ರಾಯಚೂರು: ವಿದ್ಯಾರ್ಥಿಗಳ ಜತೆ ಬಿಸಿಊಟ ಸೇವಿಸಿ ಸರಳತೆ ಮೆರೆದ IPS ಆಫೀಸರ್

Published : Mar 20, 2019, 03:37 PM ISTUpdated : Mar 20, 2019, 03:42 PM IST
ರಾಯಚೂರು: ವಿದ್ಯಾರ್ಥಿಗಳ ಜತೆ ಬಿಸಿಊಟ  ಸೇವಿಸಿ ಸರಳತೆ ಮೆರೆದ IPS ಆಫೀಸರ್

ಸಾರಾಂಶ

ಸರಕಾರಿ ಶಾಲೆ ಎಂದರೆ, ಮೂಗು ಮುರಿಯುವವರೇ ಹೆಚ್ಚು. ಆದರೆ, ಚುನಾವಣೆ ಕರ್ತವ್ಯಕ್ಕೆ ಬಂದಿದ್ದ ಪ್ರೊಬೇಷನರಿ ಪೊಲೀಸ್‌ ವರಿಷ್ಠಾಧಿಕಾರಿಯೊಬ್ಬರು ಗ್ರಾಮವೊಂದರ ಸರಕಾರಿ ಶಾಲೆಗೆ ಹೋಗಿ ಮಕ್ಕಳೊಂದಿಗೆ ಬೆರೆತು ಬಿಸಿಯೂಟ ಸವಿದು ಸರಳತೆ ಮೆರೆದಿದ್ದಾರೆ.

ರಾಯಚೂರು, (ಮಾ.20): ಪ್ರೊಬೇಷನರಿ ಪೊಲೀಸ್‌ ವರಿಷ್ಠಾಧಿಕಾರಿಯೊಬ್ಬರು ಗ್ರಾಮವೊಂದರ ಸರಕಾರಿ ಶಾಲೆಗೆ ಹೋಗಿ ಮಕ್ಕಳೊಂದಿಗೆ ಬೆರೆತು ಬಿಸಿಯೂಟ ಸವಿದು ಸರಳತೆ ಮೆರೆದಿದ್ದಾರೆ.

ಲೋಕಸಭಾ ಚುನಾವಣೆ ನಿಮಿತ್ತ ಕರ್ತವ್ಯಕ್ಕೆ ನಿಯೋಜನೆಗೊಂಡ ಪ್ರೊಬೇಷನರಿ ಎಸ್‌ಪಿ ನಿಖಿಲ್ ಬಿ. ದೇವದುರ್ಗ ತಾಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಕೊಪ್ಪರ ಶಾಲೆಗೆ ಭೇಟಿ ನೀಡಿ ಮಕ್ಕಳ ಜತೆ ಮಧ್ಯಾಹ್ನ ಬಿಸಿಊಟ ಸೇವಿಸಿ ಎಲ್ಲರ ಗಮನ ಸೆಳೆದಿದ್ದಾರೆ.

 ಸೂಕ್ಷ್ಮ ಅತಿ ಸೂಕ್ಷ್ಮ ಮತಗಟ್ಟೆ ಕೇಂದ್ರಗಳಲ್ಲಿ ಕುಡಿವ ನೀರು, ಶೌಚಾಲಯ ಸೇರಿ ಅಗತ್ಯ ಮೂಲಭೂತ ಸೌಲಭ್ಯಗಳ ಕುರಿತು ಮತ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಶಾಲಾ ಆವರಣದ ಕಟ್ಟೆ ಮೇಲೆ ಕುಳಿತು ಊಟ ಮಾಡಿದರು. 

 ಊಟ ಮಾಡಿಕೊಂಡು ಹೋಗಿ ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು. ಮಕ್ಕಳ ಕರೆಗೆ ಪ್ರೊಬೇಷನರಿ ಎಸ್ಪಿ ಊಟ ಮಾಡಲು ಒಪ್ಪಿಕೊಂಡರು. ಶಿಕ್ಷಕರು ಮುಖ್ಯಗುರುಗಳ ಕೋಣೆಯಲ್ಲಿ ಕುಳಿತುಕೊಳ್ಳಿ ಊಟ ತರುತ್ತೇವೆ ಎಂದಾಗ, ಬೇಡ ಮಕ್ಕಳ ಜೊತೆಯಲ್ಲಿಯೇ ಊಟ ಮಾಡುತ್ತೇನೆ ಎಂದು ಸರಳತೆ ಮೆರೆದಿದ್ದಾರೆ.

ಚಿತ್ರದುರ್ಗ ಮೂಲದ ಐಪಿಎಸ್‌ ಅಧಿಕಾರಿ ನಿಖಿಲ್‌ ಬುಳ್ಳಾವರ್‌ ಅವರು ರಾಯಚೂರು ಜಿಲ್ಲೆಗೆ ಪ್ರೊಬೇಷನರಿ ಎಸ್ಪಿಯಾಗಿ ನಿಯೋಜನೆಗೊಂಡಿದ್ದಾರೆ.

ಸರಕಾರಿ ಶಾಲೆ ಅಂದ್ರೆ ಮೂಗು ಮುರಿಯುವವರೇ ಹೆಚ್ಚು. ಆದ್ರೆ ಉನ್ನತ ಸ್ಥಾನದಲ್ಲಿದ್ದರು ಮಕ್ಕಳ ಜತೆ ಊಟ ಮಾಡಿ ಇತರರಿಗೆ ಮಾದರಿಯಾಗಿದಂತೂ ಸತ್ಯ.

PREV
click me!

Recommended Stories

ಕೆಕೆಆರ್‌ಟಿಸಿ ಬಸ್ ಪಲ್ಟಿ; ಶಾಲಾ ವಿದ್ಯಾರ್ಥಿಗಳು ಸೇರಿದಂತೆ 15 ಜನರಿಗೆ ಗಾಯ; ಕಂಡಕ್ಟರ್ ಸ್ಥಿತಿ ಗಂಭೀರ!
ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!