ಕಾ​ವೇರಿ ಸ​ಮಸ್ಯೆ ಕೇವಲ ರಾ​ಜ​ಕೀಯ ಹೋ​ರಾ​ಟ​ವ​ಲ್ಲ: ಸಂಸದೆ ಸು​ಮ​ಲ​ತಾ ಅಂಬ​ರೀಶ್‌

Published : Aug 20, 2023, 12:30 AM IST
ಕಾ​ವೇರಿ ಸ​ಮಸ್ಯೆ ಕೇವಲ ರಾ​ಜ​ಕೀಯ ಹೋ​ರಾ​ಟ​ವ​ಲ್ಲ: ಸಂಸದೆ ಸು​ಮ​ಲ​ತಾ ಅಂಬ​ರೀಶ್‌

ಸಾರಾಂಶ

ನಾನು ರಾಜಕೀಯವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದೇನೆ. ಆ​ದರೆ, ನಾ​ನು ಬಿಜೆಪಿ ಸಂಸದೆ ಅಲ್ಲ. ಬಿಜೆಪಿ ನಿರ್ಧಾರ ನನಗೆ ಅನ್ವಯವಾಗು​ವು​ದಿಲ್ಲ. ಇನ್ನು ನನಗೆ ರಾಜಕೀಯ ಅನಿವಾರ್ಯವೂ ಅಲ್ಲ, ಆಕಸ್ಮಿಕ ಎಂದಷ್ಟೆ ಹೇಳಿದ ಸು​ಮ​ಲತಾ ಅಂಬ​ರೀಶ್‌ 

ಮಂಡ್ಯ(ಆ.20):  ಕಾ​ವೇರಿ ಹೋ​ರಾಟ ಎ​ನ್ನು​ವುದು ಕೇ​ವ​ಲ ರಾ​ಜ​ಕೀಯ ಹೋ​ರಾ​ಟ​ವಲ್ಲ. ಇ​ದ​ರಲ್ಲಿ ಜ​ನ​ಸಾ​ಮಾ​ನ್ಯ​ರೆ​ಲ್ಲರೂ ಒ​ಗ್ಗೂಡಿ ಹೋ​ರಾಟ ನ​ಡೆ​ಸ​ಬೇ​ಕಾದ ಅ​ನಿ​ವಾ​ರ್ಯತೆ ಎ​ದು​ರಾ​ಗಿದೆ ಎಂದು ಸಂಸದೆ ಸು​ಮ​ಲತಾ ಅಂಬ​ರೀಶ್‌ ಹೇ​ಳಿ​ದರು.

ಮಳೆ ಕೊ​ರತೆ ಎ​ದು​ರಾ​ದಾ​ಗ​ಲೆಲ್ಲಾ ನೀರು ಹಂಚಿಕೆ ವಿ​ಚಾ​ರ​ದಲ್ಲಿ ಕ​ರ್ನಾ​ಟ​ಕಕ್ಕೆ ಅ​ನ್ಯಾ​ಯ​ವಾ​ಗು​ತ್ತಿದೆ. ಕೇಂದ್ರ​ದಿಂದ ಹಿಡಿದು ಸು​ಪ್ರೀಂಕೋ​ರ್ಚ್‌​ವ​ರೆಗೂ ತ​ಮಿ​ಳು​ನಾಡು ಪ​ರ​ವಾ​ಗಿಯೇ ತೀ​ರ್ಪು​ಗಳು ಹೊ​ರ​ಬೀ​ಳು​ತ್ತಿವೆ. ಇ​ದರಿಂದ ನಮ್ಮ ರೈ​ತ​ರಿಗೆ ಅ​ನ್ಯಾ​ಯ​ವಾ​ಗು​ತ್ತಿದೆ. ಈ ಹಂತ​ದಲ್ಲಿ ಸ​ರ್ಕಾ​ರ​ಗ​ಳು ಜ​ವಾ​ಬ್ದಾ​ರಿ​ಯುತ ತೀ​ರ್ಮಾ​ನ​ಗ​ಳನ್ನು ಕೈ​ಗೊ​ಳ್ಳ​ಬೇ​ಕಿದೆ ಎಂದು ಶ​ನಿ​ವಾರ ಸು​ದ್ದಿ​ಗೋ​ಷ್ಠಿ​ಯಲ್ಲಿ ಹೇ​ಳಿ​ದರು.

ತಮಿಳುನಾಡು ಎದುರು ದೈನೇಸಿಯಾಗಿ ಮಂಡಿಯೂರಿದ ಕರ್ನಾಟಕ ಕಾಂಗ್ರೆಸ್‌ ಸರ್ಕಾರ : 10 ಟಿಎಂಸಿ ಕಾವೇರಿ ನೀರು

ಬಿ​ಜೆಪಿ ಸಂಸ​ದೆ​ಯ​ಲ್ಲ: 

ನಾನು ರಾಜಕೀಯವಾಗಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿದ್ದೇನೆ. ಆ​ದರೆ, ನಾ​ನು ಬಿಜೆಪಿ ಸಂಸದೆ ಅಲ್ಲ. ಬಿಜೆಪಿ ನಿರ್ಧಾರ ನನಗೆ ಅನ್ವಯವಾಗು​ವು​ದಿಲ್ಲ. ಇನ್ನು ನನಗೆ ರಾಜಕೀಯ ಅನಿವಾರ್ಯವೂ ಅಲ್ಲ, ಆಕಸ್ಮಿಕ ಎಂದಷ್ಟೆ ಹೇಳಿದರು.
‘ಕೈ’ಗೆ ಆಹ್ವಾನವಿಲ್ಲ: ಕಾಂಗ್ರೆಸ್‌ನಿಂದ ನನಗೆ ಯಾವುದೇ ಆಫರ್‌ ಬಂದಿ​ಲ್ಲ. ಎಲ್ಲವೂ ವದಂತಿ ಅ​ಷ್ಟೇ. ಎಲ್ಲವೂ ಸರಿ ಎಂದಾದರೆ ಮಾತ್ರ ಮುಂದಿನ ಹೆಜ್ಜೆ ಇಡುತ್ತೇನೆ, ನಾನು ಸಂತೋಷವಾಗಿದ್ದೇನೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮುಂದಿನ ಜೂನ್ ತಿಂಗಳ ಒಳಗಾಗಿ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆ: ಸಿಎಂ ಸಿದ್ದರಾಮಯ್ಯ ಘೋಷಣೆ
ಕಾಂಗ್ರೆಸ್‌ ನಲ್ಲಿ ಹೊಸ ಬಿರುಗಾಳಿ, ಸಚಿವ ಸಂಪುಟ ಪುನರ್‌ರಚನೆಗೆ ಒತ್ತಾಯಿಸಿ ಹೈಕಮಾಂಡ್ ಮೊರೆ ಹೋದ 30 ಶಾಸಕರು!