ಸಚಿವ ಸೋಮಶೇಖರ್‌ ಬಿಜೆಪಿ ಚೇಲಾ: ಎಂ.ಲಕ್ಷ್ಮಣ್‌

Published : Jul 12, 2022, 10:36 AM IST
ಸಚಿವ ಸೋಮಶೇಖರ್‌ ಬಿಜೆಪಿ ಚೇಲಾ: ಎಂ.ಲಕ್ಷ್ಮಣ್‌

ಸಾರಾಂಶ

*  ಕಾಂಗ್ರೆಸ್‌ಗೆ ಬಯ್ಯುವ ನೈತಿಕತೆ ಎಸ್‌ಟಿಎಸ್‌ಗೆ ಇಲ್ಲ *  ರಾಜಕೀಯ ಬದುಕು ನೀಡಿದ್ದೇ ಕಾಂಗ್ರೆಸ್‌ *  ನಿಮ್ಮಿಂದ ಬಿಜೆಪಿ ಮುಳುಗುತ್ತಿದೆ 

ಬೆಂಗಳೂರು(ಜು.12):  ‘ರಾಜಕೀಯವಾಗಿ ನಿಮಗೆ ಎಲ್ಲಾ ಅವಕಾಶ ಹಾಗೂ ಅಧಿಕಾರ ನೀಡಿದ ಕಾಂಗ್ರೆಸ್ಸನ್ನು ಬಿಟ್ಟು ಬಿಜೆಪಿ ಚೇಲಾ ಆಗಿ ಹೋದ ನಿಮಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನೀವು ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್‌ ಗೆಲುವು ಸಾಧಿಸುತ್ತಿದೆ. ಹೀಗಾಗಿ ನಿಮ್ಮಿಂದ ಬಿಜೆಪಿ ಮುಳುಗುತ್ತಿದೆಯೇ ಹೊರತು ಕಾಂಗ್ರೆಸ್‌ ಅಲ್ಲ’. ಇದು ‘ಕಾಂಗ್ರೆಸ್‌ ಮುಳುಗುತ್ತಿರುವ ಹಡಗು, ಕಾಂಗ್ರೆಸ್‌ನಿಂದ ಸ್ಪರ್ಧಿಸಿದರೆ ಠೇವಣಿ ಸಿಗುವುದಿಲ್ಲ’ ಎಂದ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಅವರಿಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ತಿರುಗೇಟು ನೀಡಿದ ಪರಿ.

ಕಾಂಗ್ರೆಸ್‌ನಿಂದ ಬೆಳೆದು ಆಪರೇಷನ್‌ ಕಮಲದಿಂದ ಬಿಜೆಪಿಗೆ ಚೇಲಾ ಆಗಿ ಸಚಿವರೂ ಆಗಿದ್ದೀರಿ. ಆದರೆ, ನೀವು ಬಿಜೆಪಿಗೆ ಹೋದ ಬಳಿಕ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಅಲ್ಲಿ ಪಕ್ಷವನ್ನೇ ಇಬ್ಬಾಗ ಮಾಡಿದ್ದೀರಿ. ಅಲ್ಲಿನ ಪ್ರಭಾವಿ ನಾಯಕ ರಾಮ್‌ ದಾಸ್‌ ಅವರನ್ನು ಮೂಲೆಗುಂಪು ಮಾಡಿದ್ದೀರಿ. ಹೀಗಾಗಿ ಮೈಸೂರಿನಲ್ಲಿ ಬಿಜೆಪಿ ಮುಳುಗಿದ್ದು, ಮೈಸೂರು ಪಾಲಿಕೆ ಚುನಾವಣೆಯಲ್ಲಿ ಸೋತಿದ್ದೀರಿ. ವಿಧಾನ ಪರಿಷತ್‌ ಸ್ಥಳೀಯ ಸಂಸ್ಥೆಗಳ ಚುನಾವಣೆ ಹಾಗೂ ಪದವೀಧರ ಕ್ಷೇತ್ರದ ಚುನಾವಣೆ ಸೇರಿ ಎಲ್ಲಾ ಚುನಾವಣೆಯಲ್ಲೂ ಬಿಜೆಪಿಯನ್ನು ಸೋಲಿಸಿದ್ದೀರಿ. ಇನ್ನು ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ಸನ್ನು ಮುಳುಗುವ ಪಕ್ಷ ಎನ್ನುತ್ತೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ರಾಜ್ಯಸಭಾ ಚುನಾವಣೆ: 'ಕುಮಾರಸ್ವಾಮಿ ಕುಟುಂಬಕ್ಕೆ ಕುಪೇಂದ್ರ ರೆಡ್ಡಿ ಏಕೆ ಸಾಲ ಕೊಟ್ಟಿದ್ದಾರೆ?'

ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಾಂಗ್ರೆಸ್‌ ನಿಮಗೆ ಎಲ್ಲಾ ಅವಕಾಶಗಳನ್ನೂ ನೀಡಿದೆ. ಮೊದಲಿಗೆ ಹಾಲಿ ಶಾಸಕರಿಗೆ ಟಿಕೆಟ್‌ ತಪ್ಪಿಸಿ ಕಾಂಗ್ರೆಸ್‌ ನಿಮಗೆ ಟಿಕೆಟ್‌ ನೀಡಿದೆ. ಆದರೆ ಅಲ್ಲಿ ಸೋತಿದ್ದಿರಿ. ಉತ್ತರಹಳ್ಳಿ, ಯಶವಂತಪುರದಲ್ಲಿ ಟಿಕೆಟ್‌ ನೀಡಿದರೂ ಗೆಲ್ಲಲಿಲ್ಲ. 2013ರಲ್ಲಿ ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಸ್ಥಾನವನ್ನೂ ನೀಡಿ, ಶಾಸಕರನ್ನಾಗಿ ಮಾಡಿ ಬಿಡಿಎ ಅಧ್ಯಕ್ಷ ಸ್ಥಾನವನ್ನೂ ನೀಡಲಾಯಿತು. ಸಿದ್ದರಾಮಯ್ಯ ಸರ್ಕಾರದಿಂದ ಸಾವಿರಾರು ಕೋಟಿ ರುಪಾಯಿ ಅನುದಾನ ನೀಡಲಾಯಿತು. ಇಷ್ಟುನೀಡಿದ ಪಕ್ಷಕ್ಕೆ ದ್ರೋಹ ಬಗೆದು ಆಪರೇಷನ್‌ ಕಮಲಕ್ಕೆ ತುತ್ತಾಗಿ ಬಿಜೆಪಿ ಚೇಲಾ ಆಗಿಬಿಟ್ಟಿರಿ. ನಿಮಗೆ ಕಾಂಗ್ರೆಸ್‌ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಪ್ರಶ್ನಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಯಮಾಡಿ ಅರ್ಥ ಮಾಡಿಕೊಳ್ಳಿ ತಪ್ಪು ತಿಳಿಯಬೇಡಿ: ಸೋದರನ ಪೋಸ್ಟ್‌ಗೆ ಹೆಬ್ಬಾಳ್ಕರ್ ಪ್ರತಿಕ್ರಿಯೆ
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ