ರಾಜ್ಯಸಭಾ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಗಳು ಒಬ್ರು ಕೋಟ್ಯಾಧಿಪತಿ, ಇನ್ನೊಬ್ರು ಲಕ್ಷಾಧಿಪತಿ

Published : Jun 09, 2020, 10:45 PM IST
ರಾಜ್ಯಸಭಾ ಎಲೆಕ್ಷನ್: ಬಿಜೆಪಿ ಅಭ್ಯರ್ಥಿಗಳು ಒಬ್ರು ಕೋಟ್ಯಾಧಿಪತಿ, ಇನ್ನೊಬ್ರು ಲಕ್ಷಾಧಿಪತಿ

ಸಾರಾಂಶ

ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಸಾಮಾನ್ಯ ಅಭ್ಯರ್ಥಿಯನ್ನು ಘೋಷಿಸಿದ್ದು, ಒಬ್ಬರು ಲಕ್ಷಾಧಿಪತಿ ಮತ್ತೊಬ್ಬರು ಕೋಟ್ಯಾಧಿಪತಿಯಾಗಿದ್ದಾರೆ

ಬೆಂಗಳೂರು, (ಜೂನ್.09): ಕರ್ನಾಟಕ ರಾಜ್ಯಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ಘೋಷಿಸಿರುವ ಅಚ್ಚರಿ ಅಭ್ಯರ್ಥಿಗಳಾದ ಈರಣ್ಣ ಕಡಾಡಿ ಮತ್ತು ಅಶೋಕ್ ಗಸ್ತಿ ಅವರು ಇಂದು (ಮಂಗಳವಾರ) ನಾಮಪತ್ರ ಸಲ್ಲಿಸಿದರು.

ಈರಣ್ಣ ಕಡಾಡಿ ಬೆಳಗಾವಿ ಜಿಲ್ಲಾ ಬಿಜೆಪಿ ಮುಖಂಡರಾಗಿದ್ರೆ, ಅಶೋಕ್ ಗಸ್ತಿ ರಾಯಚೂರು ಮೂಲದವರಾಗಿದ್ದು, ಇವರಿಬ್ಬರು ಸಂಘಪರಿವಾರದವರು.

ಮಾಜಿ ಜಿ.ಪಂ ಅಧ್ಯಕ್ಷ, ಹಿಂದುಳಿದ ವರ್ಗ ಮೋರ್ಚದಲ್ಲಿ ಕೆಲ್ಸ ಮಾಡಿದವರಿಗೆ ರಾಜ್ಯಸಭಾ ಟಿಕೆಟ್

ಇನ್ನು ನಾಮಪತ್ರ ಸಲ್ಲಿಕೆ ಮಾಡಿರೋ ಬಿಜೆಪಿ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರವನ್ನು ಚುನಾವಣೆ ಆಯೋಗಕ್ಕೆ ಸಲ್ಲಿಸಿದ್ದು, ಈರಣ್ಣ ಕಡಾಡಿ ಕೋಟ್ಯಾಧಿಪತಿಯಾಗಿದ್ರೆ, ಅಶೋಕ್ ಗಸ್ತಿ ಲಕ್ಷಾಧಿಪತಿಯಾಗಿದ್ದಾರೆ.

ಅಶೋಕ್ ಗಸ್ತಿ ಆಸ್ತಿ ವಿವರ
ಬೇರೆ ಅಭ್ಯರ್ಥಿಗಳ ಆಸ್ತಿ ವಿವರಕ್ಕೆ ಹೋಲಿಸಿದ್ರೆ, ಅಶೋಕ್ ಗಸ್ತಿಯವರು ಕಡಿಮೆ ಆದಾಯ ಹೊಂದಿದವರಾಗಿದ್ದಾರೆ. ಇನ್ನು ಗಸ್ತಿ ಅವರಿಗಿಂತ ಅವರ ಪತ್ನಿ ಹೆಸರಲ್ಲೇ ಹೆಚ್ಚು ಹಣ ಇದೆ. 

*. ಅಶೋಕ್ ಗಸ್ತಿ ಚರಾಸ್ತಿ ಮೌಲ್ಯ 2,85,673 ರೂ.
* 1996 ಮಾಡೆಲ್‌ನ ಬಜಾಬ್ ಸ್ಕೂಟರ್ ಬೈಕ್
* ಪತ್ನಿ ಸುಮಾ ಹೆಸರಲ್ಲಿ 50 ಗ್ರಾಂ ಚಿನ್ನ 1000 ಗ್ರಾಂ ಬೆಳ್ಳಿ ಹಾಗು 4,45,375 ರೂಪಾಯಿ ಹಣವಿದೆ.
* ಪುತ್ರಿ ನೇಹ  40 ಗ್ರಾಂ ಚಿನ್ನ, 2,05000 ರೂಪಾಯಿ ಮೌಲ್ಯದ ಚರಾಸ್ತಿ ಇದೆ.
* ಎರಡನೇ ಪುತ್ರ ನಿತ್ಯಾ ಹೆಸರಲ್ಲಿ 20 ಗ್ರಾಂ ಚಿನ್ನ ಸೇರಿ 2,04,000 ರೂಪಾಯಿ ಮೌಲ್ಯದ ಚರಾಸ್ತಿ ಇದೆ.

ಖರ್ಗೆ ಬಳಿ ಕಾರಿಲ್ಲ, ಕೃಷಿ ಭೂಮಿಯೂ ಇಲ್ಲ: ಇಲ್ಲಿದೆ ನೋಡಿ ಆಸ್ತಿ, ಸಾಲದ ವಿವರ! 

2. ಈರಣ್ಣ ಕಡಾಡಿ ಆಸ್ತಿ ವಿವರ
ಬಿಜೆಪಿ ರಾಜ್ಯಸಭಾ ಅಭ್ಯರ್ಥಿ ಈರಣ್ಣ ಕಡಾಡಿ ಕುಟುಂಬದ ಒಟ್ಟು ಆಸ್ತಿ ಮೌಲ್ಯ 3ಕೋಟಿ 32 ಲಕ್ಷದ 32 ಸಾವಿರ ರೂಪಾಯಿ ಆಗಿದೆ.
* 1,02,62,417 ಕೋಟಿ ರೂ. ಮೌಲ್ಯದ ಚರಾಸ್ತಿ ಮತ್ತು 1.33 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ.
* ಒಂದು ಟೊಯೋಟಾ ಇನ್ನೋವಾ ಕಾರು ಇದೆ.
* 60 ಗ್ರಾಂ ಚಿನ್ನ ಹೊಂದಿದ್ದಾರೆ.
* ಪತ್ನಿ ಸುಮಿತ್ರರ ಚರಾಸ್ತಿ 9,26,079, ಮತ್ತು 11,28,000 ಸ್ಥಿರಾಸ್ತಿ ಜತೆಗೆ 100 ಗ್ರಾಂ ಚಿನ್ನ
* ಪುತ್ರ ಸತೀಶ್ 11,01,579 ಚರಾಸ್ತಿ ಹಾಗೂ 24,50,000 ರೂ. ಸ್ಥಿರಾಸ್ತಿ ಹೊಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜ್ಯದಲ್ಲಿ 'ನಾಯಕತ್ವ ಬದಲಾವಣೆ ಇಲ್ಲ'- ಯತೀಂದ್ರ ಹೇಳಿಕೆಗೆ ಡಿ.ಕೆ. ಶಿವಕುಮಾರ್ ಕೆಂಡಾಮಂಡಲ!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ