ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಐತಿಹಾಸಿಕ ಫೈನಲ್‌ಗೆ ಸಾತ್ವಿಕ್‌-ಚಿರಾಗ್‌ ಶೆಟ್ಟಿ!

Published : Apr 30, 2023, 04:22 PM IST
ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌: ಐತಿಹಾಸಿಕ ಫೈನಲ್‌ಗೆ ಸಾತ್ವಿಕ್‌-ಚಿರಾಗ್‌ ಶೆಟ್ಟಿ!

ಸಾರಾಂಶ

ಫೈನಲ್ ಪ್ರವೇಶಿಸಿದ ಸಾತ್ವಿಕ್‌ಸಾಯಿರಾಜ್-ಚಿರಾಗ್‌ ಶೆಟ್ಟಿ ಜೋಡಿ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಗೆಲ್ಲುವ ವಿಶ್ವಾಸದಲ್ಲಿ ಭಾರತದ ಜೋಡಿ ಫೈನಲ್‌ನಲ್ಲಿ ಮಲೇಷ್ಯಾದ ಒಂಗ್‌ ಸಿನ್‌ ಹಾಗೂ ಟಿಯೊ ಯೀ ಜೋಡಿ

ದುಬೈ(ಏ.30): ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಜೋಡಿ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನ ಪುರುಷರ ಡಬಲ್ಸ್‌ ಫೈನಲ್‌ ಪ್ರವೇಶಿಸಿದ ಭಾರತದ ಮೊದಲ ಜೋಡಿ ಎನ್ನುವ ದಾಖಲೆ ಬರೆದಿದೆ. ಶನಿವಾರ ನಡೆದ ಸೆಮಿಫೈನಲ್‌ ಪಂದ್ಯದ ನಡುವೆ ತಮ್ಮ ಎದುರಾಳಿಗಳು ಗಾಯಗೊಂಡು ನಿವೃತ್ತಿ ಪಡೆದ ಕಾರಣ, ಭಾರತೀಯ ಜೋಡಿ ಫೈನಲ್‌ ಪ್ರವೇಶಿಸಿತು.

ಚೈನೀಸ್‌ ತೈಪೆಯ ಲೀ ಯಾಂಗ್‌ ಹಾಗೂ ವಾಂಗ್‌ ಚೀ-ಲಿನ್‌ ವಿರುದ್ಧದ ಪಂದ್ಯದ ಮೊದಲ ಗೇಮ್‌ನಲ್ಲಿ 21-18ರ ಗೆಲುವು ಸಾಧಿಸಿದ್ದ ಸಾತ್ವಿಕ್‌-ಚಿರಾಗ್‌, 2ನೇ ಗೇಮ್‌ನಲ್ಲಿ 13-14ರಿಂದ ಹಿಂದಿದ್ದರು. ಈ ವೇಳೆ ತೈಪೆ ಜೋಡಿ ಪಂದ್ಯದಿಂದ ಹಿಂದೆ ಸರಿಯಿತು. ಭಾರತೀಯ ಜೋಡಿಗೆ ಫೈನಲ್‌ನಲ್ಲಿ ಮಲೇಷ್ಯಾದ ಒಂಗ್‌ ಸಿನ್‌ ಹಾಗೂ ಟಿಯೊ ಯೀ ಎದುರಾಗಲಿದ್ದಾರೆ.

ಇನ್ನು ಸಿಂಗ​ಲ್ಸ್‌​ನಲ್ಲಿ ಭಾರ​ತದ ಅಭಿ​ಯಾನ ಕೊನೆ​ಗೊಂಡಿದೆ. ಪುರು​ಷರ ಸಿಂಗಲ್ಸ್‌ನಲ್ಲಿ ಎಚ್‌.​ಎ​ಸ್‌.​ಪ್ರ​ಣಯ್‌ ಜಪಾ​ನ್‌ನ ಕಂಟಾ ತ್ಸುನೆ​ಯಮಾ ವಿರುದ್ಧ ಗಾಯ​ಗೊಂಡು ಟೂರ್ನಿ​ಯಿಂದ ಹೊರ​ನ​ಡೆ​ದರೆ, ಮಹಿಳಾ ಸಿಂಗ​ಲ್ಸ್‌​ನಲ್ಲಿ ಪಿ.ವಿ.​ಸಿಂಧು ಕೊರಿ​ಯಾದ ಆನ್‌ ಸೆ ಯಂಗ್‌ ವಿರುದ್ಧ 21-18, 5-21, 9-21 ಗೇಮ್‌​ಗ​ಳಲ್ಲಿ ಪರಾ​ಭ​ವ​ಗೊಂಡರು. ಮಿಶ್ರ ಡಬಲ್ಸ್‌ ಕ್ವಾರ್ಟ​ರ್‌​ನಲ್ಲಿ ರೋಹನ್‌ ಕಪೂ​ರ್‌-ಸಿಕ್ಕಿ ರೆಡ್ಡಿ ಜೋಡಿಯೂ ಸೋತು​ ಹೊರ​ ಬಿದ್ದಿದೆ.

2025ರಿಂದ ಟೆನಿಸ್‌ನಲ್ಲಿ ಲೈನ್‌ ಅಂಪೈರ್‌ಗಳಿಲ್ಲ!

ಲಂಡನ್‌: 2025ರಿಂದ ಟೆನಿಸ್‌ ಪಂದ್ಯಗಳಲ್ಲಿ ಲೈನ್‌ ಅಂಪೈರ್‌ಗಳ ಬದಲು ಎಲೆಕ್ಟ್ರಾನಿಕ್‌ ಲೈನ್‌ ಕಾಲಿಂಗ್‌(ಇಎಲ್‌ಸಿ) ವ್ಯವಸ್ಥೆ ಬಳಕೆ ಮಾಡುವುದಾಗಿ ಜಾಗತಿಕ ಮಟ್ಟದಲ್ಲಿ ಪುರುಷರ ಟೆನಿಸ್‌ ಆಡಳಿತವನ್ನು ನಿರ್ವಹಿಸುವ ಎಟಿಪಿ ಶುಕ್ರವಾರ ತಿಳಿಸಿದೆ. ಇಎಲ್‌ಸಿ ಬಳಕೆಯಿಂದ ಚೆಂಡು ಅಂಕಣದ ಯಾವ ಭಾಗದಲ್ಲಿ ಬಿದ್ದಿದೆ ಎನ್ನುವುದನ್ನು ಇನ್ನಷ್ಟುನಿಖರವಾಗಿ ತಿಳಿಯಬಹುದಾಗಿದೆ. ಟೆನಿಸ್‌ ಆಟದ ಹಿತದೃಷ್ಟಿಯಿಂದ ಈ ವ್ಯವಸ್ಥೆ ಜಾರಿಗೆ ತರುವ ಅಗತ್ಯವಿದೆ ಎಂದು ಎಟಿಪಿ ಮುಖ್ಯಸ್ಥ ಆ್ಯಂಡ್ರೆಯಾ ಗೌಡೆನ್ಜಿ ಹೇಳಿದ್ದಾರೆ.

ಕುಸ್ತಿಪಟುಗಳ ಬೆಂಬಲಕ್ಕೆ ನಿಂತ ಪ್ರಿಯಾಂಕ ಗಾಂಧಿ, ಅರವಿಂದ್ ಕೇಜ್ರಿವಾಲ್‌

ಟೆಸ್ಟ್‌ ವಿಶ್ವಕಪ್‌ ಫೈನಲ್‌ಗೆ ವೇಗಿ ಉಮೇಶ್‌ ಯಾದವ್ ಅಲಭ್ಯ?

ಕೋಲ್ಕತಾ: ಸ್ನಾಯು ಸೆಳೆತಕ್ಕೆ ತುತ್ತಾಗಿ ಗುಜರಾತ್‌ ಟೈಟಾನ್ಸ್‌ ವಿರುದ್ಧದ ಐಪಿಎಲ್‌ ಪಂದ್ಯವನ್ನು ತಪ್ಪಿಸಿಕೊಂಡ ವೇಗಿ ಉಮೇಶ್‌ ಯಾದವ್‌, ಆಸ್ಪ್ರೇಲಿಯಾ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಿಂದ ಹೊರಬೀಳುವ ಸಾಧ್ಯತೆ ಇದೆ. ಉಮೇಶ್‌ ಯಾದವ್ ಅವರ ಸ್ಕ್ಯಾನ್ನ್‌ ವರದಿ ಬರಬೇಕಿದ್ದು, ಗಾಯದ ಪ್ರಮಾಣ ನೋಡಿಕೊಂಡು ಬಿಸಿಸಿಐ ಮುಂದಿನ ನಿರ್ಧಾರ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. 

ಟೆಸ್ಟ್‌ ವಿಶ್ವಕಪ್‌ ಫೈನಲ್‌ ಪಂದ್ಯವು ಜೂನ್ 7ರಿಂದ ಲಂಡನ್‌ನ ದಿ ಓವಲ್‌ ಕ್ರೀಡಾಂಗಣದಲ್ಲಿ ನಡೆಯಲಿದೆ. ಪ್ರಶಸ್ತಿಗಾಗಿ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳು ಕಾದಾಡಲಿವೆ. ಚೊಚ್ಚಲ ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ಶಿಪ್‌ನಲ್ಲೂ ಭಾರತ ಕ್ರಿಕೆಟ್ ತಂಡವು ಫೈನಲ್ ಪ್ರವೇಶಿಸಿತ್ತಾದರೂ, ಫೈನಲ್‌ನಲ್ಲಿ ಮುಗ್ಗರಿಸುವ ಮೂಲಕ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್ ಫೈನಲ್‌ ಪಂದ್ಯಕ್ಕೆ ಭಾರತ ತಂಡ ಹೀಗಿದೆ ನೋಡಿ:

ರೋಹಿತ್ ಶರ್ಮಾ(ನಾಯಕ), ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ಕೆ ಎಲ್ ರಾಹುಲ್, ಕೆ ಎಸ್ ಭರತ್(ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್, ಜಯದೇವ್ ಉನಾದ್ಕತ್.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ