ಬಜೆಟ್ ಬಗ್ಗೆ HDK  ದಿವ್ಯ ಮೌನ, ಅಧಿವೇಶನಕ್ಕೂ ಯಾಕೆ ಬರ್ಲಿಲ್ಲ?

Published : Mar 08, 2021, 08:25 PM IST
ಬಜೆಟ್ ಬಗ್ಗೆ HDK  ದಿವ್ಯ ಮೌನ, ಅಧಿವೇಶನಕ್ಕೂ ಯಾಕೆ ಬರ್ಲಿಲ್ಲ?

ಸಾರಾಂಶ

ಕರ್ನಾಟಕ ಬಜೆಟ್ ಮಂಡನೆ/ ಸಮತೋಲಿತ ಬಜೆಟ್ ಎಂದ ಬಿಜೆಪಿ/ ದಿವಾಳಿ ಬಜೆಟ್ ಎಂದು ಕರೆದ ಕಾಂಗ್ರೆಸ್/ ಜೆಡಿಎಸ್ ದಿವ್ಯ ಮೌನ/ ಯಾವುದೆ ಪ್ರತಿಕ್ರಿಯೆ ನೀಡದ ಕುಮಾರಸ್ವಾಮಿ/ ಅಧಿವೇಶನಕಕ್ಕೂ ಎಚ್‌ಡಿಕೆ ಗೈರು

ಬೆಂಗಳೂರು (ಮಾ.  08)   ಹಣಕಾಸು ಖಾತೆಯನ್ನು ಹೊಂದಿರುವ ಬಿಎಸ್ ಯಡಿಯೂರಪ್ಪ ಬಜೆಟ್ ಮಂಡನೆ ಮಾಡಿದ್ದಾರೆ. ಬಿಜೆಪಿಯವರು ಸಮತೋಲಿತ ಬಜೆಟ್ ಎಂದರೆ ಕಾಂಗ್ರೆಸ್ ನವರು ಇದು ದಿವಾಳಿ ಬಜೆಟ್ ಎಂದು ಟೀಕಿಸಿದ್ದಾರೆ. ಆದರೆ ಈ ನಡುವೆ ಜೆಡಿಎಸ್  ಮಾತ್ರ ಮೌನ ತಾಳಿದೆ.

ಬಜೆಟ್ ಅಧಿವೇಶನ ಆರಂಭವಾದಗಲೇ ಕಪ್ಪು ಪಟ್ಟಿ ಧರಿಸಿದ್ದ ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯ ನೇತೃತ್ವದಲ್ಲಿ ಸಭಾತ್ಯಾಗ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಗುಡುಗಿದ ಬಿಎಸ್ ಯಡಿಯೂರಪ್ಪ ಮುಂದಿನ ಸಾರಿಯೂ  135  ಸ್ಥಾನ ಗೆದ್ದು ಕಾಂಗ್ರೆಸ್ ನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿ ಕೂರಿಸುತ್ತೇವೆ ಎಂದರು.

ಕರ್ನಾಟಕ ಬಜೆಟ್ ಸಮಗ್ರ ಅಂಕಿ ಅಂಶ

ಮಾಜಿ ಸಿಎಂ ಕುಮಾರಸ್ವಾಮಿ ಬಜೆಟ್ ಅಧಿವೇಶನಕ್ಕೆ ಗೈರಾಗಿದ್ದರು. ಅನಿತಾ ಕುಮಾರಸ್ವಾಮಿ ಮಾತ್ರ ಕಾಣಿಸಿಕೊಂಡರು.  ಸೋಶಿಯಲ್ ಮೀಡಿಯಾದಲ್ಲಿಯೂ ಕುಮಾರಸ್ವಾಮಿ ಬಜೆಟ್ ಗೆ ಸಂಬಂಧಿಸಿ ಯಾವುದೇ  ಹೇಳಿಕೆ ನೀಡಿಲ್ಲ. 

ಬಿಜೆಪಿ ಮತ್ತು ಜೆಡಿಎಸ್ ವಿಧಾನಪರಿಷತ್ ಸಭಾಪತಿ ಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಂಡಿತ್ತು. ಈ ಮೂಲಕ ಜೆಡಿಎಸ್ ನ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿ ಸ್ಥಾನ ಒಲಿದಿತ್ತು.  ಇನ್ನು  ಮೈಸೂರು  ಮಹಾನಗರ ಮೇಯರ್ ಚುನಾವಣೆ ವೇಳೆ ಜೆಡಿಎಸ್-ಕಾಂಗ್ರೆಸ್ ದೋಸ್ತಿ ಮಾಡಿಕೊಂಡಿದ್ದವು .

ಒಟ್ಟಿನಲ್ಲಿ ಬಜೆಟ್ ಹೊರತುಪಡಿಸಿಯೂ ಬಜೆಟ್ ದಿನ ಒಂದಷ್ಟು ಹೊಸ ರಾಜಕಾರಣದ ಲೆಕ್ಕಾಚಾರಗಳು ನಡೆದವು. ಕುಮಾರಸ್ವಾಮಿ ಗೈರು, ಕಾಂಗ್ರೆಸ್ ಸಭಾತ್ಯಾಗ ಮತ್ತು ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಹಾಗೂ ಸಿದ್ದರಾಮಯ್ಯ ವಿರುದ್ಧ ಗುಡುಗಿದ ಯಡಿಯೂರಪ್ಪ...

"

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಡಾ ಜಿ ಪರಮೇಶ್ವರ ರಾಜ್ಯದ ಸಿಎಂ ಆಗಬೇಕು, ರಾಜಕೀಯದಲ್ಲಿ ಸಂಚಲನ ಮೂಡಿಸೋ ಹೇಳಿಕೆ ಕೊಟ್ಟ ಕೇಂದ್ರ ಸಚಿವ ವಿ. ಸೋಮಣ್ಣ!
ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!