ಶೀಘ್ರ ರಾಜ್ಯ ಸಂಪುಟ ವಿಸ್ತರಣೆ : ಯಾರಿಗೆ ಎಂಟ್ರಿ , ಯಾರಿಗೆ ಎಕ್ಸಿಟ್..?

Published : Nov 15, 2018, 08:15 AM ISTUpdated : Nov 15, 2018, 08:16 AM IST
ಶೀಘ್ರ ರಾಜ್ಯ ಸಂಪುಟ ವಿಸ್ತರಣೆ : ಯಾರಿಗೆ ಎಂಟ್ರಿ , ಯಾರಿಗೆ ಎಕ್ಸಿಟ್..?

ಸಾರಾಂಶ

ಶೀಘ್ರದಲ್ಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಡೆಯಲಿದೆ. ಈ ತಿಂಗಳ ಅಂತ್ಯದೊಳಗೆ ಸಂಪುಟ ವಿಸ್ತರಣೆಯಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ. 

ಬೆಂಗಳೂರು :  ರಾಜ್ಯ ಸಚಿವ ಸಂಪುಟ ವಿಸ್ತ​ರಣೆ ಬಗ್ಗೆ ಶೀಘ್ರವೇ ಹೈಕ​ಮಾಂಡ್‌​ನೊಂದಿಗೆ ಚರ್ಚಿ​ಸ​ಲಿದ್ದು, ಒಟ್ಟಾರೆ ಈ ಮಾಸಾಂತ್ಯದ ವೇಳೆಗೆ ಸಂಪುಟ ವಿಸ್ತ​ರಣೆ ಪ್ರಕ್ರಿಯೆ ಪೂರ್ಣ​ಗೊ​ಳ್ಳ​ಲಿದೆ ಎಂದು ಕೆಪಿ​ಸಿಸಿ ಅಧ್ಯಕ್ಷ ದಿನೇಶ್‌ ಗುಂಡೂ​ರಾವ್‌ ಹೇಳಿ​ದ​ರು.

ಬುಧ​ವಾರ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಪ್ರಸ್ತುತ ಜೆಡಿ​ಎಸ್‌ ವರಿಷ್ಠ ಎಚ್‌.ಡಿ. ದೇವೇ​ಗೌಡ ಅವರು ವಿದೇಶ ಪ್ರವಾ​ಸ​ದಲ್ಲಿ ಇದ್ದಾರೆ. ಇತರೆ ನಾಯ​ಕರು ಪ್ರವಾ​ಸ​ದ​ಲ್ಲಿ​ದ್ದಾರೆ. ಎಲ್ಲಾ ನಾಯ​ಕರು ಪ್ರವಾಸ ಪೂರ್ಣ​ಗೊ​ಳಿ​ಸಿದ ನಂತರ ಸಂಪುಟ ವಿಸ್ತ​ರಣೆ ಬಗ್ಗೆ ಸಭೆ ನಡೆಸಿ ಚರ್ಚೆ ನಡೆ​ಸ​ಲಾ​ಗು​ವುದು ಎಂದು ಅವರು ಹೇಳಿ​ದ​ರು.

ವಾಸ್ತ​ವ​ವಾಗಿ ಉಪ ಚುನಾ​ವಣೆ ಫಲಿ​ತಾಂಶ ಪ್ರಕ​ಟ​ಗೊಂಡ ಬೆನ್ನಲ್ಲೇ ಸಂಪುಟ ವಿಸ್ತ​ರಣೆ ಮಾಡು​ವು​ದಾಗಿ ರಾಜ್ಯ ನಾಯ​ಕರು ಹೇಳಿ​ದ್ದರು. ಆದರೆ, ಫಲಿ​ತಾಂಶಗೊಂಡ ನಂತರ ಸಂಪುಟ ವಿಸ್ತ​ರಣೆ ವಿಚಾ​ರ​ದಲ್ಲಿ ನಾಯ​ಕ​ರಲ್ಲಿ ಉತ್ಸಾಹ ಕಡಿ​ಮೆ​ಯಾ​ಗಿದೆ. ನವೆಂಬರ್‌ ಎರ​ಡನೇ ವಾರ​ದಲ್ಲಿ ಸಂಪುಟ ವಿಸ್ತ​ರಣೆ ಖಚಿತ ಎನ್ನ​ಲಾ​ಗಿತ್ತು. ಆದರೆ, ಹೈಕ​ಮಾಂಡ್‌ನ ನಾಯ​ಕರು ಬ್ಯುಸಿ ಇರುವ ಕಾರಣ ಈ ವಿಚಾ​ರದ ಬಗ್ಗೆ ಚರ್ಚೆ ಸಾಧ್ಯ​ವಾ​ಗಿಲ್ಲ ಎಂದು ಹೇಳ​ಲಾ​ಗು​ತ್ತಿದೆ.

ರಾಜ್ಯ ಉಸ್ತು​ವಾರಿ ಕೆ.ಸಿ. ವೇಣು​ಗೋ​ಪಾಲ್‌ ಅವರು ನಗ​ರಕ್ಕೆ ಭೇಟಿ ನೀಡಿದ್ದ ಸಂದ​ರ್ಭ​ದಲ್ಲಿ ಸಂಪುಟ ವಿಸ್ತ​ರ​ಣೆ ಈ ಮಾಸ​ದಲ್ಲಿ ಖಚಿತ ಎಂದೇ ಹೇಳಿ​ದ್ದರು. ಕಾಂಗ್ರೆ​ಸ್‌​ನಿಂದ ಐದು ಹಾಗೂ ಜೆಡಿ​ಎ​ಸ್‌​ನಿಂದ ಒಬ್ಬರು ಸಚಿ​ವ​ರನ್ನು ಸಂಪು​ಟಕ್ಕೆ ಸೇರ್ಪಡೆ ಮಾಡ​ಲಾ​ಗು​ತ್ತದೆ ಎಂದೇ ಹೇಳ​ಲಾ​ಗಿತ್ತು. ಆದರೆ, ಇದಾದ ನಂತರ ಯಾವುದೇ ಪ್ರಕ್ರಿಯೆ ನಡೆ​ದಿಲ್ಲ.

ರಾಹುಲ್‌ ಭೇಟಿ ಮಾಡ​ಲಿ​ರುವ ಪರಂ:  ಈ ನಡುವೆ, ಉಪ ಮುಖ್ಯ​ಮಂತ್ರಿ ಡಾ.ಜಿ. ಪರ​ಮೇ​ಶ್ವರ್‌ ಅವರು ಬುಧ​ವಾರ ಸಂಜೆ ದೆಹ​ಲಿಗೆ ತೆರ​ಳಿದ್ದು, ಗುರು​ವಾರ ಅವರು ಎಐ​ಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹಾಗೂ ಹಿರಿಯ ಮುಖಂಡ ಅಹ್ಮದ್‌ ಪಟೇಲ್‌ ಅವ​ರನ್ನು ಭೇಟಿ​ಯಾ​ಗ​ಲಿ​ದ್ದಾರೆ.

ಆದರೆ, ಈ ಭೇಟಿಯ ಉದ್ದೇಶ ಸಂಪುಟ ವಿಸ್ತ​ರ​ಣೆ ಕುರಿತು ಅಲ್ಲ ಎಂದು ಮೂಲ​ಗಳು ಸ್ಪಷ್ಟ​ಪ​ಡಿ​ಸಿವೆ. ಲೋಕ​ಸಭೆ ಚುನಾ​ವ​ಣೆ ಹಿನ್ನೆ​ಲೆ​ಯಲ್ಲಿ ಸಂಪ​ನ್ಮೂಲ ಕ್ರೋಢೀಕ​ರಣ ಕುರಿತು ಹಾಗೂ ಲೋಕ​ಸಭೆ ಚುನಾ​ವ​ಣೆಗೆ ಸಿದ್ಧತೆ ಕುರಿತು ಅವರು ಹೈಕ​ಮಾಂಡ್‌​ನೊಂದಿಗೆ ಚರ್ಚಿ​ಸುವ ಸಾಧ್ಯ​ತೆ​ಯಿದೆ ಎಂದು ಮೂಲ​ಗಳು ಹೇಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?