ರಾಜಕೀಯದಲ್ಲಿ ಕುತೂಹಲ ಮೂಡಿಸಿದ ಈಶ್ವರಪ್ಪ ಹೇಳಿಕೆ : ಮೇಜರ್ ಬದಲಾವಣೆ

By Kannadaprabha NewsFirst Published Jul 29, 2021, 7:48 AM IST
Highlights
  • ನೂತನ ಮುಖ್ಯಮಂತ್ರಿ ಆಯ್ಕೆ ಬೆನ್ನಲ್ಲೇ ಇನ್ನು ಪಕ್ಷದಲ್ಲಿ ಬದಲಾವಣೆಗಳು ಆಗುವುದಿದೆ 
  • ಮಾಜಿ ಉಪ ಮುಖ್ಯಮಂತ್ರಿ ಕೆಎಸ್‌ ಈಶ್ವರಪ್ಪ ಕುತೂಹಲಕರ  ಹೇಳಿಕೆ

 ಬೆಂಗಳೂರು (ಜು.29): ನೂತನ ಮುಖ್ಯಮಂತ್ರಿ ಆಯ್ಕೆ ಬೆನ್ನಲ್ಲೇ ಇನ್ನು ಪಕ್ಷದಲ್ಲಿ ಬದಲಾವಣೆಗಳು ಆಗುವುದಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆಎಸ್‌ ಈಶ್ವರಪ್ಪ ಕುತೂಹಲಕರ  ಹೇಳಿಕೆ ನೀಡಿದ್ದಾರೆ. 

ಬುಧವಾರ ಮಾತನಾಡಿದ ಅವರು ಈಗಷ್ಟೇ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದಾರೆ. ಇನ್ನೂ ಹಲವು ಬದಲಾವಣೆಗಳು ಆಗಲಿದೆ ಎಲ್ಲವನ್ನೂ ಕಾದು ನೋಡಿ  ಎಂದರು,.

ಚಲ್ತಾ ಹೇ...ನಡೆಯಲ್ಲ, ನೂತನ ಸಿಎಂ ಬೊಮ್ಮಾಯಿ ಸಂದರ್ಶನ

 ಬೊಮ್ಮಾಯಿ ಸಂಪುಟದಲ್ಲಿ ಹಿರಿಯರಿಗೆ ಅವಕಾಶ ನೀಡುವುದಿಲ್ಲ ಎಂಬ ಸುದ್ದಿ  ಹರಿದಾಡುತ್ತಿರುವ ಬೆನ್ನಲ್ಲೇ ಈಶ್ವರಪ್ಪ ಅವರ ಈ ಹೇಳಿಕೆ ಪಕ್ಷ ವಲಯದಲ್ಲಿ ಭಾರೀ ಬದಲಾವಣೆಗಳ ಮುನ್ಚೂಚನೆಯೇ ಎಂಬ ಮಾತುಗಳು  ಕೇಳಿ ಬರುತ್ತಿದೆ. ಅದಕ್ಕರೆ ಶೆಟ್ಟರ್ ಸಂಪುಟ ಸೇರುವುದಿಲ್ಲ ಎಂಬ ಹೇಳಿಕೆಯೂ  ಅನುಮಾನಗಳಿಗೆ ಕಾರಣವಾಗಿದೆ. 

click me!