
ಮುಂಬೈ(ಮೇ.12): ಭಾರತದ ತಂಡದ ಹಿರಿಯ ಅನುಭವಿ ಆಫ್'ಸ್ಪಿನ್ನರ್ ಹರ್ಭಜನ ಸಿಂಗ್ ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ರೋಚಕ ಸೋಲಿನ ಬಳಿಕ ವಾಂಖೆಡೆ ಪಿಚ್ ಗುಣಮಟ್ಟದ ಬಗ್ಗೆ ಹರಿಹಾಯ್ದಿದ್ದಾರೆ.
40 ಓವರ್'ಗಳಲ್ಲಿ 453ರನ್'ಗಳ ಹೊಳೆ ಹರಿಸಿದ ಮುಂಬೈ ಮತ್ತು ಪಂಜಾಬ್ ಬ್ಯಾಟ್ಸ್'ಮನ್'ಗಳ ಉಭಯ ತಂಡಗಳ ಬೌಲರ್'ಗಳನ್ನು ಮನಬಂದಂತೆ ದಂಡಿಸಿದರು.
ಅದರಲ್ಲೂ ಮುಂಬೈ ಇಂಡಿಯನ್ಸ್ ತಂಡದ ಅನುಭವಿ ಆಟಗಾರ ಹರ್ಭಜನ್ ಸಿಂಗ್ ಕೇವಲ 3 ಓವರ್'ಗಳಲ್ಲಿ 15ರ ಸರಾಸರಿಯಂತೆ ಎದುರಾಳಿ ತಂಡಕ್ಕೆ 45ರನ್ ಬಿಟ್ಟುಕೊಟ್ಟರು. ಹೀಗಾಗಿ ಪಿಚ್ ನಿರ್ಮಾಣ ಮಾಡಿದ ಕ್ಯೂರೇಟರ್'ನ್ನು ಭಜ್ಜಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಭಜ್ಜಿ ಏನಂದ್ರೂ ಅಂತ ನೀವೇ ಒಮ್ಮೆ ನೋಡಿ...
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.