
ಬಾಗಲಕೋಟೆ(ಅ.13): ಹೇಗೆ ಮನೆ ಮನೆಗೆ ಹಾಲು ಕೊಡುತ್ತಾರೋ ಹಾಗೆಯೇ ಸಾರಾಯಿ ಸಪ್ಲೈ ಮಾಡಲಿ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು.
ಗ್ರಾಮೀಣ ಭಾಗದಲ್ಲಿ ಮದ್ಯದಂಗಡಿ ತೆರೆಯುವ ವಿಚಾರ ಪ್ರಸ್ತಾಪಿಸಿರುವ ಅಬಕಾರಿ ಸಚಿವ ಆರ್.ಬಿ. ತಿಮ್ಮಾ ಪುರ ವಿರುದ್ಧ ವಾಗ್ದಾಳಿ ನಡೆಸಿದ ಅವರು, 3 ಸಾವಿರ ಜನಸಂಖ್ಯೆ ಇರುವ ಊರುಗಳಿಗೆ ಸಾರಾಯಿ ಅಂಗಡಿ ಕೊಡ್ತೀನಿ, ಪಾಪ ಅವರೆಲ್ಲ ಸಿಟಿಗೆ ಹೋಗಿ ತರಲು ₹10 ಖರ್ಚು ಮಾಡಬಾರದು. ಮನೆ ಬಾಗಿಲಿಗೆ ಮುಟ್ಟಿಸಿ ಪುಣ್ಯ ಕಟ್ಟಿಕೊಳ್ತಿನಿ ಅಂತ ಹೇಳಿದ್ದಾರೆ.
ವಾರಂಟಿ ಇಲ್ಲದ ಗ್ಯಾರಂಟಿ ನೀಡಿದ ಕಾಂಗ್ರೆಸ್: ಮಾಜಿ ಸಿಎಂ ಬೊಮ್ಮಾಯಿ ಲೇವಡಿ
ಅವರ ಹೆಂಡರು, ಮಕ್ಕಳಿಗೆ ಪುಣ್ಯ ಬರಲಿ ಅಂತ ₹10 ಉಳಿಸುವ ಪ್ರಯತ್ನ ಮಾಡ್ತಿದಾರೆ. ತಿಮ್ಮಾಪುರ ಅವರಿಗೆ ಇದರಿಂದ ಹೆಸರು, ಕೀರ್ತಿ ಎರಡೂ ಬರುತ್ತದೆ. ಅವರ ಹೆಸರು ಇತಿಹಾಸದ ಪುಟದಲ್ಲಿ ಅಜರಾಮರವಾಗಿ ಉಳಿಯಲಿದೆ ಎಂದು ಲೇವಡಿ ಮಾಡಿದ ಅವರು, ಸಚಿವರು ಸಾರಾಯಿ ಅಂಗಡಿ ಓಪನ್ ಮಾಡಿ ಜನರು ದುಡಿಯದಂಗೆ ಮಾಡಿ ಅವರ ಸಂಸಾರ ಹಾಳು ಮಾಡಿ ಖುಷಿ ಪಡುವಲ್ಲಿ ತಲ್ಲೀನರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.