ತಮಿಳುನಾಡು-ಕರ್ನಾಟಕ ನಡುವೆ ಕಾವೇರಿ ವಿವಾದ ಬರಲ್ಲ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

Published : Sep 13, 2025, 10:03 PM IST
 CM Siddaramaiah

ಸಾರಾಂಶ

ಈ ಬಾರಿ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಈ ವರ್ಷ ವಿದ್ಯುತ್ ಅಭಾವ ಬರಲ್ಲ. ತಮಿಳುನಾಡು-ಕರ್ನಾಟಕ ನಡುವೆ ಕಾವೇರಿ ವಿವಾದ ಬರಲ್ಲ. ಮಳೆ ಸರಿಯಾಗಿ ಆದ್ರೆ ನೀರಿನ ಸಮಸ್ಯೆ ಬರಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಮಂಡ್ಯ (ಸೆ.13): ಇಂದು ಗಗನಚುಕ್ಕಿ ಜಲಪಾತೋತ್ಸವ ಕಾರ್ಯಕ್ರಮದಲ್ಲಿ ಅತ್ಯಂತ ಸಂತೋಷದಿಂದ ಭಾಗಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಂತರ ಮಾತನಾಡಿದ ಅವರು, ಪ್ರತಿ ವರ್ಷ ಜಲಪಾತೋತ್ಸವವನ್ನ ಸರ್ಕಾರ ಮಾಡ್ತಿದೆ. ಜನ ಇದನ್ನ ಅನುಭವಿಸಬೇಕು, ಜನರನ್ನ ಆಕರ್ಷಿಸುವ ದೃಷ್ಟಿಯಿಂದ ಈ ಕಾರ್ಯಕ್ರಮ. ರಾಜ್ಯದಲ್ಲಿ ನದಿಗಳಿವೆ. ಅವೆಲ್ಲವೂ ಆರ್ಥಿಕ ವೃದ್ಧಿಗೆ ಸಹಕಾರಿಯಾಗಿವೆ. ಗಗನಚುಕ್ಕಿ ಜಲಪಾತ ಅತ್ಯಂತ ಸೊಗಸಾದ, ಪ್ರಕೃತಿ ಸೌಂದರ್ಯದಿಂದ ಕೂಡಿದೆ. ಇದನ್ನ ನೋಡಲು ಅನೇಕರು ನೋಡಲು ಬರ್ತಾರೆ. ಕಳೆದ ವರ್ಷವೂ ನಾನು ಇಲ್ಲಿಗೆ ಸೆಪ್ಟೆಂಬರ್ ನಲ್ಲಿ ಬಂದಿದ್ದೆ. ಈ ವಾತಾವರಣ ಅನುಭವಿಸಿದವರಿಗೆ ಗೊತ್ತಾಗಲಿದೆ ಎಂದರು.

ಜನ ಪ್ರವಾಸೋದ್ಯಮದಲ್ಲಿ ತೊಡಗಿಸಿಕೊಳ್ಳಲಿ ಎಂದು ಶಕ್ತಿ ಯೋಜನೆ ಜಾರಿ ಮಾಡಿದ್ದೇವೆ. ಪಂಚ ಗ್ಯಾರಂಟಿಗಳಿಂದ ಮಂಡ್ಯ ಜಿಲ್ಲೆಯಲ್ಲಿ 3200 ಕೋಟಿ ಖರ್ಚಾಗಿದೆ. ಸಮಾಜದಲ್ಲಿರುವ ಅಸಮಾನತೆ ಹೋಗಲಿ. ಮಹಿಳೆಯರನ್ನ ಸ್ವಾವಲಂಬನೆ ಮಾಡಬೇಕು ಅನ್ನೋದೇ ಇದರ ಉದ್ದೇಶ. 2013-18ರ ಅವಧಿಯಲ್ಲಿ ಕೊಟ್ಟ 165ರಲ್ಲಿ 158 ಭರವಸೆ ಈಡೇರಿಸಿದ್ದೇವೆ. ಈ ಅವಧಿಯಲ್ಲಿ ಕೊಟ್ಟ 492ರಲ್ಲಿ 242 ಭರವಸೆ ಈಡೇರಿಸಿದ್ದೇವೆ. ನಮ್ಮ ಸರ್ಕಾರ ಕೊಟ್ಟ ಭರವಸೆಗಳನ್ನ ಈಡೇರಿಸಿ, ನುಡಿದಂತೆ ನಡೆದಿದ್ದೆವೆ. ಮಂಡ್ಯ ಕೃಷಿ ಪ್ರಧಾನ ಜಿಲ್ಲೆ. ನಾವು ಅಧಿಕಾರಕ್ಕೆ ಬಂದಾಗಿನಿಂದ ಮೈಶುಗರ್‌ಗೆ 113 ಕೋಟಿ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಮಂಡ್ಯ ಶುಗರ್ ಫ್ಯಾಕ್ಟರಿ ಮುಚ್ಚಲು ಸಾಧ್ಯವಿಲ್ಲ. ಅದನ್ನ ಲಾಭದಾಯಕವಾಗಿ ಮಾಡಲು ಎಲ್ಲರೂ ಶ್ರಮಿಸಬೇಕು. ನಷ್ಟ ಇಲ್ಲದಂತೆ ನಡೆಯುವಂತೆ ಮಾಡಬೇಕು. ಜಿಲ್ಲಾ ಮಂತ್ರಿ, ಶಾಸಕರು ಎಲ್ಲರೂ ಒಟ್ಟಾಗಿ ಫ್ಯಾಕ್ಟರಿ ಅಭಿವೃದ್ಧಿಯತ್ತ ಕೆಲಸ ಮಾಡಿ. ಬಾಯ್ಲಿಂಗ್ ಹೌಸ್ ಒಂದು ಮಾಡಿಕೊಡಿ. ಇನ್ಮುಂದೆ ನಷ್ಟದಲ್ಲಿ ಇರಲ್ಲ ಅಂತಿದ್ದಾರೆ. ಆಯ್ತು, ಅದನ್ನು ಮಾಡಿಕೊಡೋಣ. ಇನ್ಮೇಲೆ ಕಾವೇರಿ ಸಮಸ್ಯೆ ಇರಲ್ಲ. ತಮಿಳುನಾಡಿಗೆ 177.25 TMC ಬಿಡಲು ತೀರ್ಮಾನ ಮಾಡಿದೆ. ಆದ್ರೂ, ಮೇಕೆದಾಟು ಯೋಜನೆಗೆ ಅಡ್ಡಿಯಾಗ್ತಿದ್ದಾರೆ. ಅದು ರಾಜಕೀಯ ಉದ್ದೇಶದಿಂದ ಮಾಡ್ತಿರೋದು. ಇಲ್ಲಿವರೆಗೆ 98 TMC ನೀರು ಕೊಡಬೇಕಿತ್ತು, ಆದರೂ ಈಗಾಗಲೇ 221 TMC ನೀರು ಹೋಗಿದೆ.

ಈ ವರ್ಷ ವಿದ್ಯುತ್ ಅಭಾವ ಬರಲ್ಲ

ನಾವು ಉತ್ತಮ ಮಳೆ ಆದ್ರೆ ನೀರು ಇಟ್ಕೊಳ್ಳೋಕೆ ಆಗಲ್ಲ. ಮಳೆ ಆದಾಗ ನೀರು ಕೊಟ್ಟೇ ಕೊಡ್ತೇವೆ. ಈ ಬಾರಿ ಎಲ್ಲಾ ಜಲಾಶಯಗಳು ಭರ್ತಿಯಾಗಿವೆ. ಈ ವರ್ಷ ವಿದ್ಯುತ್ ಅಭಾವ ಬರಲ್ಲ. ತಮಿಳುನಾಡು ಕರ್ನಾಟಕ ನಡುವೆ ಕಾವೇರಿ ವಿವಾದ ಬರಲ್ಲ. ಮಳೆ ಸರಿಯಾಗಿ ಆದ್ರೆ ನೀರಿನ ಸಮಸ್ಯೆ ಬರಲ್ಲ. ತಮಿಳುನಾಡು, ಕೇಂದ್ರ ಸರ್ಕಾರಕ್ಕೆ ಮನವಿ ಮಾಡ್ತೇನೆ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಅನುಮತಿ ಕೊಡಿ. ಮೇಕೆದಾಟು ಮಾಡಿದ್ರೆ 66 TMC ನೀರು ಶೇಖರಣೆ ಆಗಲಿದೆ. ಇದರಿಂದ ಎರಡು ರಾಜ್ಯಗಳಿಗೂ ಅನುಕೂಲ ಆಗಲಿದೆ. ಗಗನಚುಕ್ಕಿ ಜಲಪಾತೋತ್ಸವ ಅಭಿವೃದ್ಧಿಗೆ ನಿರಂತರ ಶ್ರಮವಹಿಸಿದ್ದೇವೆ. ಕಳೆದ ಮೂರು ವರ್ಷದಲ್ಲಿ 22 ಲಕ್ಷ ಜನ ಪ್ರವಾಸಿಗರು ಇಲ್ಲಿಗೆ ಬಂದಿದ್ದಾರೆ.

ಪ್ರವಾಸೋದ್ಯಮ ಇರುವ ಕಡೆ ಅಭಿವೃದ್ಧಿಗೆ ನಮ್ಮ ಆದ್ಯತೆ. 1902ರಲ್ಲೇ ವಿದ್ಯುತ್ ಉತ್ಪಾದನೆ ಮಾಡಿದ್ದು ಇದೇ ಶಿವನಸಮುದ್ರ. ಇಲ್ಲಿಂದಲೂ ರಾಜ್ಯಕ್ಕೆ ವಿದ್ಯುತ್ ಬಳಸಿಕೊಳ್ಳುತ್ತಿದ್ದೇವೆ. ಈ ವರ್ಷ 82 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿದೆ. 5 ಲಕ್ಷಕ್ಕೂ ಹೆಚ್ಚು ಪ್ರದೇಶದಲ್ಲಿ ಮಳೆ ಹಾನಿಯಾಗಿದೆ. ಮಳೆ ಹಾನಿಯಾದ ಎಲ್ಲರಿಗೂ ಪರಿಹಾರ ಕೊಡ್ತೇವೆ. ವಿಡಿಯೋ ಕಾನ್ಫರೆನ್ಸಿನ ಮೂಲಕ ಡಿಸಿ, ಸಿಇಓಗೆ 10 ದಿನಗಳಲ್ಲಿ ಜಂಟಿ ವರದಿ ನೀಡಲು ಸೂಚನೆ ನೀಡಲಾಗಿದೆ. ದುಡ್ಡಿನ ಅಭಾವ ಇಲ್ಲ. ಮಳೆ ಹಾನಿ ಪರಿಹಾರ ಶೀಘ್ರ ಕೊಡ್ತೇವೆ. ಗ್ಯಾರಂಟಿಗಳಿಂದ ಸರ್ಕಾರದಲ್ಲಿ ದುಡ್ಡಿಲ್ಲ ಅಂತಾ ವಿಪಕ್ಷಗಳು ಅಪಪ್ರಚಾರ ಮಾಡ್ತಾರೆ. ಇಲ್ಲಿವರೆಗೆ ಗ್ಯಾರಂಟಿ ಯೋಜನೆಗಳಿಗೆ 99 ಸಾವಿರ ಕೋಟಿ ಖರ್ಚು ಮಾಡಿದ್ದೇವೆ.

ವಿಪಕ್ಷಗಳಿಗೆ ಬೇರೆ ಯಾವುದೇ ವಿಷಯ ಇಲ್ಲ. ಅವರದ್ದು ಬರೀ ಸುಳ್ಳು ಹೇಳಿ, ಪ್ರಚೋದಾಮಿಸೋದೇ ಕೆಲಸ. ಜನ ಅವರ ಮಾತುಗಳಿಗೆ ಕಿವಿಕೊಡಬೇಡಿ. ಬಿಜೆಪಿಯವರಿಗೆ ಬೇರೆ ಕೆಲಸ ಇಲ್ಲ. ಹಿಂದೂ ಮುಸ್ಲಿಂರ ನಡುವೆ ವಿಷ ಬೀಜ ಬಿತ್ತುತ್ತಿದ್ದಾರೆ. ಕುವೆಂಪುರವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟದಂತೆ ಬದುಕಬೇಕು. ಬಿಜೆಪಿಯವರ ಮನೆ ದೇವರೇ ಸುಳ್ಳು. ಬಿಜೆಪಿ, ಜೆಡಿಎಸ್‌ನವರ ಮಾತು ನಂಬಬೇಡಿ. ಇದೀಗ ಬಿಜೆಪಿ ಜೊತೆ ಜೆಡಿಎಸ್‌ನವರು ಸೇರಿದ್ದಾರೆ. ಕಾಂಗ್ರೆಸ್‌ನ ಸರ್ಕಾರ ನಿಮ್ಮ ಸರ್ಕಾರ. ಸಮಾಜದ ಅಸಮಾನತೆ ತೊಲಗಿಸಲು ನಾವು ಕೆಲಸ ಮಾಡ್ತಿದ್ದೇವೆ. ಪರಸ್ಪರ ಪ್ರೀತಿಯಿಂದ ಬದುಕಬೇಕು. ಧ್ವೇಷದಿಂದ ಕಿತ್ತಾಡಬಾರದು. ಬಿಜೆಪಿಯವರು ಸಮಾಜ ಒಡೆಯುವಲ್ಲಿ ನಿಸ್ಸೀಮರು ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿಎಂ ಸಿದ್ದರಾಮಯ್ಯನವರೇ ಮತಿಗೇಡಿಗಳಾಗಿ, ಆದ್ರೆ ಅಧಿಕಾರಕ್ಕಾಗಿ ಲಜ್ಜೆಗೇಡಿಗಳಾಗಬೇಡಿ-ಆರ್. ಅಶೋಕ್ ಟೀಕೆ
India Latest News Live: ಅಕ್ರಮ ಸಂಬಂಧದ ಹಾದಿ ಹಿಡಿದ ಅಮ್ಮ - ಆಕೆಯ ಇಬ್ಬರು ಪುಟ್ಟ ಮಕ್ಕಳ ಮೋರಿಗೆಸೆದ ಪ್ರಿಯಕರ