ಭ್ರಷ್ಟಾಚಾರ ಆರೋಪ ಮಾಡಿದ ಕಟ್ಟಾ ಸುಬ್ರಮಣ್ಯ ನಾಯ್ಡು ಮೇಲಿರುವ ಕೇಸ್‌ಗಳನ್ನ ಕೆದಕಿದ ಬೈರತಿ ಸುರೇಶ್

By Ramesh BFirst Published Jul 16, 2022, 5:58 PM IST
Highlights

 ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕರ ಬೈರತಿ ಸುರೇಶ್ ವಿರುದ್ಧ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ಅವರು ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಇದಕ್ಕೆ ಬೈರತಿ ಸುರೇಶ್ ಅವರು ಕಟ್ಟಾ ಸುಬ್ರಮಣ್ಯ ಅವರ ಹಳೇ ಕೇಸ್‌ಗಳನ್ನ ಕೆದಕಿ ಯಾವ ಹಂತದಲ್ಲಿ ಇವೆ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು, (ಜುಲೈ.16): ಹೆಬ್ಬಾಳ ವಿಧಾನ ಸಭಾ ಕ್ಷೇತ್ರದಲ್ಲಿ  ನಡೆಯುತ್ತಿರುವ ಕಾಮಗಾರಿಗಳಲ್ಲಿ ಭಾರೀ ಭ್ರಷ್ಟಾಚಾರ ಆರೋಪ ಕೇಳಿಬಂದಿದೆ. ಅಧಿಕಾರಿಗಳಿಗೆ 30% ಕಮಿಷನ್​ ಕೊಡಬೇಕು ಎಂದು ಕಾಂಗ್ರೆಸ್ ಶಾಸಕ ಬೈರತಿ ಸುರೇಶ್ ವಿರುದ್ಧ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಬೈರತಿ ಸುರೇಶ್ ಪ್ರತಿಕ್ರಿಯಿಸಿ, ಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಕೇಸ್‌ಗಳನ್ನ ಕೆದುಕುವ ಮೂಲಕ ತಿರುಗೇಟು ಕೊಟ್ಟಿದ್ದಾರೆ.

ಕಟ್ಟಾಗೆ ಸಾಲು-ಸಾಲು ಪ್ರಶ್ನೆ
ಕಟ್ಟಾ ಸುಬ್ರಹ್ಮಣ್ಯ ಆರೋಪಗಳಿಗೆ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಬೈರತಿ ಸುರೇಶ್, ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹೆಬ್ಬಾಳ ಕುಂತಿ, ಗ್ರಾಮ ಗುಡ್ಡದಹಳ್ಳಿ ಸರ್ವೆ ನಂ:1 ರಲ್ಲಿ 03 ಎಕರೆ 45 ಗುಂಟೆ ಸರ್ಕಾರಿ ಜಾಗದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ನೀವು ಅಕ್ರಮವಾಗಿ ಟಿ.ಡಿ.ಆರ್ ಪಡೆದು 200 ಕೋಟಿ ಹಗರಣ ನಡೆದಿರುವುದು ಸರ್ಕಾರಿ ಮಟ್ಟದಲ್ಲಿ ಹಾಗೂ ಕೋರ್ಟ್ ತನಿಖೆಯು ಯಾವ ಹಂತದಲ್ಲಿದೆ ? ಅಂತೆಲ್ಲಾ ಪ್ರಶ್ನೆಗಳನ್ನ ಕೇಳಿದ್ದಾರೆ.

ಕಾರ್ಯಕರ್ತರು ಕಣ್ಣೀರು ಹಾಕ್ತಿದ್ದಾರೆ; ಚಿಂತನ ಮಂಥನ ಸಭೆಯಲ್ಲಿ BL Santhosh ಆಕ್ರೋಶ

ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ನಿಮ್ಮ ಕಂಪನಿ ಇಟಾಸ್ಕ ಕಂಪನಿಯ ಮೇಲೆ ಸಿಬಿಐ ಮತ್ತು ಇ.ಡಿ ಹಾಗೂ ಲೋಕಾಯುಕ್ತರು ನಡೆಸುತ್ತಿರುವ ತನಿಖೆಗಳು ಎಷ್ಟು ಇವೆ ? ಇನ್ನೂ ಎಷ್ಟು ಕ್ರಿಮಿನಲ್ ಹಗರಣಗಳು ಮತ್ತು ಸಿವಿಲ್ ಹಗರಣಗಳು ಹಾಗೂ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ದೌರ್ಜನ್ಯ ಕಾಯಿದೆಗಳ ಕೇಸ್ ಹಾಗೂ ಬಾಗಲೂರು ಮತ್ತು ಬಂಡ ಕೊಡಗೇನಹಳ್ಳಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಮ್ಮ ಮೇಲೆ ಇರುವ ಮೊಕದ್ದಮೆಗಳು ಎಷ್ಟು ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ?ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ನಿಮ್ಮ ಮೇಲೆ ಇರುವ ಹೈಕೋರ್ಟ್ ಪಿಟೇಶನ್ ನಂ: 432/2013 ಹಾಗೂ ಕೈಂ ನಂ:57/2010 ರ ಕೇಸ್ ತನಿಖೆ ಯಾವ ಮಟ್ಟದಲ್ಲಿದೆ, ತಿಳಿಸುವಿರಾ ? ಎಂದಿದ್ದಾರೆ.

ವೈದ್ಯಕೀಯ ಬೇಲ್ ಪಡೆಯಲು ಲಿಪೋಮ ಕ್ಯಾನ್ಸರ್ ಎಂದಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದೀರಾ? ಈಗ ಚಿಕಿತ್ಸೆ ಯಾವ ಹಂತದಲ್ಲಿದೆ? ತಾವು ಈಗಲೂ ಸಹ ಮಡಿಕಲ್ ಬೇಲ್ ಮೇಲೆ ಇದಿರೋ ಅಥವಾ ಇಲ್ಲವೂ? ಯಾವ ತರಹದ ಬೇಲ್ ನಲ್ಲಿದೀರಾ? ರೆಗ್ಯುಲರ್ ಬೇಲ್ ಪಡೆದಿದ್ದೀರಾ ಕಟ್ಟಾ ಸುಬ್ರಮಣ್ಯ ನಾಯ್ಕು ರವರೇ ? ಎಂದು ಟಾಂಗ್ ಕೊಟ್ಟಿದ್ದಾರೆ.

ಕೆ.ಐ.ಎ.ಡಿ.ಬಿ ಲ್ಯಾಂಡ್ ಕೇಸ್ ಯಾವ ಹಂತದಲ್ಲಿದೆ ? ಪಿಟಿಶನ್ ನಂ: 5698/2019 ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ರವರು ಹಾಗೂ ಆರ್ ಸುಭಾಶ್ ರವರು ನೀಡಿರುವ ತೀರ್ಪು ಎನು ಬಂದಿದೆ ತಿಳಿಸುವಿರಾ ? ಹಾಗೂ ಇ.ಡಿ ಕೇಸ್ 27 ಕೋಟಿ ಹಗರಣದಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಕುಟುಂಬದ ಪಾತ್ರವೇನು? ಎಂದು ಪ್ರಶ್ನಿಸಿದ್ದಾರೆ.

19 ಡಿಸಂಬರ್ 2020 ರ ಹೈಕೋರ್ಟ್ ನ್ಯಾಯಧೀಶರಾದ ಮೈಕಲ್ ಡಿ ಕೋನ ರವರ ನೀಡಿರುವ ತೀರ್ಪು ಮನಿ ಲಾಂಡ್ರಿಗ್ ಕೇಸ್ ನ ಬಗ್ಗೆ ವಿವರ ನೀಡುವಿರಾ ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ? ಇನ್ನೂ ಈ ಕೇಸ್ ಯಾವ ಹಂತದಲ್ಲಿದೆ? ಇಂಡ್ ಸಿಂಡ್ ಡೆವಲಪರ್ಸ್ ರವರರಿಗೆ ತಾವುಗಳು ಕಟ್ಟಾ ಸುಬ್ರಮಣ್ಯ ನಾಯ್ಡು, ರವರೇ 3ಕೋಟಿ ವಂಚನೆ ಮಾಡಿರುವ ಕ್ರಿಮಿನಲ್ ಮೊಕದ್ದಮೆ ಯಾವ ಹಂತದಲ್ಲಿದೆ ? ಎಂದು ತಿರುಗೇಟು ಕೊಟ್ಟಿದ್ದಾರೆ.

ಮಾರ್ಚ್ 18 2021 ಡಿನೋಟಿಫೀಕೇಶನ್ ಹಗರಣ ಮಾಜಿ ಮುಖ್ಯ ಮಂತ್ರಿಗಳಾದ ಯಡಿಯೂರಪ್ಪ ಹಾಗೂ ಕಟ್ಟಾ ಸುಬ್ರಮಣ್ಯ ನಾಯ್ಡು ರವರ ಕೇಸ್ ಹೈಕೋರ್ಟ್ ಮಟ್ಟದಲ್ಲಿ ಯಾವ ಹಂತದಲ್ಲಿದೆ ? ಕಟ್ಟಾ ಸುಬ್ರಮಣ್ಯ ತಾವುಗಳು ಆರ್.ಟಿ.ಐ ಕಾರ್ಯಕರ್ತರನ್ನು ಬಳಸಿಕೊಂಡು ಹೆಬ್ಬಾಳ ಕ್ಷೇತ್ರದ ಎಲ್ಲಾ ವಿಭಾಗದ ಸರ್ಕಾರಿ ಅಧಿಕಾರಿಗಳನ್ನು ಭಯಪಡಿಸಿ ಎದುರಿಸಿ ಹಣ ವಸೂಲಿ ಮಾಡುತ್ತಿರುವ ನೀವು ಹಾಗೂ ಕಟ್ಟಾ ಜಗದೀಶ್ ಹಾಗೂ ಬಿ.ಜೆ.ಪಿ ಕಾರ್ಯಕರ್ತರು ಹಣ ವಸೂಲಿ ಮಾಡುತ್ತಿರುವ ಬಗ್ಗೆ ನಿಮ್ಮ ಉತ್ತರವೇನು ? ಎಂದು ಕೇಳಿದ್ದಾರೆ.

ಬಿ.ಬಿ.ಎಂ.ಪಿ ವಾರ್ಡ್ ಸಂಖ್ಯೆ: 20 & 34 ರ ಗಂಗಾನಗರ & ಗಂಗೇನಹಳ್ಳಿ ವಾರ್ಡ್‌ಗಳಲ್ಲಿ ನೀವು ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ಹಾಗೂ ನಿಮ್ಮ ಜೊತೆಯಲ್ಲಿರುವ ರೌಡಿಗಳು ಅಕ್ರಮವಾಗಿ ಅಕ್ರಮ ಮತದಾರ ರ ಪಟ್ಟಿಯಲ್ಲಿ ಮತದಾರರನ್ನು ಸೇರಿಸುತ್ತಿರುವವರ ಮೇಲೆ ನಿಮ್ಮ ಹಾಗೂ ನಿಮ್ಮ ಕಾರ್ಯಕರ್ತ ರ ಮೇಲೆ ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲೆಯಾಗಿರುವ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ?
ಕಟ್ಟಾ ಸುಬ್ರಮಣ್ಯ ನಾಯ್ಡು ರವರೇ ನಿಮ್ಮಗೇ ತಿಳಿದಿದೆಯಾ ? ಒಂದು ತಿಂಗಳ ಹಿಂದೆ ಹೆಬ್ಬಾಳದ ಚೋಳನಾಯ್ಕನಹಳ್ಳಿ ನಿವಾಸಿ ಹೆಣ್ಣುಮಗಳು ಮುನಿಲಕ್ಷ್ಮಮ್ಮ ರವರು ನಿಮ್ಮ ಬಳಿ ಸಹಾಯ ಕೇಳಿ ಬಂದಾಗ ಅವರನ್ನು ನೀವು ದಲಿತ ಮಹಿಳೆ ಎಂದು ಹಿಯಾಳಿಸಿದ್ದೀರಿ ಎಂದು ಕಟ್ಟಾ ಸುಬ್ರಮಣ್ಯ ನಾಯ್ಡುಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದ್ದಾರೆ.

click me!