Sadhana samavesha: 3 ವರ್ಷಗಳ ಸಾಧನೆಯಲ್ಲ, 300 ವೈಫಲ್ಯಗಳ ಸಾಧನೆ: ಸಂಸದ ರಮೇಶ್ ಜಿಗಜಿಣಗಿ ವಾಗ್ದಾಳಿ

Kannadaprabha News   | Kannada Prabha
Published : May 20, 2026, 08:30 AM IST
MP Ramesh Jigajinagi criticized the Congress government Sadhana Convention

ಸಾರಾಂಶ

ಸಂಸದ ರಮೇಶ ಜಿಗಜಿಣಗಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರದ ಮೂರು ವರ್ಷಗಳ ಆಡಳಿತವನ್ನು ಸಾಧನೆಯಲ್ಲ, ಬದಲಿಗೆ 300 ವೈಫಲ್ಯಗಳ ಸರಮಾಲೆ ಎಂದು ತೀವ್ರವಾಗಿ ಟೀಕಿಸಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳು, ಭ್ರಷ್ಟಾಚಾರ, ಮತ್ತು ಮಹಿಳೆಯರ ಅಸುರಕ್ಷತೆಯಂತಹ ವಿಷಯಗಳ ಬಗ್ಗೆ ಅವರು ತೀವ್ರ ವಾಗ್ದಾಳಿ ನಡೆಸಿದರು.

ವಿಜಯಪುರ (ಮೇ.20) ರಾಜ್ಯ ಕಾಂಗ್ರೆಸ್ ಸರ್ಕಾರದ್ದು ಮೂರು ವರ್ಷಗಳ ಸಾಧನೆಯಲ್ಲ. ಅದು 300 ವೈಫಲ್ಯಗಳ ಸಾಧನೆಯಾಗಿದೆ. ಇವರ ಸರ್ಕಾರದಲ್ಲಿನ 300 ವೈಫಲ್ಯಗಳ ಸರಮಾಲೆಯನ್ನೇ ಪೋಣಿಸಿ ನಾನು ಸಿಎಂ ಸಿದ್ರಾಮಣ್ಣನ ಕೊರಳಿಗೆ ಹಾರ ಹಾಕುತ್ತೇನೆ ಎಂದು ಸಂಸದ ರಮೇಶ ಜಿಗಜಿಣಗಿ ವ್ಯಂಗ್ಯವಾಡಿದರು.

ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ವರ್ಷಗಳಲ್ಲಿ ಅವರು ಏನು ಸಾಧನೆ ಮಾಡಿದ್ದಾರೆ? ಒಂದೆಡೆ ಮಹಿಳೆಯರಿಗೆ ಗ್ಯಾರಂಟಿ ಕೊಟ್ಟು, ಅವರ ಗಂಡಂದಿರ ಜೇಬಿನಿಂದ ಕಿತ್ತುಕೊಂಡಿದ್ದಾರೆ. ನಿಮಗೆ ನಿಭಾಯಿಸುವ ತಾಕತ್ ಇದ್ದರೆ ಗ್ಯಾರಂಟಿ ಕೊಡಬೇಕು. ತಾಕತ್ ಇಲ್ಲದಿದ್ದರೆ ಮಾಡಬಾರದು. ಇವರ ಸರ್ಕಾರದಲ್ಲಿ ಬರಿ ಭ್ರಷ್ಟಾಚಾರವೇ ತುಂಬಿ ತುಳುಕುತ್ತಿದೆ ಎಂದು ದೂರಿದರು. ಜಗತ್ತಿನಲ್ಲಿ ಈಗ ಯುದ್ಧ ಆರಂಭವಾಗಿದ್ದು, ಅದರಿಂದ ಕೆಲ ಸಮಸ್ಯೆಗಳು ಎದುರಾಗಿವೆ. ಆದರೆ, ಪಶ್ಚಿಮ ಬಂಗಾಳದಲ್ಲಿ ಜನತೆ ಇತಿಹಾಸವನ್ನೇ ನಿರ್ಮಿಸಿದರು, ಇದೆಲ್ಲ ಮೋದಿ ಅವರ ಅಭಿವೃದ್ಧಿಯಿಂದ ಸಾಧ್ಯವಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮುಖಂಡರಾದ ಕಾಸುಗೌಡ ಬಿರಾದಾರ, ಸಂಜೀವ ಐಹೊಳೆ, ಈರಣ್ಣ ರಾವೂರ, ವಿಜಯ ಜೋಶಿ ಇದ್ದರು.

ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ರಕ್ಷಣೆಯಿಲ್ಲ. ಎಲ್ಲೆಂದರಲ್ಲಿ ಕಳ್ಳತನ, ದರೋಡೆಗಳು ನಡೆದಿವೆ. ಇವರ ಮೂರು ವರ್ಷದ ಸಾಧನೆ ಶೂನ್ಯವಾಗಿದ್ದು, ಶಾಸಕರಿಗೆ ಅನುದಾನವೇ ಕೊಟ್ಟಿಲ್ಲ. ಕೇಂದ್ರದಿಂದ ಮೋದಿಯವರು ಕೊಟ್ಟಿರುವ ರಸ್ತೆಗಳಿಗೆ ಕಾಂಗ್ರೆಸ್‌ನವರು ಭೂಮಿಪೂಜೆ ಮಾಡಿ, ತಮ್ಮ ಸರ್ಕಾರದ ರಸ್ತೆ ಎಂದು ಹೇಳುತ್ತಾರೆ. ದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ಪರವಾಗಿದ್ದೇವೆ ಎಂದು ಹೇಳಿ, ಅವರೆಲ್ಲರಿಗೆ ಮೀಸಲಿದ್ದ ಹಣವನ್ನೇ ಎತ್ತಿಹಾಕಿದ್ದಾರೆ. ಹಣ ನುಂಗಿದ ಕೆಲ ಮಂತ್ರಿಗಳೇ ಜೈಲಿಗೆ ಹೋಗಿದ್ದಾರೆ. ಕುರ್ಚಿ ಕಿತ್ತಾಟದಲ್ಲಿ ಅಭಿವೃದ್ಧಿಯನ್ನೇ ಮರೆತಿರುವ ಇವರು ತಮ್ಮ ತಮ್ಮ ಶಕ್ತಿ ಪ್ರದರ್ಶನದಲ್ಲೇ ಕಾಲಹರಣ ಮಾಡುತ್ತಿದ್ದಾರೆ.

-ರಮೇಶ ಜಿಗಜಿಣಗಿ ಸಂಸದ, ವಿಜಯಪುರ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Mamata Banerjee: ಮೋದಿ ದಿನಗಳು ಮುಗಿದಿವೆ, ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಕಿತ್ತೊಗೆಯುತ್ತೇವೆ: ಮಮತಾ ಬ್ಯಾನರ್ಜಿ ವಾಗ್ದಾಳಿ
'ಎಲ್ಲಿ ಬಂದಿದೆ ಮೋದಿ ಸರ್ಕಾರದ ಅಚ್ಛೇ ದಿನ?' ಗುಜರಾತ್‌ ಮಾದರಿ ಟೊಳ್ಳು, ಕರ್ನಾಟಕ ಮಾದರಿ ಆಡಳಿತವೇ ಉತ್ತಮ: ಸಿಎಂ