ಆಲ್ ಇಂಗ್ಲೆಂಡ್ ಚಾಂಪಿಯನ್'ಶಿಪ್: ಸೈನಾ-ಸಿಂಧುವಿಗೆ ಕ್ವಾರ್ಟರ್ಸ್'ನಲ್ಲಿ ಅಗ್ನಿಪರೀಕ್ಷೆ

Published : Mar 10, 2017, 08:22 AM ISTUpdated : Apr 11, 2018, 12:40 PM IST
ಆಲ್ ಇಂಗ್ಲೆಂಡ್ ಚಾಂಪಿಯನ್'ಶಿಪ್: ಸೈನಾ-ಸಿಂಧುವಿಗೆ ಕ್ವಾರ್ಟರ್ಸ್'ನಲ್ಲಿ ಅಗ್ನಿಪರೀಕ್ಷೆ

ಸಾರಾಂಶ

ಒಂದುವೇಳೆ ಭಾರತೀಯ ಇಬ್ಬರು ಆಟಗಾರ್ತಿಯರು ಕ್ವಾರ್ಟರ್ ಫೈನಲ್'ನಲ್ಲಿ ವಿಜೇತರಾದರೆ, ಶನಿವಾರ ನಡೆಯುವ ಸೆಮಿಫೈನಲ್'ನಲ್ಲಿ ಸೈನಾ-ಸಿಂಧು ಮುಖಾಮುಖಿಯಾಗಲಿದ್ದಾರೆ.  

ಲಂಡನ್(ಮಾ.10): ರಿಯೊ ಒಲಿಂಪಿಕ್‌ ರಜತ ಪದಕ ವಿಜೇತೆ ಪಿ. ವಿ. ಸಿಂಧು ಹಾಗೂ ಸೈನಾ ನೆಹ್ವಾಲ್‌ ಆಲ್‌ ಇಂಗ್ಲೆಂಡ್‌ ಚಾಂಪಿಯನ್‌ಶಿಪ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ.

ಇದೀಗ ಭಾರತದ ಅಗ್ರಶ್ರೇಯಾಂಕಿತೆ ಸಿಂಧುವಿಗೆ ಕ್ವಾರ್ಟರ್ ಫೈನಲ್'ನಲ್ಲಿ ಅಗ್ನಿ ಪರೀಕ್ಷೆ ಎದುರಾಗಿದೆ. ಇಂದು ನಡೆಯುವ ಪಂದ್ಯದಲ್ಲಿ ಸಿಂಧು ವಿಶ್ವದ ನಂಬರ್ ಒನ್ ಶ್ರೇಯಾಂಕಿತೆ ಚೀನಾದ ಥೈ-ತ್ಜು-ಯಿಂಗ್ ಎದುರು ಕಾದಾಡಲಿದ್ದಾರೆ. ಅದೇ ರೀತಿ ಇನ್ನೊಂದು ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್, ವಿಶ್ವದ ಮೂರನೇ ಶ್ರೇಯಾಂಕಿತ ಆಟಗಾರ್ತಿ ಕೋರಿಯಾದ ಸಂಗ್ ಜಿ ಹ್ಯುನ್ ಅವರನ್ನು ಎದುರಿಸಲಿದ್ದಾರೆ.

ಒಂದುವೇಳೆ ಭಾರತೀಯ ಇಬ್ಬರು ಆಟಗಾರ್ತಿಯರು ಕ್ವಾರ್ಟರ್ ಫೈನಲ್'ನಲ್ಲಿ ವಿಜೇತರಾದರೆ, ಶನಿವಾರ ನಡೆಯುವ ಸೆಮಿಫೈನಲ್'ನಲ್ಲಿ ಸೈನಾ-ಸಿಂಧು ಮುಖಾಮುಖಿಯಾಗಲಿದ್ದಾರೆ.  

ಇಲ್ಲಿನ ಬರ್ಮಿಂಗ್‌ಹ್ಯಾಂ ಬರ್ಕ್ಲೇಕಾರ್ಡ್‌ ಅರೇನಾದಲ್ಲಿ ಗುರುವಾರ ನಡೆದ ಎರಡನೇ ಸುತ್ತಿನ ಪಂದ್ಯದಲ್ಲಿ ಇಂಡೋನೇಷಿಯಾದ ದಿನಾರ್‌ ಡ್ಯಹ್‌ ಅಯುಸ್ಟೈನ್‌ ವಿರುದ್ಧ ಆಕ್ರಮಣಕಾರಿ ಆಟವಾಡಿ 21-12, 21-4ರಿಂದ ಗೆಲುವು ಪಡೆದರು. ಇದರೊಂದಿಗೆ ಇದೇ ಮೊದಲ ಬಾರಿಗೆ ಪ್ರತಿಷ್ಠಿತ ಟೂರ್ನಿಯಲ್ಲಿ ಸಿಂಧು ಎಂಟರ ಘಟ್ಟಕ್ಕೇರಿದ ಸಾಧನೆ ಮೆರೆದರು.
ಇತ್ತ, ಎಂಟನೇ ಶ್ರೇಯಾಂಕಿತೆ ಸೈನಾ ನೆಹ್ವಾಲ್‌ ಗುರುವಾರ ನಡೆದ ದ್ವಿತೀಯ ಸುತ್ತಿನ ಪಂದ್ಯದಲ್ಲಿ ಜರ್ಮನ್‌ ಆಟಗಾರ್ತಿ ಹಾಗೂ ಅರ್ಹತಾ ಸುತ್ತಿನಲ್ಲಿ ಸೆಣಸಿ ಪ್ರಧಾನ ಘಟ್ಟಕ್ಕೆ ಕಾಲಿಟ್ಟಿದ್ದ ಫ್ಯಾಬಿನ್ನೆ ಡಿಪ್ರೆಜ್‌ ಎದುರು 21-18, 21-10 ಎರಡು ನೇರ ಗೇಮ್‌ಗಳಲ್ಲಿ ಜಯಶಾಲಿಯಾದರು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೋ ಟು ಹೆಲ್, ಗೆಳತಿಯೊಂದಿಗೆ ಡಿನ್ನರ್ ಡೇಟ್ ವೇಳೆ ಫ್ಯಾನ್ಸ್ ಬೈಗುಳ, ಹಾರ್ದಿಕ್ ಪಾಂಡ್ಯ ಮಾಡಿದ್ದೇನು?
ತಿರುಪತಿಗೆ ತಿರುಮಲನಿಗೆ ಮುಡಿ ಕೊಟ್ಟ ಕೆಎಸ್‌ಸಿಎ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್