'ಸಿದ್ದು ಅಲ್ಲ, ನೀವು ಸಿಎಂ ಆಗೋದಾದ್ರೆ ಮತ ಹಾಕ್ತೀವಿ'

Published : Nov 26, 2019, 07:46 AM IST
'ಸಿದ್ದು ಅಲ್ಲ, ನೀವು ಸಿಎಂ ಆಗೋದಾದ್ರೆ ಮತ ಹಾಕ್ತೀವಿ'

ಸಾರಾಂಶ

ಸಿದ್ದು ಅಲ್ಲ, ನೀವು ಸಿಎಂ ಆಗೋದಾದ್ರೆ ಮತ ಹಾಕ್ತೀವಿ| ಹುಣಸೂರು ಮತದಾರರಿಂದ ಪರಂಗೆ ಇಕ್ಕಟ್ಟು

ಹುಣಸೂರು[ನ.26]: ‘ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಹುಣಸೂರಲ್ಲಿ ಮಂಜುನಾಥ್‌ ಅವರಿಗೆ ಮತ ಹಾಕಬೇಕಾ? ಆಗುವುದಿಲ್ಲ. ನೀವು ಸಿಎಂ ಆಗುತ್ತೀರಾ ಹೇಳಿ ಮತ ಹಾಕುತ್ತೇವೆ.’

-ಇದು ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಮಂಜುನಾಥ್‌ ಪರವಾಗಿ ಸೋಮವಾರ ಪ್ರಚಾರ ನಡೆಸಲು ಆಗಮಿಸಿದ್ದ ಮಾಜಿ ಉಪಮುಖ್ಯಮಂತ್ರಿ ಡಾ.ಪರಮೇಶ್ವರ್‌ ಅವರನ್ನು ಬನ್ನಿಕುಪ್ಪೆ ಗ್ರಾಮಸ್ಥರು ಇಕ್ಕಟ್ಟಿನಲ್ಲಿ ಸಿಲುಕಿಸಿದ ಪರಿ.

ಡಾ.ಪರಮೇಶ್ವರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮದ ದಲಿತ ಯುವಕರು, ‘ಕಾಂಗ್ರೆಸ್‌ನÜಲ್ಲಿ 10 ವರ್ಷ ಅಧ್ಯಕ್ಷರಾಗಿದ್ದೀರಿ ನೀವು. ಆಗ ಏಕೆ ಸಿಎಂ ಆಗಲಿಲ್ಲ? ನೀವು ಆಗುವುದಾದರೆ ಹೇಳಿ. ಈ ಉಪ ಚುನಾವಣೆಯಲ್ಲಿ ಮತ ಹಾಕುತ್ತೇವೆ’ ಎಂದು ತಿಳಿಸಿದರು. ಗ್ರಾಮಸ್ಥರ ಪ್ರಶ್ನೆಗೆ ಉತ್ತರಿಸಲಾಗದೇ ಇಕ್ಕಟ್ಟಿಗೆ ಸಿಲುಕಿದ ಡಾ.ಪರಮೇಶ್ವರ್‌, ‘ತಾಳ್ಮೆಯಿಂದ ಇರಿ ಅವಕಾಶ ಸಿಗಲಿದೆ. ಈ ಬಾರಿ ಜನ ಮತ ನೀಡಿ, ಪಕ್ಷ ಅಧಿಕಾರಕ್ಕೆ ಬಂದರೆ ಪಕ್ಷದ ವರಿಷ್ಠರು ಸಿಎಂ ಮಾಡುತ್ತಾರೆ. ಕಾಯಬೇಕು’ ಎಂದರು.

ನಾಮಪತ್ರ ಸಲ್ಲಿಸಲು ನ.18ರಂದು ಕಡೆಯ ದಿನ. 19ರಂದು ನಾಮಪತ್ರ ಪರಿಶೀಲನೆ ನಡೆಯಲಿದ್ದು, ನ.21 ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿದೆ. ಡಿ.5ಕ್ಕೆ ಮತದಾನ ನಡೆಯಲಿದ್ದು, ಡಿ.9ರಂದು ಮತ ಎಣಿಕೆ ನಡೆಯಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವಸತಿ ಯೋಜನೆಗಳಿಗೆ ಸಹಾಯಧನ ಹೆಚ್ಚಳಕ್ಕೆ ಚಿಂತನೆ: ಸಚಿವ ಜಮೀರ್‌ ಅಹಮದ್‌
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ