ್ಕೆ 245 ಗಳಿಸಿದ್ದಾಗ ಬೌಲರ್'ಗಳಾದ ಹೆರಾತ್ ಹಾಗೂ ಗುಣರತ್ನೆ ಬ್ಯಾಟಿಂಗ್ ಮಾಡದ ಕಾರಣ ಸೋಲನ್ನೊಪ್ಪಿಕೊಳ್ಳಬೇಕಾಯಿತು. ಭಾರತದ ಪರ ಸ್ಪಿನ್ನರ್'ಗಳಾದ ರವೀಂದ್ರ ಜಡೇಜ 71/3, ಹಾಗೂ ಆರ್.ಅಶ್ವಿನ್ 65/3 ವಿಕೇಟ್ ಗಳಿಸಿ ಯಶಸ್ವಿ ಬೌಲರ್ ಎನಿಸಿದರು.
ಶತಕದ ಮಿಂಚು ಹರಿಸಿದ ಕೊಹ್ಲಿ
ಎರಡನೇ ಇನ್ನಿಂಗ್ಸ್'ನಲ್ಲಿ ನಾಯಕ ವಿರಾಟ್ ಕೊಹ್ಲಿ 136 ಎಸೆತಗಳಲ್ಲಿ 5 ಸಿಕ್ಸ್'ರ್ ಹಾಗೂ 1 ಸಿಕ್ಸ್'ರ್'ನಿಂದ 103 ಹಾಗೂ ಅಭಿನವ್ ಮುಕುಂದ್ 116 ಎಸೆತಗಳಲ್ಲಿ 8 ಬೌಂಡರಿಗಳಿಂದ 81 ರನ್ ಗಳಿಸುವುದರೊಂದಿಗೆ ತಂಡ 3 ವಿಕೇಟ್ ನಷ್ಟಕ್ಕೆ 240 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡು ಶ್ರೀಲಂಕಾಕ್ಕೆ 550 ರನ್ ಟಾರ್ಗೆಟ್ ನೀಡಿದರು. ಮೊದಲ ಇನ್ನಿಂಗ್ಸ್'ನಲ್ಲಿ ಭರ್ಜರಿ 190 ರನ್ ಗಳಿಸಿದ್ದ ಶಿಖರ್ ಧವನ್ ಪಂದ್ಯ ಶ್ರೇಷ್ಠರಾದರು.
ಸ್ಕೋರ್
ಭಾರತ: 600 ಮತ್ತು 240/3 ಡಿಕ್ಲೇರ್ಡ್
ಶ್ರೀಲಂಕಾ: 291 ಹಾಗೂ 245
ಫಲಿತಾಂಶ: ಭಾರತಕ್ಕೆ 304 ರನ್'ಗಳ ಜಯ
ಸರಣಿ: 1-0 ಮುನ್ನಡೆ
ಪಂದ್ಯಶ್ರೇಷ್ಠ: ಶಿಖರ್ ಧವನ್
--
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.