3 ಬಾರಿ ನಾಮಪತ್ರ, ಕಾಂಗ್ರೆಸ್ ಅಭ್ಯರ್ಥಿಗೆ 3 ನಾಮ ಖಚಿತ: ಸಂಸದ ಮುನಿಸ್ವಾಮಿ

By Kannadaprabha NewsFirst Published Apr 5, 2024, 11:12 AM IST
Highlights

ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಡಳಿತವು ಎತ್ತು ಏರಿಕೆ ಎಳೆದರೆ ಕೋಣ ನೀರಿಗೆ ಎಳೆದ ಗಾದೆಯಂತೆ ಆಗಿದೆ. ಕಾಂಗ್ರೆಸ್ ಪಕ್ಷ ಮುಖಂಡರ ಇಂದು ಪಾಕಿಸ್ತಾನದ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಪಕ್ಷವು ಒಂದು ಸೀಟ್ ಬರುವುದಿಲ್ಲ. ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲಿದೆ ಎಂದು ಭವಿಷ್ಯ ನುಡಿದ ಸಂಸದ ಎಸ್.ಮುನಿಸ್ವಾಮಿ 

ಕೋಲಾರ(ಏ.05):  ಕಾಂಗ್ರೆಸ್‌ ಪಕ್ಷವು ಮೂರು ಬಾಗಿಲು ಅಗಿರುವುದು ಅದಕ್ಕೆ ತಕ್ಕಂತೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೂರು ಬಣಗಳ ಜೊತೆಗೆ ಹೋಗಿ ಮೂರು ನಾಮಪತ್ರವನ್ನು ಹಾಕಿ ನಾಳೆ ಮೂರು ನಾಮಗಳನ್ನು ಹಾಕಿಸಿಕೊಳ್ಳುವುದು ಖಚಿತ ಅದೇ ರೀತಿ ನಾವು ಈ ಚುನಾವಣೆಯಲ್ಲಿ ೩ ಲಕ್ಷಕ್ಕೂ ಅಧಿಕ ಮತಗಳಿಂದ ಗೆಲುವು ಪಡೆಯುವುದು ಖಚಿತ ಎಂದು ಸಂಸದ ಎಸ್.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಜೆ.ಡಿ.ಎಸ್. ಪಕ್ಷ ಇಲ್ಲದಿದ್ದರೆ ಸಿದ್ದರಾಮಯ್ಯ ಇಂದು ರಾಜಕಾರಣದಲ್ಲಿ ಇರುತ್ತಲೇ ಇರಲಿಲ್ಲ ಎಂಬುವುದು ಅವರ ರಾಜಕೀಯ ಇತಿಹಾಸದಿಂದ ಅರಿಯಬಹುದು. ಧರ್ಮ ಮತ್ತು ಅಧರ್ಮದ ನಡುವೆ ಯುದ್ದ ನಡೆಯುತ್ತಿದೆ. ಸತ್ಯ ಮೇವ ಜಯತೆ ಎಂಬಂತೆ ಧರ್ಮ ಮೇವಾ ಜಯತೆ ಅಗಲಿದೆ ನಮ್ಮದು ಸತ್ಯ-ಧರ್ಮ ರಾಜಕಾರಣವಾಗಿದೆ. 

ಸಿದ್ದರಾಮಯ್ಯಗೆ ಸಿದ್ಧಾಂತಗಳೇ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ಆಡಳಿತವು ಎತ್ತು ಏರಿಕೆ ಎಳೆದರೆ ಕೋಣ ನೀರಿಗೆ ಎಳೆದ ಗಾದೆಯಂತೆ ಆಗಿದೆ. ಕಾಂಗ್ರೆಸ್ ಪಕ್ಷ ಮುಖಂಡರ ಇಂದು ಪಾಕಿಸ್ತಾನದ ಏಜೆಂಟ್‌ಗಳಂತೆ ವರ್ತಿಸುತ್ತಿದ್ದಾರೆ. ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಕಾಂಗ್ರೆಸ್ ಪಕ್ಷವು ಒಂದು ಸೀಟ್ ಬರುವುದಿಲ್ಲ. ಕಾಂಗ್ರೆಸ್ ಮುಕ್ತ ಕರ್ನಾಟಕ ಆಗಲಿದೆ ಎಂದು ಭವಿಷ್ಯ ನುಡಿದರು.

click me!