
ನವದೆಹಲಿ (ಸೆ. 22): ಕಾಂಗ್ರೆಸ್ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಕೊಚ್ಚಿಯಲ್ಲಿ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳಿಗೆ ಸೂಚನೆಗಳು ಮತ್ತು ಸಲಹೆಗಳನ್ನು ನೀಡಿದರು. ರಾಜಸ್ಥಾನದ ಮುಖ್ಯಮಂತ್ರಿ ಪದವಿ ಹಾಗೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಎರಡನ್ನೂ ಏಕಕಾಲದಲ್ಲಿ ನಿಭಾಯಿಸುತ್ತೇನೆ ಎನ್ನುವ ಅಶೋಕ್ ಗೆಹ್ಲೋಟ್ ಅವರ ಆಸೆಯ ಬಗ್ಗೆಯೂ ರಾಹುಲ್ ಗಾಂಧಿ ಅವರಿಗೆ ಪ್ರಶ್ನೆ ಮಾಡಲಾಗಿದೆ. ಈ ವೇಳೆ ರಾಹುಲ್ ಗಾಂಧಿ, ಉದಯಪುರ ಸಮಾವೇಶದಲ್ಲಿ ಒಬ್ಬ ವ್ಯಕ್ತಿಗೆ ಒಂದೇ ಹುದ್ದೆ ಎನ್ನುವ ಬಗ್ಗೆ ನಾವು ತೆಗೆದುಕೊಂಡ ನಿರ್ಧಾರ ಮುಂದುವರಿಯಲಿದೆ ಎಂದು ಹೇಳಿದರು. ಅಧ್ಯಕ್ಷ ಸ್ಥಾನವು ಒಬ್ಬ ವ್ಯಕ್ತಿ-ಒಬ್ಬ ಹುದ್ದೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಗೆಹ್ಲೋಟ್ ಹೇಳಿದ್ದರೂ, ಇತಿಹಾಸದಲ್ಲಿ ಎಲ್ಲೂ ಕಾಂಗ್ರೆಸ್ನ ಅಧ್ಯಕ್ಷರಾಗಿರುವ ವ್ಯಕ್ತಿ, ಯಾವುದೇ ರಾಜ್ಯದ ಮುಖ್ಯಮಂತ್ರಿಯಾಗಿದ್ದಿಲ್ಲ. ಹಾಗಾಗಿ ಈ ಕುರಿತಾಗಿ ಪಕ್ಷ ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ. ಕಾಂಗ್ರೆಸ್ ಅಧ್ಯಕ್ಷ ಸ್ಥಾನ ಎಂಬುದು ಕೇವಲ ಸಾಂಸ್ಥಿಕ ಹುದ್ದೆಯಲ್ಲ, ಅದೊಂದು ಸೈದ್ಧಾಂತಿಕ ಹುದ್ದೆ ಮತ್ತು ನಂಬಿಕೆ ವ್ಯವಸ್ಥೆಯಾಗಿದೆ ಎಂದು ರಾಹುಲ್ ಹೇಳಿದರು. ಯಾರೇ ಕಾಂಗ್ರೆಸ್ ಅಧ್ಯಕ್ಷರಾಗಲಿ ಅವರು ಐತಿಹಾಸಿಕ ಸ್ಥಾನ ಪಡೆಯುತ್ತಿದ್ದಾರೆ ಎಂಬುದನ್ನು ನೆನಪಿಟ್ಟುಕೊಳ್ಳಬೇಕು. ಭಾರತದ ನಿರ್ದಿಷ್ಟ ದೃಷ್ಟಿಯನ್ನು ವ್ಯಾಖ್ಯಾನಿಸುವ ಸ್ಥಳ. ಕಾಂಗ್ರೆಸ್ ಅಧ್ಯಕ್ಷರಾಗಲು ಭಾರತದ ಕಲ್ಪನೆಗಳು, ನಂಬಿಕೆ ವ್ಯವಸ್ಥೆ ಮತ್ತು ದೃಷ್ಟಿಕೋನವನ್ನು ಪ್ರತಿನಿಧಿಸಬೇಕು ಎಂದಿದ್ದಾರೆ.
ಪೈಲಟ್ ಅವರನ್ನು ಸಿಎಂ ಮಾಡುವ ಪ್ರಶ್ನೆಗೆ, ರಾಜಸ್ಥಾನದ (Rajasthan) ಒಳಗಿನ ಸ್ಥಿತಿ, ಹೈಕಮಾಂಡ್ ಅಧ್ಯಯನ ಮಾಡಿ ಶಾಸಕರ ಭಾವನೆ ಏನು ಎಂದು ನೋಡುತ್ತದೆ ಎಂದು ಗೆಹ್ಲೋಟ್ (Ashok Gehlot) ಹೇಳಿದರು. ಮುಂದಿನ ಚುನಾವಣೆಯಲ್ಲಿ ನಾವು ಗೆಲ್ಲುತ್ತೇವೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು, ಏಕೆಂದರೆ ಈಗ ಕಾಂಗ್ರೆಸ್ (Indian National Congress) ದೊಡ್ಡ ರಾಜ್ಯ ರಾಜಸ್ಥಾನವನ್ನು ಮಾತ್ರ ಹೊಂದಿದೆ. ನಮಗೆ, ಈ ನಿರ್ಧಾರವು ತುಂಬಾ ಸೂಕ್ಷ್ಮವಾದ ನಿರ್ಧಾರವಾಗಿರುತ್ತದೆ ಮತ್ತು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ ಎಂದಿದ್ದಾರೆ. ಇತಿಹಾಸದಲ್ಲಿ ಇಲ್ಲಿಯವರೆಗೂ ಯಾವುದೇ ಕಾಂಗ್ರೆಸ್ ಅಧ್ಯಕ್ಷರು ಒಟ್ಟಿಗೆ ಮುಖ್ಯಮಂತ್ರಿಯಾಗಿಲ್ಲ, ಆದ್ದರಿಂದ ಉದ್ಭವಿಸುವ ಪ್ರಶ್ನೆಗಳ ಆಧಾರದ (Rahul Gandhi) ಮೇಲೆ ನಾವೂ ನಿರ್ಧರಿಸುತ್ತೇವೆ ಎಂದು ಗೆಹ್ಲೋಟ್ ಹೇಳಿದ್ದರು.
ಕಾಂಗ್ರೆಸ್ಗೆ ಪುನಶ್ಚೇತನ ನೀಡುವುದು ಇಲ್ಲಿ ಮುಖ್ಯವಾದ ಅಂಶ. ಒಬ್ಬ ವ್ಯಕ್ತಿ ಎರಡು ಹುದ್ದೆ ವಹಿಸಿಕೊಳ್ಳುವ ವಿಚಾರವಲ್ಲ ಎಂದು ಗ್ಲೆಹೋಟ್ ತಿಳಿಸಿದ್ದಾರೆ.ಪೈಲಟ್ ಹೆಸರಿಗೆ ಆಕ್ಷೇಪಣೆಯ ಪ್ರಶ್ನೆಗೆ ಉತ್ತರಿಸಿದ ಗೆಹ್ಲೋಟ್ 'ನಾನು ಯಾರ ಹೆಸರನ್ನೂ ಚರ್ಚಿಸುವುದಿಲ್ಲ ಅಥವಾ ಚರ್ಚೆ ಮಾಡುತ್ತಿಲ್ಲ. ಯಾರು ಬರುತ್ತಾರೋ ನೋಡಬೇಕು, ಇದರಿಂದ ಪಕ್ಷ ಒಗ್ಗಟ್ಟಾಗಿದೆ ಮತ್ತು ನಾವು ಯಾವುದೇ ಬೆಲೆ ತೆತ್ತಾದರೂ ಸರ್ಕಾರವನ್ನು ಪುನರಾವರ್ತಿಸಬೇಕು ಎಂಬ ಸಂದೇಶ ಹೋಗುತ್ತದೆ. ಇದರಿಂದ ಬೇರೆ ರಾಜ್ಯಗಳಲ್ಲೂ ಪಕ್ಷದ (Congress) ಪುನಶ್ಚೇತನಕ್ಕೆ ಕಾರಣವಾಗಲಿದೆ. ಇದು ಒಂದು ದೊಡ್ಡ ನಿರ್ಧಾರ ಮತ್ತು ಅದನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗುತ್ತದೆ' ಎಂದು ಹೇಳಿದ್ದಾರೆ.
2 ದಶಕದ ಬಳಿಕ Congress ಚುಕ್ಕಾಣಿ ಗಾಂಧಿಯೇತರಿಗೆ..? ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಗೆ ಗೆಹ್ಲೋಟ್ ಷರತ್ತು..!
ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಬಿದ್ದಿದ್ದು, ರಾಜಕೀಯ ಕುತೂಹಲ ಹೆಚ್ಚಿಸಿದೆ. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲು ಗೆಹ್ಲೋಟ್ ಕೇರಳ ತಲುಪಿದ್ದಾರೆ. ಗೆಹ್ಲೋಟ್ ಕೊನೆಯ ಬಾರಿಗೆ ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಅಧ್ಯಕ್ಷರಾಗುವಂತೆ ಮನವೊಲಿಸಲು ಪ್ರಯತ್ನಿಸಿದರು. ಕೊನೆಗೆ ರಾಹುಲ್ ಗಾಂಧಿ ನಿರಾಕರಿಸಿದ ಕಾರಣ ಗ್ಲೆಹೋಟ್ ಅವರೇ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮುಂದುವರಿದಿದ್ದಾರೆ.
Congress ಅಧ್ಯಕ್ಷ ಸ್ಥಾನಕ್ಕೆ ಮೂವರ ಸ್ಪರ್ಧೆ..? ಶಶಿ ತರೂರ್ ಸ್ಪರ್ಧೆಗೆ ಸೋನಿಯಾ ಸಮ್ಮತಿ..!
ಬುಧವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ (Sonia Gandhi) ಅವರೊಂದಿಗೆ ರಾಜಸ್ಥಾನದ ಮುಖ್ಯಮಂತ್ರಿ ಸುಮಾರು ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದರು. ಇಂದು ರಾಹುಲ್ ಗಾಂಧಿ ಭೇಟಿಯಲ್ಲಿ ಗೆಹ್ಲೋಟ್ ಎರ್ನಾಕುಲಂ ಮತ್ತು ತ್ರಿಶೂರ್ ಮತ್ತು ಚಲಕುಡಿಗೆ ಪ್ರಯಾಣಿಸಲಿದ್ದಾರೆ. ಗೆಹ್ಲೋಟ್ ಚಾಲಕುಡಿಯಲ್ಲಿ ರಾತ್ರಿ ತಂಗಲಿದ್ದು, ಶುಕ್ರವಾರ ಅಲ್ಲಿಂದ ಶಿರಡಿಗೆ ತೆರಳಲಿದ್ದಾರೆ. ಸಾಯಿಬಾಬಾ ದರ್ಶನದ ನಂತರ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದು, ಗೆಹ್ಲೋಟ್ ಶುಕ್ರವಾರ ಸಂಜೆ 6 ಗಂಟೆಗೆ ಜೈಪುರಕ್ಕೆ ಮರಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.