ಚಿಂಚೋಳಿ: ಮೃತ ಹಣಮಂತ ಭೋವಿ ಕುಟುಂಬಕ್ಕೆ ಸಂಸದ ಉಮೇಶ ಜಾಧವ್‌ ಸಾಂತ್ವನ

Published : Jun 20, 2023, 09:45 PM IST
ಚಿಂಚೋಳಿ: ಮೃತ ಹಣಮಂತ ಭೋವಿ ಕುಟುಂಬಕ್ಕೆ ಸಂಸದ ಉಮೇಶ ಜಾಧವ್‌ ಸಾಂತ್ವನ

ಸಾರಾಂಶ

ಹಣಮಂತಪ್ಪ ಸಂಜಪ್ಪ ಭೋವಿ, ಮಕ್ಕಳಾದ ಅಕ್ಷಿತಾ, ಓಂಕಾರ ಮೃತಪಟ್ಟಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಹಣಕಾಸು ಸಮಸ್ಯೆ ಎದುರಿಸುತ್ತಿದ್ದ ಹಣ​ಮಂತ​ಪ್ಪ ದುಡುಕಿನ ನಿರ್ಧಾರ ಕೈಕೊಂಡಿರುವುದು ಅತ್ಯಂತ ನೋವುಂಟು ಮಾಡಿದೆ. ಮೃತನ ಕುಟುಂಬಕ್ಕೆ ಸರ್ಕಾರದಿಂದ ಸಾಮಾಜಿಕ ಕುಟುಂಬ ಭದ್ರತಾ ಯೋಜನೆ ಅಡಿಯಲ್ಲಿ ಪರಿಹಾರ ಕೊಡಿಸಲಾಗುವುದು. ಮುಖ್ಯಮಂತ್ರಿಗಳ ಪರಿಹಾರ ನಿಧಿ​ಯಿಂದ ಸಹ ಪರಿಹಾರ ಕೊಡಿಸಲಾಗುವುದು: ಉಮೇಶ ಜಾಧವ್‌ 

ಚಿಂಚೋಳಿ(ಜೂ.20):  ತಾಲೂಕಿನ ಗಡಿಪ್ರದೇಶ ಕುಂಚಾವರಂ ಗ್ರಾಮದಲ್ಲಿ ರವಿವಾರ ಹಣಮಂತ ಸಂಜಪ್ಪ ಭೋವಿ ಎಂಬು​ವ​ವರು ತನ್ನ ಇಬ್ಬರು ಮಕ್ಕಳನ್ನು ಬೆನ್ನಿಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿ​ಕೊಂಡಿ​ದ್ದರು. ಈತನ ಕುಟುಂಬಕ್ಕೆ ಕಲಬುರಗಿ ಸಂಸದ ಡಾ.ಉಮೇಶ ಜಾಧವ್‌ ಭೇಟಿ ನೀಡಿ ಸಾಂತ್ವನ ಹೇಳಿ ಸರ್ಕಾರದಿಂದ ಸಿಗುವ ಎಲ್ಲ ಪರಿಹಾರಗಳನ್ನು ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.

ನಂತರ ಮಾತ​ನಾ​ಡಿದ ಸಂಸ​ದರು, ಹಣಮಂತಪ್ಪ ಸಂಜಪ್ಪ ಭೋವಿ, ಮಕ್ಕಳಾದ ಅಕ್ಷಿತಾ(6), ಓಂಕಾರ(9) ಮೃತಪಟ್ಟಿರುವುದು ಅತ್ಯಂತ ದುಃಖಕರವಾದ ಸಂಗತಿಯಾಗಿದೆ. ಹಣಕಾಸು ಸಮಸ್ಯೆ ಎದುರಿಸುತ್ತಿದ್ದ ಹಣ​ಮಂತ​ಪ್ಪ ದುಡುಕಿನ ನಿರ್ಧಾರ ಕೈಕೊಂಡಿರುವುದು ಅತ್ಯಂತ ನೋವುಂಟು ಮಾಡಿದೆ. ಮೃತನ ಕುಟುಂಬಕ್ಕೆ ಸರ್ಕಾರದಿಂದ ಸಾಮಾಜಿಕ ಕುಟುಂಬ ಭದ್ರತಾ ಯೋಜನೆ ಅಡಿಯಲ್ಲಿ ಪರಿಹಾರ ಕೊಡಿಸಲಾಗುವುದು. ಮುಖ್ಯಮಂತ್ರಿಗಳ ಪರಿಹಾರ ನಿಧಿ​ಯಿಂದ ಸಹ ಪರಿಹಾರ ಕೊಡಿಸಲಾಗುವುದು ಎಂದು ಹೇಳಿ​ದರು.

ಗುಲ್ಬರ್ಗ ವಿಶ್ವವಿದ್ಯಾಲಯ ಘಟಿಕೋತ್ಸವ: ಬಡತನ ಮೆಟ್ಟಿ ಪದಕ ಬಾಚಿದ ವಿದ್ಯಾರ್ಥಿನಿಯರು

ತಾಯಿ ನಾಗಮ್ಮ ಭೋವಿ ಮಾತನಾಡಿ, ಉಪವಾಸ, ವನವಾಸ ಮಾಡಿ ನನ್ಮ ಮಕ್ಕಳನ್ನು ಸಾಕಿದ್ದೇನೆ. ಆದರೆ ನನ್ನ ಮಗ ಹಣಮಂತ ಈ ತರಹ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಎಂದು ನನಗೆ ತಿಳಿದಿಲ್ಲ. ಇದು ನನಗೆ, ಕುಟುಂಬಕ್ಕೆ ಆಘಾತವನ್ನುಂಟು ಮಾಡಿದೆ ಎಂದು ಗೋಗರೆಳೆದಳು.

ಈ ವೇಳೆ ತಹಸೀಲ್ದಾರ್‌ ವಿರೇಶ ಮುಳಗುಂದಮಠ, ತಾಪಂ ಅ​ಧಿಕಾರಿ ವೈ.ಎಲ್‌.ಹಂಪಣ್ಣ, ಡಾ.ಅಂಜನಯ್ಯ, ಸಂಜೀವ ಕೊಡಂ, ಗೋಪಾಲರಾವ ಕಟ್ಟಿಮನಿ, ಯೇಶಪ್ಪ, ಅಶೋಕ ಚವ್ಹಾಣ, ರಾಜೂ ಪವಾರ, ಪಿಎಸ್‌ಐ ಉದ್ದಂಡಪ್ಪ ಮಣ್ಣೂರಕರ ಇನ್ನಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಜ.8, 9ರವರೆಗೆ ಕಾಯಿರಿ : ಡಿಕೆ ಬಣದ ‘ತಿರುಗೇಟು’!
ಕೆಪಿಎಸ್‌ ಶಾಲೆಗಾಗಿ ಯಾವುದೇ ಕನ್ನಡ ಶಾಲೆ ಮುಚ್ಚುವುದಿಲ್ಲ: ಮಧು ಬಂಗಾರಪ್ಪ ಸ್ಪಷ್ಟನೆ