ಲೋಕಸಭಾ ಚುನಾವಣೆ 2024: ಯತೀಂದ್ರ ನನ್ನೆದುರು ಸ್ಪರ್ಧೆಗೆ ಇಳಿಯಲಿ, ಪ್ರತಾಪ್ ಸಿಂಹ

By Kannadaprabha NewsFirst Published Jan 14, 2024, 3:37 PM IST
Highlights

ನಾನು ಯಾವತ್ತೂ ನನ್ನ ಎದುರಾಳಿಯನ್ನು ನೋಡಲ್ಲ. ಮೋದಿ ಅವರ ಹೆಸರಿನ ಮುಂದೆ ಯಾವ ಎದುರಾಳಿ ಹೆಸರೂ ನಡೆಯಲ್ಲ ಎಂದು ತಿಳಿಸಿದ ಸಂಸದ ಪ್ರತಾಪ್ ಸಿಂಹ 

ಮೈಸೂರು(ಜ.14):  ಮೈಸೂರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಶಾಸಕ ಡಾ.ಯತೀಂದ್ರ ನನ್ನ ಎದುರಾಳಿಯಾದರೆ ಒಳ್ಳೆಯದು. ಆಗ ಯತೀಂದ್ರ ಸನ್ ಆಫ್ ಸಿದ್ದರಾಮಯ್ಯ ವರ್ಸಸ್ ಪತ್ರಕರ್ತ ಪ್ರತಾಪ್ ಸಿಂಹ ನಡುವೆ ಹೋರಾಟ ನಡೆಯಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

'ಯತೀಂದ್ರ ನಿಮ್ಮ ಎದುರಾಳಿಯಾ' ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಯಾವತ್ತೂ ನನ್ನ ಎದುರಾಳಿಯನ್ನು ನೋಡಲ್ಲ. ಮೋದಿ ಅವರ ಹೆಸರಿನ ಮುಂದೆ ಯಾವ ಎದುರಾಳಿ ಹೆಸರೂ ನಡೆಯಲ್ಲ ಎಂದು ತಿಳಿಸಿದ್ದಾರೆ. 

'ನಾನು ಕೊಚ್ಚೆಗೆ ಕಲ್ಲು ಹಾಕುವುದಿಲ್ಲ' ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ತಿರುಗೇಟು!

ಕಾಂಗ್ರೆಸ್‌ಗೆ ನಮ್ಮ ಚಿಂತೆ ಯಾಕೆ? ತಮ್ಮ ಅಭ್ಯರ್ಥಿ ಯಾರು ಎಂಬುದನ್ನು ನೋಡಿಕೊಳ್ಳಲಿ ಎಂದು ಸಂಸದ ಪ್ರತಾಪ್ ಸಿಂಹ ತಿವಿದಿದ್ದಾರೆ.

click me!