
ಕೊಚ್ಚಿ(ಆ.15): ಕ್ರಿಕೆಟಿಗ ಸಂಜು ಸಾಮ್ಸನ್ ಸೇರಿದಂತೆ ಕೇರಳ ತಂಡದ 13 ಕ್ರಿಕೆಟಿಗರಿಗೆ ಕೇರಳಾ ಕ್ರಿಕೆಟ್ ಸಂಸ್ಥೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. ನಿಮಯ ಮೀರಿ ವರ್ತಿಸಿದ ಕಾರಣಕ್ಕಾಗಿ ಕೇರಳಾ ಕ್ರಿಕೆಟಿಗರು ಇದೀಗ ಸಂಕಷ್ಟ ಅನುಭವಿಸುವಂತಾಗಿದೆ.
ಕೇರಳ ನಾಯಕ ಸಚಿನ್ ಬೇಬಿ ವಿರುದ್ಧ ಸಂಜು ಸಾಮ್ಸನ್ ಸೇರಿದಂತೆ 13 ಕ್ರಿಕೆಟಿಗರು ಆಧಾರ ರಹಿತ ದೂರು ನೀಡಿದ್ದರು. ಸಚಿನ್ ಬೇಬಿ ತಂಡದ ಏಕತೆ ಒಡೆಯುತ್ತಿದ್ದಾರೆ. ಸಚಿನ್ ಬೇಬಿಯಲ್ಲಿ ನಾಯಕತ್ವ ಗುಣವಿಲ್ಲ ಹಾಗೂ ಸ್ವಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಕೇರಳಾ ಕ್ರಿಕೆಟ್ ಸಂಸ್ಥೆಗೆ ದೂರು ನೀಡಿದ್ದರು.
ದೂರಿನ ಆಧಾರದಲ್ಲಿ ಕೇರಳಾ ಕ್ರಿಕೆಟ್ ಸಂಸ್ಥೆ ತನಿಖೆ ನಡೆಸಿತ್ತು. ಆದರೆ ತಂಡಡ ಆಟಗಾರರ ವಿಚಾರಣೆ ಕೂಡ ನಡೆಸಿತ್ತು. ತನಿಖೆಯ ಪ್ರಕಾರ ಸಚಿನ್ ಬೇಬಿ ವಿರುದ್ಧ ನೀಡಿರುವ ದೂರ ಆಧಾರ ರಹಿತ ಎಂದು ಬಯಲಾಗಿದೆ. ಹೀಗಾಗಿ ಕೇರಳಾ ಕ್ರಿಕೆಟ್ ಸಂಸ್ಥೆ ಸಂಜು ಸಾಮ್ಸನ್ ಹಾಗೂ ಇತರ 12 ಕ್ರಿಕೆಟಿಗರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.