ರಾಜ್ಯ ಸರ್ಕಾರಿ ನೌಕರ ಪಕ್ಷೇತರ ಅಭ್ಯರ್ಥಿಯ ಎಣಿಕೆ ಏಜೆಂಟ್‌!

Published : Dec 18, 2019, 12:14 PM IST
ರಾಜ್ಯ ಸರ್ಕಾರಿ ನೌಕರ ಪಕ್ಷೇತರ ಅಭ್ಯರ್ಥಿಯ ಎಣಿಕೆ ಏಜೆಂಟ್‌!

ಸಾರಾಂಶ

ರಾಜ್ಯ ಸರ್ಕಾರಿ ನೌಕರ ಪಕ್ಷೇತರ ಅಭ್ಯರ್ಥಿಯ ಎಣಿಕೆ ಏಜೆಂಟ್‌!| ಅಥಣಿ ಕ್ಷೇತ್ರದಲ್ಲಿ ತಡವಾಗಿ ಬೆಳಕಿಗೆ| ನೌಕರಗೆ ಸಂಕಷ್ಟ

 

ಅಥಣಿ[ಡಿ.18]: ಇತ್ತೀಚೆಗೆ ನಡೆದ ಉಪಚುನಾವಣೆಯ ಫಲಿತಾಂಶದ ದಿನ ಸರ್ಕಾರಿ ನೌಕರರೊಬ್ಬರು ಪಕ್ಷೇತರ ಅಭ್ಯರ್ಥಿಯ ಮತ ಎಣಿಕೆ ಏಜೆಂಟ್‌ ಆಗಿ ಕಾರ್ಯನಿರ್ವಹಿಸಿರುವುದು ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನಲ್ಲಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅಥಣಿ ತಾಲೂಕಿನ ಹಲ್ಯಾಳ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಹಾಯಕ ಆರೋಗ್ಯ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಆಸಂಗಿ ಎಂಬುವರೇ ಏಜೆಂಟ್‌ರಾಗಿದ್ದರು. ಡಿ.5ರಂದು ನಡೆದ ಉಪಚುನಾವಣೆಯಲ್ಲಿ ಅಥಣಿ ಮತಕ್ಷೇತ್ರಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ವಿನಾಯಕ ಪರಯ್ಯ ಮಠಪತಿ ಸ್ಪರ್ಧಿಸಿದ್ದರು. ಇವರ ಪರವಾಗಿ ಮತ ಎಣಿಕೆ ಕೇಂದ್ರಕ್ಕೆ ಏಜೆಂಟ್‌ರಾಗಿ ಭಾಗವಹಿಸಿದ್ದರು. ಡಿ.9ರಂದು ರೂಮ್‌ ನಂ.7, ಟೇಬಲ್‌ ನಂ.5ರ ಏಜೆಂಟ್‌ರಾಗಿದ್ದರು. ಇದು ಚುನಾವಣಾಧಿಕಾರಿ ನೀಡಿರುವ ದಾಖಲೆಗಳಿಂದ ತಿಳಿದು ಬಂದಿದೆ.

ಈ ಬಗ್ಗೆ ಹಲ್ಯಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಪ್ರವೀಣ ದಬಾಡಿ ಪ್ರತಿಕ್ರಿಯಿಸಿ, ಏಜೆಂಟ್‌ ಆಗಿದ್ದ ವ್ಯಕ್ತಿ ಸರ್ಕಾರಿ ನೌಕರ ಹೌದು. ಆತನ ವಿಚಾರಣೆ ಮಾಡಿದಾಗ ನನ್ನ ಗಮನಕ್ಕೆ ಬರದೇ ನನ್ನ ಸ್ನೇಹಿತ ನನ್ನ ಹೆಸರು ಬರೆಸಿದ್ದಾನೆ. ಅದರಲ್ಲಿ ಭಾಗವಹಿಸಿಲ್ಲ ಎಂಬ ಸಬೂಬು ನೀಡಿದ್ದಾನೆ. ಆದರೆ, ದಾಖಲೆಗಳನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯಾವುದೇ ಕ್ಷಣದಲ್ಲಾದರೂ ಡಿ.ಕೆ. ಶಿವಕುಮಾರ್ ಸಿಎಂ ಆಗ್ತಾರೆ: ಶಾಸಕ ಉದಯ ಕದಲೂರು ಓಪನ್ ಹೇಳಿಕೆ
ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ