ಉಪಚುನಾವಣೆಗೆ ಸಿದ್ಧತೆ?: 50 ಸಾವಿರ ಜನರಿಗೆ ಬಾಡೂಟ ಹಾಕಿಸಿದ ಬೈರತಿ ಬಸವರಾಜ್‌!

Published : Oct 10, 2019, 07:56 AM ISTUpdated : Oct 10, 2019, 09:12 AM IST
ಉಪಚುನಾವಣೆಗೆ ಸಿದ್ಧತೆ?: 50 ಸಾವಿರ ಜನರಿಗೆ ಬಾಡೂಟ ಹಾಕಿಸಿದ ಬೈರತಿ ಬಸವರಾಜ್‌!

ಸಾರಾಂಶ

50 ಸಾವಿರ ಜನರಿಗೆ ಬಾಡೂಟ ಹಾಕಿಸಿದ ಬೈರತಿ ಬಸವರಾಜ್‌| ಉಪಚುನಾವಣೆಗೆ ಸಿದ್ಧತೆ?| ರಾಜಕೀಯ ಗಣ್ಯರೂ ಭಾಗಿ| 2 ಟನ್‌ ಮಟನ್‌, ಮೂರೂವರೆ ಟನ್‌ ಚಿಕನ್‌, 500 ಕೇಜಿ ಮೀನು, 2 ಲಕ್ಷ ಮೊಟ್ಟೆಬಳಕೆ

ಕೆ.ಆರ್‌.ಪುರ[ಅ.10]: ಬೆಂಗಳೂರಿನ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಬೈರತಿ ಬಸವರಾಜ್‌ ಅವರು ವಿಜಯ ದಶಮಿ ಹಬ್ಬದ ಪ್ರಯುಕ್ತ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಬುಧವಾರ ಭರ್ಜರಿ ಬಾಡೂಟ ಏರ್ಪಡಿಸಿದ್ದರು.

ಡಿಸೆಂಬರ್‌ನಲ್ಲಿ ಉಪಚುನಾವಣೆ ನಿಗದಿಯಾಗಿದೆ, ಇದೇ ಸಂದರ್ಭಗಳಲ್ಲಿ ಕೆಆರ್‌ ಪುರ ಕ್ಷೇತ್ರದ ಮುಖಂಡರು, ಕಾರ್ಯಕರ್ತರು ಹಾಗೂ ಮತದಾರರಿಗೆ ಬೈರತಿ ಗ್ರಾಮ ಸಮೀಪದ ಕನಕಶ್ರೀ ಬಡಾವಣೆಯಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿಗೆ ಮಾಂಸಾಹಾರ ಹಾಗೂ ಸಸ್ಯಹಾರದ ವಿವಿಧ ಬಗೆಯ ಭಕ್ಷ್ಯ ಭೋಜನ ವ್ಯವಸ್ಥೆ ಮಾಡಿದ್ದರು. ಉಪಚುನಾವಣೆ ಸಮೀಸುತ್ತಿರುವುದರಿಂದ ಅನರ್ಹ ಬೈರತಿ ಬಸವರಾಜ್‌ ಈಗಿನಿಂದಲೇ ಚುನಾವಣೆ ತಯಾರಿ ಕೈಗೊಂಡಿದ್ದಾರೆ ಎನ್ನಲಾಗಿದೆ. ಅನರ್ಹ ಶಾಸಕರಾದ ಎಸ್‌.ಟಿ.ಸೋಮಶೇಖರ್‌, ಮುನಿರತ್ನ, ಆರ್‌.ಶಂಕರ್‌ ಹಾಗೂ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ, ಪೋಲಿಸ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.

ಶರತ್ ಬಚ್ಚೇಗೌಡ ಸೇರಿ ಟಿಕೆಟ್ ಕೇಳಿದವರಿಗೆಲ್ಲ ದೊಡ್ಡ ದೊಡ್ಡ ಹುದ್ದೆ ಗಿಫ್ಟ್ ಕೊಟ್ಟ BSY

ಬಾಡೂಟ ಕಾರ್ಯಕ್ರಮದಲ್ಲಿ ಬಿರಿಯಾನಿ, ನಾಟಿಕೋಳಿ ಸಾರು, ಮೀನು ಫ್ರೈ, ಕಬಾಬ್‌, ಮೊಟ್ಟೆಸೇರಿದಂತೆ ವಿವಿಧ ಮಾಂಸಹಾರದ ಭಕ್ಷಗಳು ಸಿದ್ಧಪಡಿಸಲಾಗಿತ್ತು. ಇದಕ್ಕಾಗಿ 2 ಟನ್‌ ಮಟನ್‌, ಮೂರೂವರೆ ಟನ್‌ ಚಿಕನ್‌, 500 ಕೇಜಿ ಮೀನು, 2 ಲಕ್ಷ ಮೊಟ್ಟೆಬಳಸಲಾಗಿತ್ತು. ಬಾಡೂಟಕ್ಕೆ ಸಾರ್ವಜನಿಕರನ್ನು ಕರೆತರಲು ಖಾಸಗಿ ಬಸ್‌ಗಳ ವ್ಯವಸ್ಥೆ ಸಹಾ ಮಾಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!