ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌: ಕರ್ನಾಟಕ ಶುಭಾರಂಭ

Published : Jul 23, 2022, 11:03 AM IST
ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್‌: ಕರ್ನಾಟಕ ಶುಭಾರಂಭ

ಸಾರಾಂಶ

69ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ಶುಭಾರಂಭ ಬಿಎಸ್‌ಎನ್‌ಎಲ್‌ ವಿರುದ್ಧ 43-5 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ನಾಕೌಟ್‌ ಹಂತಕ್ಕೇರುವ ನಿರೀಕ್ಷೆಯಲ್ಲಿರುವ ಕರ್ನಾಟಕ ಕಬಡ್ಡಿ ತಂಡ

ಚರ್ಖಿ ದಾದ್ರಿ(ಜು.23): 69ನೇ ರಾಷ್ಟ್ರೀಯ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡ ಶುಭಾರಂಭ ಮಾಡಿದ್ದು, ನಾಕೌಟ್‌ ಹಂತಕ್ಕೇರುವ ನಿರೀಕ್ಷೆಯಲ್ಲಿದೆ. ‘ಎಫ್‌’ ಗುಂಪಿನಲ್ಲಿರುವ ಕರ್ನಾಟಕ, ಟೂರ್ನಿಯ 2ನೇ ದಿನವಾದ ಶುಕ್ರವಾರ ತನ್ನ ಮೊದಲ ಪಂದ್ಯದಲ್ಲಿ ಬಿಎಸ್‌ಎನ್‌ಎಲ್‌ ವಿರುದ್ಧ 43-5 ಅಂಕಗಳ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿತು.

ಗುಂಪು ಹಂತದ 2ನೇ ಪಂದ್ಯದಲ್ಲಿ ಪಶ್ಚಿಮ ಬಂಗಾಳ ವಿರುದ್ಧ 42-37ರ ರೋಚಕ ಗೆಲುವು ಸಾಧಿಸಿ ಅಜೇಯವಾಗಿ ಉಳಿಯಿತು. ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಕರ್ನಾಟಕಕ್ಕೆ ಬಲಿಷ್ಠ ಹರಾರ‍ಯಣ ಎದುರಾಗಲಿದೆ. ಟೂರ್ನಿಯಲ್ಲಿ ಒಟ್ಟು 31 ತಂಡಗಳು ಟ್ರೋಫಿಗಾಗಿ ಸ್ಪರ್ಧಿಸುತ್ತಿವೆ. ಜು.24ರ ವರೆಗೂ ಪಂದ್ಯಾವಳಿ ನಡೆಯಲಿದೆ.

ಕಾಮನ್ವೆಲ್ತ್‌ನಲ್ಲಿ ತೇಜಸ್ವಿನ್‌ ಸ್ಪರ್ಧೆಗೆ ಕೊನೆಗೂ ಅನುಮತಿ

ನವದೆಹಲಿ: ಒಂದು ತಿಂಗಳ ಹೈಡ್ರಾಮಾ ಬಳಿಕ ಕೊನೆಗೂ ಭಾರತದ ಹೈಜಂಪ್‌ ಪಟು ತೇಜಸ್ವಿನ್‌ ಶಂಕರ್‌ಗೆ ಮುಂದಿನ ವಾರದಿಂದ ಆರಂಭಗೊಳ್ಳಲಿರುವ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಸ್ಪರ್ಧಿಸಲು ಆಯೋಜಕರು ಅನುಮತಿ ನೀಡಿದ್ದಾರೆ. ಭಾರತೀಯ ಒಲಿಂಪಿಕ್ಸ್‌ ಸಂಸ್ಥೆ(ಐಒಎ) ಸಲ್ಲಿಸಿದ ಮನವಿಯನ್ನು ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌(ಸಿಜಿಎಫ್‌) ಪುರಸ್ಕರಿಸಿದೆ. ಈ ಮೊದಲು ಐಒಎ, ಭಾರತ ತಂಡದಲ್ಲಿ ತಡವಾಗಿ ಹೆಸರು ಸೇರಿಸಿದ್ದಕ್ಕೆ ತೇಜಸ್ವಿನ್‌ಗೆ ಅವಕಾಶ ನಿರಾಕರಿಸಲಾಗಿತ್ತು.

ತೈಪೆ ಓಪನ್‌: ಕಶ್ಯಪ್‌, ತನಿಶಾ ಕ್ರಾಸ್ಟೊ ಹೊರಕ್ಕೆ

ತೈಪೆ: ಭಾರತದ ಪಾರುಪಳ್ಳಿ ಕಶ್ಯಪ್‌, ತನಿಶಾ ಕ್ರಾಸ್ಟೊತೈಪೆ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಸೋತು ಹೊರಬಿದ್ದಿದ್ದಾರೆ. ಇದರೊಂದಿಗೆ ಭಾರತದ ಸವಾಲು ಮುಕ್ತಾಯಗೊಂಡಿದೆ. ಪುರುಷರ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಕಶ್ಯಪ್‌, ಮಲೇಷ್ಯಾದ ಸೊಂಗ್‌ ಜೊ ವೆನ್‌ ವಿರುದ್ಧ 12-21, 21-12, 17-21ರಲ್ಲಿ ಸೋತರೆ, ಮಹಿಳಾ ಮತ್ತು ಮಿಶ್ರ ಡಬಲ್ಸ್‌ನಲ್ಲಿ ತನಿಶಾ ಸೋತು ನಿರಾಸೆ ಅನುಭವಿಸಿದರು. ಮಹಿಳಾ ಡಬಲ್ಸ್‌ನಲ್ಲಿ ತನಿಶಾ-ಶೃತಿ ಮಿಶ್ರಾ ಹಾಂಕಾಂಗ್‌ ಜೋಡಿ ವಿರುದ್ಧ ಸೋತರೆ, ಮಿಶ್ರ ಡಬಲ್ಸ್‌ನಲ್ಲಿ ತನಿಶಾ ಮತ್ತು ಇಶಾನ್‌ ಭಟ್ನಾಗರ್‌ ಮಲೇಷ್ಯಾ ಜೋಡಿ ವಿರುದ್ಧ ಪರಾಭವಗೊಂಡರು.

PKL Auction 2022: ಪ್ರೊ ಕಬಡ್ಡಿ ಲೀಗ್‌ ಹರಾಜಿಗೆ ಡೇಟ್‌ ಫಿಕ್ಸ್‌, ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್

ಬಿಸಿಸಿಐ ಅಂಪೈರ್: ಎ+ ದರ್ಜೆ ಹೊಸದಾಗಿ ಸೇರ್ಪಡೆ

ನವದೆಹಲಿ: ದೇಸಿ ಅಂಪೈರ್‌ಗಳಿಗೆ 'ಎ+' ದರ್ಜೆಯನ್ನು ಬಿಸಿಸಿಐ ಪರಿಚಯಿಸಿದ್ದು, ಈ ದರ್ಜೆಯಲ್ಲಿ 10 ಅಂಪೈರ್‌ಗಳನ್ನು ಸೇರ್ಪಡೆಗೊಳಿಸಿದೆ. .ಈ ಪಟ್ಟಿಯಲ್ಲಿ ಐವರು ಅಂತರರಾಷ್ಟ್ರೀಯ ಅಂಪೈರ್‌ಗಳಾದ ನಿತಿನ್ ಮೆನನ್, ಅನಿಲ್ ಚೌಧರಿ, ಮದನ್ ಗೋಪಾಲ್, ಕೆ ಎನ್‌ ಪದ್ಮನಾಭನ್, ವೀರೇಂದ್ರ ಶರ್ಮಾ ಸ್ಥಾನ ಪಡೆದ ಪ್ರಮುಖರೆನಿಸಿಕೊಂಡಿದ್ದಾರೆ. 'ಎ+', 'ಎ' ದರ್ಜೆಯಲ್ಲಿರುವ ಅಂಪೈರ್‌ಗಳಿಗೆ ಪ್ರತಿ ದೇಸಿ ಪಂದ್ಯದ ಕಾರ್ಯನಿರ್ವಹಣೆಗೆ 40,000 ರುಪಾಯಿ ವೇತನ ಸಿಗಲಿದ್ದು, 'ಬಿ' ಹಾಗೂ 'ಸಿ' ದರ್ಜೆಗೆ 30,000 ರುಪಾಯಿ ಸಿಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!
IPL 2026 ಮಿನಿ ಹರಾಜು: 2 ಕೋಟಿ ಮೂಲ ಬೆಲೆ ಹೊಂದಿದ 5 ಸ್ಟಾರ್ ಆಟಗಾರರಿವರು!