ಯಾರಿಗೆ ಬಂದಿದೆ ಅಚ್ಛೇದಿನ್?: ಬಿಜೆಪಿ ವಿರುದ್ಧ ಸಿದ್ದು ವಾಗ್ದಾಳಿ

Published : Apr 28, 2023, 01:00 PM ISTUpdated : Apr 28, 2023, 01:13 PM IST
ಯಾರಿಗೆ ಬಂದಿದೆ ಅಚ್ಛೇದಿನ್?: ಬಿಜೆಪಿ ವಿರುದ್ಧ ಸಿದ್ದು ವಾಗ್ದಾಳಿ

ಸಾರಾಂಶ

ರಾಜ್ಯ​ದಲ್ಲಿ ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬಂದರೆ ಭ್ರಷ್ಟಾ​ಚಾ​ರಕ್ಕೆ ಕಡಿ​ವಾಣ ಹಾಕ​ಲಾ​ಗು​ವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ವಾ​ಸ​ನೆ ​ನೀ​ಡಿ​ದ​ರು.

ರಾಯಚೂರು (ಏ.28) : ರಾಜ್ಯ​ದಲ್ಲಿ ಕಾಂಗ್ರೆಸ್‌ ಅಧಿ​ಕಾ​ರಕ್ಕೆ ಬಂದರೆ ಭ್ರಷ್ಟಾ​ಚಾ​ರಕ್ಕೆ ಕಡಿ​ವಾಣ ಹಾಕ​ಲಾ​ಗು​ವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಶ್ವಾ​ಸ​ನೆ ​ನೀ​ಡಿ​ದ​ರು.

ರಾ​ಯ​ಚೂರು ಗ್ರಾಮೀಣ ಕ್ಷೇತ್ರದ ವ್ಯಾಪ್ತಿಗೆ ಬರುವ ಸಮೀ​ದ ಸಾಥ್‌ ಮೈಲ್‌ ಕ್ರಾಸ್‌ ಹಾಗೂ ರಾಯ​ಚೂರು ನಗ​ರದ ವಾಲ್‌​ಕಾಟ್‌ ಮೈದಾ​ನ​ದ​ಲ್ಲಿ ಗುರು​ವಾರ ಸಂಜೆ ಹಮ್ಮಿ​ಕೊಂಡಿದ್ದ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ದದ್ದಲ್‌ ಹಾಗೂ ನಗರ ಕ್ಷೇತ್ರದ ಅಭ್ಯರ್ಥಿ ಮಹ​ಮ್ಮದ್‌ ಶಾಲಂ ಪರ​ವಾದ ಬೃಹತ್‌ ಪ್ರಚಾರ ಸಮಾವೇಶದಲ್ಲಿ ಮಾತನಾಡಿದರು.

ಮೋದಿ ಹೇಳಿದ ‘ಆತ್ಮಹತ್ಯೆ ಜೋಕಿಗೆ’ ರಾಹುಲ್‌, ಪ್ರಿಯಾಂಕಾ ಕಿಡಿ

ರಾಜ್ಯ​ದಲ್ಲಿ ಇಷ್ಟುದಿನ ಆಡ​ಳಿತ ನಡೆ​ಸಿದ ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಭ್ರಷ್ಟಾಚಾರದಲ್ಲಿ ಮುಳಗಿದೆ. ನರೇಂದ್ರ ಮೋದಿಯವರು ಎಷ್ಟುಸುಳ್ಳು ಹೇಳುತ್ತಾರೆ. ನಾ ಖಾವುಂಗಾ ಕಾನೆದೊಂಗ ಅಂತ ಹೇಳುತ್ತಾರೆ. ಯಾರಿಗೆ ಬಂದಿದೆ ಅಚ್ಛೆದಿನ್‌ ಎಂದು ಟೀಕಿಸಿದರು.

ಸಿಎಂ ಬಸವರಾಜ ಬೊಮ್ಮಾಯಿ ನೇತೃ​ತ್ವ​ದಲ್ಲಿ ಆಡ​ಳಿತ ನಡೆ​ಸಿದ ಬಿಜೆ​ಪಿ ಶೇ.40ರಷ್ಟುಕಮಿಷನ್‌ ಪಡೆ​ಯುವ ಸರ್ಕಾರವಾಗಿದೆ. ಯಾವುದೇ ಇಲಾಖೆಗೆ ಹೋದರೂ ಲಂಚ. ಅಧಿಕಾರಿಗಳು ಹುದ್ದೆ ಪಡೆಯಲು ಲಂಚ ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗ್ಯಾಸ್‌, ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಮಾಡಿದೆ. ಜಿಎಸ್‌ಟಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗುತ್ತಿದೆ. ಇಂ​ತ​ಹ ಸರ್ಕಾರ ನಿಮಗೆ ಬೇಕಾ ಎಂದು ಪ್ರಶ್ನಿಸಿದರು.

ನಮ್ಮ ಪ್ರಣಾಳಿಕೆಯಲ್ಲಿರುವ ಎಲ್ಲ ಭರ​ವ​ಸೆ​ಗ​ಳನ್ನು ಜಾರಿಗೊಳಿಸುತ್ತಿದ್ದೇನೆ. ನಮ್ಮ ಸರ್ಕಾರ ನುಡಿದಂತೆ ನಡೆದಿದೆ. ರಾಜ್ಯದಲ್ಲಿ ಬಿಜೆಪಿಯಿಂದ ಪ್ರಜಾಪ್ರಭುತ್ವ ಹಾಳಾಗಿವೆ. ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಗಿತ್ತು. ಕುಮಾರಸ್ವಾಮಿ ಅವರನ್ನೇ ಮುಖ್ಯಮಂತ್ರಿ ಮಾಡಲಾಯಿತು. ಕೊ​ನೆಗೆ ಕುಮಾರಸ್ವಾಮಿ ಕಾರ್ಯಕರ್ತರ ವಿಶ್ವಾಸ ತೆಗೆದುಕೊಳ್ಳದ ಹಿನ್ನೆಲೆ ಸರ್ಕಾರ ಬಿದ್ದು ಹೋಯಿತು. ಆದರೆ, ಅವರು ನನ್ನ ಮೇಲೆ ಆರೋಪ ಮಾಡಿದ್ದರು. ಬಿಜೆಪಿ ಸರ್ಕಾರ ರಚನೆಗೆ ಹೋದ ಶಾಸಕರಲ್ಲಿ ಮೂವರು ಜೆಡಿಎಸ್‌ ಶಾಸಕರಿದ್ದರು. ಅವರನ್ನು ನಾನು ಕಳುಹಿಸಿದ್ದಾ ಎಂದು ವ್ಯಂಗ್ಯವಾಡಿ​ದ​ರು.

ಸಿದ್ದರಾಮನಹುಂಡಿಯಲ್ಲಿ ಬಿಜೆಪಿಯಿಂದ ಜಗಳಕ್ಕೆ ರಾಜಕೀಯ ಬಣ್ಣ ಹಚ್ಚಲಾಗಿದೆ: ಯತೀಂದ್ರ ತಿರುಗೇಟು

ರಾಯಚೂರು ಗ್ರಾಮೀಣ ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ದದ್ದಲ್‌, ಐಸಿಸಿ ಕಾರ್ಯದರ್ಶಿ ಎನ್‌.ಎಸ್‌.ಬೋಸರಾಜ, ಮಾಜಿ ಸಚಿವೆ ಉಮಾಶ್ರೀ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ ಮಾತನಾಡಿದರು.

ಈ ಸಂದ​ರ್ಭ​ದಲ್ಲಿ ಕೆಪಿಸಿಸಿ ಸದಸ್ಯ ಪಾರಸಮಲ್‌ ಸುಖಾಣಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಬಸವರಾಜ ಪಾಟೀಲ ಇಟಗಿ, ವಿಧಾನ ಪರಿಷÜತ್‌ ಉಪಸಭಾಪತಿ ಡೇವಿಡ್‌ ಸಿಮಿಯಾನ್‌, ಸದಸ್ಯ ಪ್ರಕಾಶ ರಾಥೋಡ್‌, ರವಿ ಬೋಸ​ರಾಜು, ಕೆ.ಶಾಂತಪ್ಪ, ಬಷೀ​ರು​ದ್ದೀ​ನ್‌, ಕೆ.ಶರಣಪ್ಪ,ಜ​ಯಣ್ಣ, ರುದ್ರಪ್ಪ ಅಂಗ​ಡಿ ಸೇರಿ​ದಂತೆ ಪಕ್ಷದ ವಿವಿಧ ಬ್ಲಾಕ್‌ಗಳ ಪ್ರಮು​ಖರು, ಬೆಂಬ​ಲಿ​ಗ​ರು, ​ಕಾ​ರ್ಯ​ಕ​ರ್ತ​ರು,​ ಗ್ರಾ​ಮೀಣ ಭಾಗದ ಮತ​ದಾ​ರರು ಭಾಗ​ವ​ಹಿ​ಸಿ​ದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!