
ಚಂಡೀಗಢ(ಫೆ.07): ಈ ಮೊದಲು ಬಾಕ್ಸರ್'ಗಳಿಗೆ ಹಸುಗಳನ್ನು ಉಡುಗೊರೆಯಾಗಿ ನೀಡಿ ಮುಜುಗರಕ್ಕೆ ಒಳಗಾಗಿದ್ದ ಹರ್ಯಾಣ ಸರ್ಕಾರ ಇದೀಗ ಕುಸ್ತಿಪಟುಗಳಿಗೆ ಎಮ್ಮೆಗಳನ್ನು ನೀಡಲು ಮುಂದಾಗಿದೆ. ಈ ಹಿಂದೆ ಬಾಕ್ಸರ್'ಗಳಿಗೆ ಹಸುಗಳನ್ನು ಉಡುಗೊರೆಯಾಗಿ ನೀಡಿದ್ದ ಹರ್ಯಾಣದ ಪಶು ಸಂಗೋಪನೆ ಸಚಿವ ಓಂ ಪ್ರಕಾಶ್ ಧನ್ಕರ್ ಅವರೇ ಈಗಲೂ ಎಮ್ಮೆ ನೀಡುವುದಾಗಿ ಘೋಷಿಸಿದ್ದಾರೆ.
‘ಎಮ್ಮೆ ಹಾಲು ಕುಡಿಯುವುದರಿಂದ ಕುಸ್ತಿಪಟು ಮತ್ತು ಕ್ರೀಡಾಪಟುಳುಗಳಿಗೆ ಶಕ್ತಿ ಬರುತ್ತದೆ. ಶುದ್ಧ ಹಾಗೂ ತಾಜಾ ಹಾಲು ಕುಡಿಯಲಿ ಎಂದು ಕುಸ್ತಿಪಟುಗಳಿಗೆ ಎಮ್ಮೆಗಳನ್ನು ಉಡುಗೊರೆಯಾಗಿ ನೀಡಲಾಗುತ್ತಿದೆ’ ಎಂದು ಧನ್ಕರ್ ಹೇಳಿದ್ದಾರೆ. ‘ಶಕ್ತಿ ಬೇಕಾದರೆ ಎಮ್ಮೆ ಹಾಲನ್ನು ಕುಡಿಯಿರಿ. ಸೌಂದರ್ಯ ಹಾಗೂ ಬುದ್ಧಿಶಕ್ತಿ ಬೇಕಾದರೆ ಹಸುವಿನ ಹಾಲು ಕುಡಿಯಿರಿ’ ಎಂದು ಧನ್ಕರ್ ಹೇಳಿದ್ದಾರೆ. ಕಳೆದ ಭಾನುವಾರ ಹರ್ಯಾಣದ ಹಿಸ್ಸಾರ್'ನಲ್ಲಿ ನಡೆದಿದ್ದ ಏಷ್ಯಾ ಎಮ್ಮೆಗಳ ಜಾತ್ರೆಯಲ್ಲಿ ಯಶಸ್ವಿ ಕ್ರೀಡಾಪಟುಗಳಿಗೆ ಎಮ್ಮೆಗಳನ್ನು ಗಿಫ್ಟ್ ನೀಡುವುದಾಗಿ ಹೇಳಿದ್ದಾರೆ.
ಈ ಹಿಂದೆ ವಿಶ್ವ ಜೂನಿಯರ್ ಬಾಕ್ಸಿಂಗ್ ಚಾಂಪಿಯನ್'ಶಿಪ್'ನಲ್ಲಿ ಪದಕ ಜಯಿಸಿದ್ದ ಹರ್ಯಾಣದ ಮಹಿಳಾ ಬಾಕ್ಸರ್'ಗಳಿಗೆ ಸಚಿವ ಧನ್ಕರ್ ಹಸುಗಳನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ಸರ್ಕಾರ ನೀಡಿರುವ ಹಸುಗಳು ಗೊಡ್ಡು ಹಸುಗಳಾಗಿವೆ. ಹಾಲು ಕೊಡುವುದಕ್ಕಿಂತ ಒದೆಯುವುದೇ ಜಾಸ್ತಿ. ಅವುಗಳಿಗೆ ಮೇವು ಹಾಕುವುದು ವ್ಯರ್ಥ ಎಂದು ಕಳೆದ ಕೆಲ ತಿಂಗಳ ಹಿಂದಷ್ಟೇ ಮೂವರು ಮಹಿಳಾ ಬಾಕ್ಸರ್'ಗಳು ಹಸುಗಳನ್ನು ಸರ್ಕಾರಕ್ಕೆ ಹಿಂದಿರುಗಿಸಿದ್ದರು. ಇದು ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗೂ ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.