ಲೋಕಸಭಾ ಚುನಾವಣೇಲಿ ನಮ್ಮ ಪಕ್ಷಕ್ಕೆ 20-22 ಸ್ಥಾನ ಕಟ್ಟಿಟ್ಟ ಬುತ್ತಿ: ಸಚಿವ ಜಮೀರ್ ಅಹ್ಮದ್

Published : Mar 01, 2024, 04:21 PM IST
ಲೋಕಸಭಾ ಚುನಾವಣೇಲಿ ನಮ್ಮ ಪಕ್ಷಕ್ಕೆ 20-22 ಸ್ಥಾನ ಕಟ್ಟಿಟ್ಟ ಬುತ್ತಿ: ಸಚಿವ ಜಮೀರ್ ಅಹ್ಮದ್

ಸಾರಾಂಶ

ಮುಂಬರುವ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಬರುತ್ತೆ. ಜನ ನಮ್ಮ ಪರ ಇದ್ದಾರೆ. ನಿಮಗೆ ಆಶ್ಚರ್ಯಕರ ಫಲಿತಾಂಶ ಬರುತ್ತೆ ನೋಡ್ತಾ ಇರಿ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.

ಬೆಂಗಳೂರು (ಮಾ.1): ಮುಂಬರುವ ಲೋಕಸಭಾ ಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನ ಬರುತ್ತೆ. ಜನ ನಮ್ಮ ಪರ ಇದ್ದಾರೆ. ನಿಮಗೆ ಆಶ್ಚರ್ಯಕರ ಫಲಿತಾಂಶ ಬರುತ್ತೆ ನೋಡ್ತಾ ಇರಿ ಎಂದು ಸಚಿವ ಜಮೀರ್ ಅಹ್ಮದ್ ತಿಳಿಸಿದರು.

ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20-22 ಸ್ಥಾನ ಗೆಲ್ತೀವಿ. ವಿಧಾನಸಭೆಯಲ್ಲಿ 135 ಸ್ಥಾನ ಬರುತ್ತೆ ಅಂತ ಹೇಳಿದ್ದೆ, ಯಾರು ನಂಬಲಿಲ್ಲ. ಆದರೆ ನಾನು ಹೇಳಿದ್ದಕ್ಕಿಂತ ಒಂದು ಹೆಚ್ಚಾಗಿ 136 ಸ್ಥಾನ ಬಂತು. ಅದೇ ರೀತಿ ಲೋಕಸಭೆಯಲ್ಲಿ 20-22 ಸ್ಥಾನ ಬರುತ್ತದೆಂದು ವಿಶ್ವಾಸವ್ಯಕ್ತಪಡಿಸಿದರು.

ಇನ್ನು ರಾಮಮಂದಿರ, ಹಿಂದೂ ಮುಸ್ಲಿಂ ಅನ್ನೋದು ಬಿಜೆಪಿಯವರು. ಆದರೆ ಅಭಿವೃದ್ಧಿ ಮುಂದಿಟ್ಟುಕೊಂಡು ಚುನಾವಣೆ ಗೆಲ್ತೇವೆ. ಮೋದಿ 15ಲಕ್ಷ ಹಾಕ್ತೀನಿ ಅಂದಿದ್ರು ಹಾಕಿದ್ರಾ? ಗ್ಯಾಸ್ ಬೆಲೆ, ಪೆಟ್ರೋಲ್, ಡಿಸೇಲ್ ಬೆಲೆ ಎಷ್ಟು ಆಗಿದೆ. ಅಚ್ಚೇ ದಿನ ಅಂದ್ರು, ಎಲ್ಲಿ ಬಂತು ಅಚ್ಚೇ ದಿನ? ನಮಗೆ ಅಚ್ಚೇ ದಿನ ಬೇಡ ಹಳೆ ದಿನ ಕೊಡಿ ಅಂತ ಜನ ಮಾತಾಡ್ತಿದ್ದಾರೆ. ಸಬ್ ಕಾ ಸಬ್ ಕಾ ವಿಕಾಸ್ ಎಲ್ಲಿ ಹೋಯ್ತು? ಎಂದು ಪ್ರಧಾನಿ ವಿರುದ್ಧ ಹರಿಹಾಯ್ದರು.

ಶಕ್ತಿಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ; FSL Report ಬಂದ ನಂತರ ಕ್ರಮ: ಗೃಹ ಸಚಿವ ಪರಮೇಶ್ವರ್

ಜಾತಿ ಗಣತಿಗೆ ಲಿಂಗಾಯತ, ಒಕ್ಕಲಿಗ ಸಚಿವರ ವಿರೋಧವಿದೆ ಎಂದು ಹೇಳ್ತಾರೆ. ಆದರೆ ಹಾಗೆ ಯಾರೂ ವಿರೋಧಿಸಿಲ್ಲ. ನಾನು ನಿನ್ನೆ ಅಧಿವೇಶನದಲ್ಲೇ ಇದ್ದೆ. ಯಾರೂ ವರದಿಗೆ ವಿರೋಧ ಮಾಡಿಲ್ಲ. ವರದಿ ಮೂಲಕ ಎಷ್ಟು ಜನರು ಇದ್ದಾರೆ ಅಂತ ಸತ್ಯ ಹೊರಗೆ ಬಂದಿದೆ. SC ಜನರು ಹೆಚ್ಚು ಇದ್ದಾರೆ. 70 ಲಕ್ಷ ಮುಸ್ಲಿಂಮರು ಅನ್ನೋದು ತಿಳಿದುಬಂದಿದೆ. ಸತ್ಯವನ್ನೇ ವರದಿ ಕೊಟ್ಟಿರೋದು ಜಾತಿ ಗಣತಿ ವರದಿ ಸತ್ಯ ಎಂದು ಸಮರ್ಥಿಸಿಕೊಂಡರು.

ಅಂಗಾಂಗ ದಾನಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದ ಸಿಎಂ ಸಿದ್ದರಾಮಯ್ಯ

ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸಮೀರ್, ಘಟನೆ ಸಂಬಂಧ ಈಗಾಗಲೇ ವಿಡಿಯೋಗಳನ್ನು ಎಫ್‌ಎಸ್‌ಎಲ್‌ಗೆ ಕಳಿಸಲಾಗಿದೆ. ಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ. ವರದಿ ಬಂದ ನಂತರ ಸತ್ಯ ಏನು ಅಂತಾ ಗೊತ್ತಾಗುತ್ತೆ. ವರದಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಕೂಗಿದ್ರೆ ನಾನೇ ಹೇಳ್ತೀನಿ ಅವರಿಗೆ ಗಲ್ಲು ಶಿಕ್ಷೆ ಆಗಬೇಕು ಅಂತಾ. ಯಾರೇ ಕೂಗಿದ್ರೂ ಕೂಗಿದವರು ದೇಶದ್ರೋಹಿಗಳು. ಅಂಥವರಿಗೆ ಗಲ್ಲು ಶಿಕ್ಷೆಎ ಆಗಬೇಕು. ನಾನೇ ಇದಕ್ಕೆ ಒತ್ತಾಯ ಮಾಡ್ತೇನೆ. ವರದಿ ಬರಲಿ ಬಂದ ಬಳಿಕ ಕ್ರಮ ತೆಗೆದುಕೊಳ್ತಿವಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?
ಸಿಎಂ ಪುತ್ರ ಯತೀಂದ್ರ ಹೇಳಿಕೆ ವಿವಾದ; ಬೆಳಗಾವಿಯಲ್ಲಿ ಡಿಕೆಶಿ ಅಲರ್ಟ್, ಆಪ್ತರ ಲಂಚ್ ಮೀಟಿಂಗ್!