
ಲಂಡನ್(ಜು.18): ಇಂಗ್ಲೆಂಡ್ ವಿರುದ್ಧದ ಏಕದಿನ ಸೋಲಿನ ಬಳಿಕ ಟೀಂ ಇಂಡಿಯಾ ವಿರುದ್ಧ ಆಕ್ರೋಷ ಹೆಚ್ಚಾಗಿದೆ. ಪ್ರತಿಭಾನ್ವಿತ ಹಾಗೂ ಸಮರ್ಥ ಆಟಗಾರರನ್ನ ಆಯ್ಕೆ ಮಾಡದ ಟೀಂ ಮ್ಯಾನೇಜ್ಮೆಂಟ್ ವಿರುದ್ಧ ಇದೀಗ ಮಾಜಿ ನಾಯಕ ಸೌರವ್ ಗಂಗೂಲಿ ಗರಂ ಆಗಿದ್ದಾರೆ.
ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ವೈಫಲ್ಯ ಅನುಭವಿಸಿದಾಗ ಪರಿಸ್ಥಿತಿಯನ್ನ ನಿಭಾಯಿಸಿ ದಿಟ್ಟ ಹೋರಾಟ ನೀಡಬಲ್ಲ ಕೆಎಲ್ ರಾಹುಲ್ ಹಾಗೂ ಅಜಿಂಕ್ಯ ರಹಾನೆಯನ್ನ ಕೈಬಿಟ್ಟಿರೋದಕ್ಕೆ ಗಂಗೂಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಎಲ್ ರಾಹುಲ್ ಹಾಗೂ ಅಜಿಂಕ್ಯ ರಹಾನೆ ಇಬ್ಬರೂ ಕೂಡ ಕ್ಲಾಸ್ ಬ್ಯಾಟ್ಸ್ಮನ್. ಇವರಿಬ್ಬರೂ ಕೂಡ ಇಂಗ್ಲೆಂಡ್ ಕಂಡೀಷನ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಇಷ್ಟಾದರೂ ರಾಹಲ್ ಹಾಗೂ ರಹಾನೆಗೆ ಅವಕಾಶ ನೀಡದಿರೋದು ಆಶ್ಚರ್ಯ ತಂದಿದೆ ಎಂದು ಗಂಗೂಲಿ, ಸೋನಿ ಸಿಕ್ಸ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ರಾಹುಲ್ ಹಾಗಾ ರಹಾನೆಗೆ ಕನಿಷ್ಠ 15 ಪಂದ್ಯಗಳಲ್ಲಿ ಅವಕಾಶ ನೀಡಬೇಕು. ಈ ಮೂಲಕ ಆಟಗಾರರ ಫಾರ್ಮ್ ಅಳೆಯಲು ಸಾಧ್ಯ. ಸೆಂಚುರಿ ಸಿಡಿಸಿದ ಮುಂದಿನ ಪಂದ್ಯದಲ್ಲೇ ಡ್ರಾಪ್ ಮಾಡಿರೋದು ಸಮಂಜಸವಲ್ಲ ಎಂದು ಗಂಗೂಲಿ ಹೇಳಿದ್ದಾರೆ.
ಎಂ ಎಸ್ ಧೋನಿ ತಮ್ಮ ಫಾರ್ಮ್ ಕಳೆದುಕೊಂಡಿದ್ದಾರೆ. 2019ರ ವಿಶ್ವಕಪ್ ಟೂರ್ನಿಯಲ್ಲಿ ಧೋನಿ ಸ್ಥಾನ ಪಡೆಯಬೇಕಾದರೆ, ಮತ್ತೆ ಅದ್ಬುತ ಪ್ರದರ್ಶನ ನೀಡಲೇಬೇಕು. ಆದರೆ ಸದ್ಯ ಧೋನಿ ಪ್ರದರ್ಶನ ನಿಆತಂಕ ತರಿಸುತ್ತಿದೆ ಎಂದು ಗಂಗೂಲಿ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.