ಕೋಲಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಭುಗಿಲೆದ್ದ ಭಿನ್ನಮತ!

Published : Mar 26, 2023, 01:00 PM ISTUpdated : Mar 26, 2023, 01:06 PM IST
ಕೋಲಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಭುಗಿಲೆದ್ದ ಭಿನ್ನಮತ!

ಸಾರಾಂಶ

 ಕೋಲಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ವರ್ತೂರು ಪ್ರಕಾಶ್ ಹಾಗೂ ಓಂ  ಶಕ್ತಿ ಚಲಪತಿ ಬಣದಿಂದ ಟಿಕೆಟ್ ಲಾಭಿ ನಡೆದಿದೆ.

ಕೋಲಾರ (ಮಾ.26): ಕೋಲಾರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ವರ್ತೂರು ಪ್ರಕಾಶ್ ಹಾಗೂ ಓಂ  ಶಕ್ತಿ ಚಲಪತಿ ಬಣದಿಂದ ಟಿಕೆಟ್ ಲಾಭಿ ನಡೆದಿದೆ. ಇಂದು ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ, ಬಿ.ವೈ ವಿಜಯೇಂದ್ರ ಹಾಗೂ ತೇಜಸ್ವಿ ಸೂರ್ಯ ಕೋಲಾರಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ  ವರ್ತೂರು ಪ್ರಕಾಶ್ ಹಾಗೂ ಓಂ ಶಕ್ತಿ ಚಲಪತಿ ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿಯಾಗಿದ್ದ ಚಲಪತಿ ಇದ್ದರು. ಈ ಬಾರಿ  ವರ್ತೂರು ಪ್ರಕಾಶ್ ಬಿಜೆಪಿ ಗೆ ಸೇರ್ಪಡೆ ಆದ ಬಳಿಕ ಭಿನ್ನಮತ  ಸ್ಫೋಟಗೊಂಡಿದೆ. ಚುನಾವಣೆ ಸಮೀಪ ಆಗ್ತಿರೋದ್ರಿಂದ ಟಿಕೆಟ್ ಗಾಗಿ ಲಾಭಿ ನಡೆದಿದೆ. ಗಣ್ಯರನ್ನು ಸ್ವಾಗತ ಮಾಡಲು ಪ್ರತ್ಯೇಕವಾಗಿ ಎರಡು ಬಣದ ಕಾರ್ಯಕರ್ತರು ಜೈಕಾರ ಹಾಕುತ್ತಿದ್ದಾರೆ. ಕೋಲಾರ ಹೊರಹೊಲಯದ ಬಂಗಾರಪೇಟೆ ರಸ್ತೆಯಲ್ಲಿ  ಕಾರ್ಯಕರ್ತರು ಅಣ್ಣಾಮಲೈ, ಬಿ.ವೈ ವಿಜಯೇಂದ್ರ ಹಾಗೂ ತೇಜಸ್ವಿ ಸೂರ್ಯ ಆಗಮನಕ್ಕೆ ಕಾಯುತ್ತಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ