ಬ್ರೇಕಿಂಗ್ ನ್ಯೂಸ್..! ಗೌತಮ್ ಗಂಭೀರ್ ಸಸ್ಪೆಂಡ್..!

Published : Jun 17, 2017, 08:47 PM ISTUpdated : Apr 11, 2018, 12:57 PM IST
ಬ್ರೇಕಿಂಗ್ ನ್ಯೂಸ್..! ಗೌತಮ್ ಗಂಭೀರ್ ಸಸ್ಪೆಂಡ್..!

ಸಾರಾಂಶ

ನಿತೀಶ್ ರಾಣಾ, ಉನ್ಮುಕ್ತ್ ಚಾಂದ್ ಅವರಂತಹ ಯುವ ಪ್ರತಿಭೆಗಳು ಭಾಸ್ಕರ್ ಗರಡಿಯಲ್ಲಿ ಅಭದ್ರತೆಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಗಂಭೀರ್ ಗುರುತರ ಆರೋಪ ಮಾಡಿದ್ದರು.

ನವದೆಹಲಿ(ಜೂ.17): ಅನುಭವಿ ಕ್ರಿಕೆಟಿಗ ಗೌತಮ್ ಗಂಭೀರ್ ಅಸಭ್ಯ ವರ್ತನೆ ತೋರಿದ ಹಿನ್ನೆಲೆಯಲ್ಲಿ ಪ್ರಥಮ ದರ್ಜೆ ಕ್ರಿಕೆಟ್'ನ ನಾಲ್ಕು ಪಂದ್ಯಗಳಿಂದ ಅಮಾನತು ಮಾಡಲಾಗಿದೆ.

ದೆಹಲಿ ರಣಜಿ ತಂಡದ ಕೋಚ್ ಕೆ.ಪಿ.ಭಾಸ್ಕರ್ ಯುವ ಪ್ರತಿಭೆಗಳೊಂದಿಗೆ ಆಟವಾಡುತ್ತಿದ್ದಾರೆ ಎಂದು ವಿಜಯ್ ಹಜಾರೆ ಟೂರ್ನಿ ವೇಳೆ ಗಂಭೀರ್ ಆರೋಪಿಸಿದ್ದರು. ನಿತೀಶ್ ರಾಣಾ, ಉನ್ಮುಕ್ತ್ ಚಾಂದ್ ಅವರಂತಹ ಯುವ ಪ್ರತಿಭೆಗಳು ಭಾಸ್ಕರ್ ಗರಡಿಯಲ್ಲಿ ಅಭದ್ರತೆಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಗಂಭೀರ್ ಗುರುತರ ಆರೋಪ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಕ್ರಿಕೆಟ್ ಸಂಸ್ಥೆ ಈ ಪ್ರಕರಣದ ವಿಚಾರಣೆಗಾಗಿ ಮಾಜಿ ಕ್ರಿಕೆಟಿಗ ಮದನ್‌ಲಾಲ್ ನೇತೃತ್ವದಲ್ಲಿ ತನಿಖಾ ಸಮಿತಿ ನೇಮಿಸಿತ್ತು.

ಈ ಸಂಬಂಧ ತನಿಖೆ ನಡೆಸಿದ ಸಮಿತಿ, ಈ ಪ್ರಕರಣದಲ್ಲಿ ಗಂಭೀರ್ ಅವರು ತಪ್ಪು ಎಸಗಿರುವುದು ಸಾಬೀತಾಗಿದೆ. ಅಲ್ಲದೇ ಗಂಭೀರ್ ನಡವಳಿಕೆ ಅಸಂಜಮಸ ಎಂದು ಪರಿಗಣಿಸಿ ಗಂಭೀರ್ ಅವರನ್ನು 4 ಪಂದ್ಯಗಳಿಂದ ಹೊರಗಿಡಲಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಂಡರ್ 19 ಏಷ್ಯಾಕಪ್ ಫೈನಲ್: ಪಾಕ್ ಎದುರು ಮುಗ್ಗರಿಸಿದ ಭಾರತ; ವೈಭವ್ ಸೂರ್ಯವಂಶಿ ಕನಸು ನುಚ್ಚುನೂರು!
2026ರ ಟಿ20 ವಿಶ್ವಕಪ್‌ಗೆ ಭಾರತ ತಂಡದಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 7 ಬದಲಾವಣೆ!