
ಬಾಗಲಕೋಟೆ (ಏ.27): ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಶಾಸಕ ಲಕ್ಷ್ಮಣ ಸವದಿ ಮತ್ತೊಮ್ಮೆ ಭಾರತ ಮಾತೆ ಘೊಷಣೆ ಕೂಗಿದ್ದಾರೆ.
ಭಾರತ್ ಮಾತಾ ಕೀ ಜೈ ಎನ್ನುತ್ತಲೇ ಭಾಷಣ ಆರಂಭಿಸಿದ ಶಾಸಕ ಲಕ್ಷ್ಮಣ್ ಸವದಿ, ದೇಶಭಕ್ತಿಯನ್ನು ಬಿಜೆಪಿಯವರು ಗುತ್ತಿಗೆ ಪಡೆದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಸವದಿ ಜೋರಾಗಿ ಎಲ್ಲರೂ ಒಮ್ಮೆ ಭಾರತ್ ಮಾತಾಕೀ ಜೈ ಹೇಳಿ ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಈ ವೇಳೆ ಜನರಿಂದಲೂ ಭಾರತ್ ಮಾತಾಕೀ ಜೈ ಎಂಬ ಘೊಷಣೆ ಕೇಳಿಬಂತು. ಬಳಿಕ ಇದರ ವಿಡಿಯೋ ಮಾಡಿ ಮೋದಿ ಸಾಹೇಬ್ರಿಗೆ ಕಳಿಸಿಕೊಡಿ ಎಂದರು.
ತವೆಯಲ್ಲಿ ಹಾಕಿದ್ದ ರೊಟ್ಟಿ ಹೊತ್ತಲಿಕ್ಕತ್ತಿದೆ ಅದನ್ನೊಂದು ಸಾರಿ ತಿರುವಿ ಹಾಕಿ ಎನ್ನುವ ಮೂಲಕ ಪರೋಕ್ಷವಾಗಿ ಸಂಸದ ಸ್ಥಾನದಿಂದ ಗದ್ದಿಗೌಡರನ್ನ ಕಿತ್ತುಹಾಕಿ ಎಂದರು. ನಮಗೆ ಮತ ಕೇಳಲು ನೈತಿಕ ಹಕ್ಕಿದೆ. ಆದರೆ ಈ ಬಿಜೆಪಿಯವರಿಗೆ ಮತ ಕೇಳಲು ಯಾವುದೇ ನೈತಿಕ ಹಕ್ಕಿಲ್ಲ. ಮತ ಕೇಳುವ ಹಕ್ಕು ಕಳೆದುಕೊಂಡಿದೆ. 2014ರಲ್ಲಿ ಹೊಸ ಕನಸು ಬಿತ್ತಿದ್ರು. ಇಡೀ ದೇಶದಲ್ಲಿ ನದಿ ಜೋಡಣೆ ಮಾಡ್ತೀವಿ ಅಂದ್ರು, ರೈತರ ಆದಾಯ ದ್ವಿಗುಣ ಮಾಡ್ತೀವಿ ಅಂದ್ರು, ಆದರೆ ದ್ವಿಗುಣ ಆಗಿದ್ದು ಗೊಬ್ಬರದ ಬೆಲೆಗಳು ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿಜೆಪಿಯಿಂದ ದೇಶಭಕ್ತಿ ಪಾಠ ಕಲಿಯಬೇಕಿಲ್ಲ: ಲಕ್ಷ್ಮಣ ಸವದಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.