ಬಿ​ಎ​ಸ್‌ವೈ ಸಿಎಂ ಅವಧಿ : ಡಿಸಿಎಂ ಅಶ್ವತ್ಥ್ ನಾರಾಯಣ್ ಹೀಗೆಂದರು

Kannadaprabha News   | Asianet News
Published : Feb 07, 2021, 09:30 AM IST
ಬಿ​ಎ​ಸ್‌ವೈ   ಸಿಎಂ ಅವಧಿ :  ಡಿಸಿಎಂ ಅಶ್ವತ್ಥ್ ನಾರಾಯಣ್ ಹೀಗೆಂದರು

ಸಾರಾಂಶ

ರಾಜ್ಯದಲ್ಲಿ ಮತ್ತೊಮ್ಮೆ ಸಂಪುಟ ವಿಸ್ತರಣೆಯಾಗುವ ಸಾಧ್ಯತೆ ಇದ್ದು, ಇದೇ ವೇಳೆ ಬಿ ಎಸ್‌ ವೈ ಸಿಎಂ ಪಟ್ಟದ ಅವಧಿ ಬಗ್ಗೆಯೂ ಕೂಡ ಡಿಸಿಎಂ ಅಶ್ವತ್ಥ್ ನಾರಾಯಣ್ ಮಾತನಾಡಿದ್ದಾರೆ. 

 ನವ​ದೆ​ಹ​ಲಿ (ಫೆ.07):  ಮುಖ್ಯ​ಮಂತ್ರಿ ಬಿ.ಎ​ಸ್‌.​ಯ​ಡಿ​ಯೂ​ರಪ್ಪ ಅವರು ಮುಖ್ಯ​ಮಂತ್ರಿ​ಯಾಗಿ ಮುಂದು​ವ​ರಿ​ಯು​ತ್ತಾ​ರೆ. ಇದರಲ್ಲಿ ಯಾವುದೇ ಗೊಂದಲಗಳಿಲ್ಲ. ಮುಖ್ಯ​ಮಂತ್ರಿ​ಯಾಗಿ ಅವ​ರಿಗೆ ಎಲ್ಲ ಅಧಿ​ಕಾರ ನೀಡ​ಲಾ​ಗಿದೆ ಎಂದು ಉಪ ಮುಖ್ಯ​ಮಂತ್ರಿ ಅಶ್ವತ್ಥ ನಾರಾ​ಯ​ಣ ಹೇಳಿ​ದ್ದಾ​ರೆ.

ದೆಹ​ಲಿ​ಯಲ್ಲಿ  ಸುದ್ದಿ​ಗಾ​ರರ ಜತೆಗೆ ಮಾತ​ನಾ​ಡಿ, ಮುಖ್ಯ​ಮಂತ್ರಿ ಅವ​ರಿಗೆ ಎಲ್ಲ ಅಧಿಕಾರ ನೀಡಿ​ದ್ದ​ರಿಂದಲೇ ಮಂತ್ರಿಮಂಡಲ ವಿಸ್ತರಣೆಗೆ ಅವ​ಕಾಶ ನೀಡ​ಲಾ​ಗಿ​ದೆ. ರಾಜಕೀಯದಲ್ಲಿ ಎಲ್ಲರಿಗೂ ಅಧಿಕಾರದ ಆಸೆ ಇರು​ತ್ತದೆ. ಈ ಹಿನ್ನೆ​ಲೆ​ಯಲ್ಲಿ ಕೆಲ​ವರು ಆಕ್ಷೇಪ ವ್ಯಕ್ತ​ಪ​ಡಿ​ಸಿ​ದ್ದಾರೆ ಎಂದು ತಿಳಿ​ಸಿ​ದ​ರು.

ಸಿಎಂ ಯಡಿಯೂರಪ್ಪ ನಾಯಕತ್ವ ಬದಲಾವಣೆ ಬಗ್ಗೆ ಸ್ಪಷ್ಟನೆ ಕೊಟ್ಟ ಕೇಂದ್ರ ಸಚಿವ ..

ಇದೇ ವೇಳೆ, ಲಿಂಗಾಯತ ಸಮುದಾಯದಲ್ಲಿ ಹಲವರಿಗೆ ಮೀಸಲಾತಿ ಸಿಕ್ಕಿದೆ. ಈ ಹಿನ್ನೆಲೆ​ಯಲ್ಲಿ ಈಗ ಪಂಚಮಸಾಲಿಗರು ಮೀಸಲಾತಿ ಕೇಳಿದ್ದಾರೆ. ಈಗ ಅದರ ಅಧ್ಯಯನಕ್ಕೆ ಮುಖ್ಯ​ಮಂತ್ರಿ ಸೂಚಿಸಿದ್ದಾರೆ. ಈ ಕುರಿತು ಅವಕಾಶಗಳನ್ನು ನೋಡಿ ಪರಿಶೀಲಿಸಲಾಗಿವುದು. ವೈಜ್ಞಾನಿಕವಾಗಿದ್ದರೆ ಸೂಕ್ತ ಕ್ರಮ ಕೈಗೊ​ಳ್ಳ​ಲಾ​ಗು​ತ್ತದೆ. ಎಲ್ಲ ಜನಾಂಗದಿಂದಲೂ ಮೀಸ​ಲಾ​ತಿಗೆ ಬೇಡಿಕೆ ಇದೆ. ಅದನ್ನು ಪರಿ​ಶೀ​ಲಿ​ಸ​ಲಾ​ಗು​ವುದು ಎಂದು ತಿಳಿ​ಸಿ​ದ​ರು.

ಹೊಸ ಸಾಧ್ಯ​ತೆ​ಗಾಗಿ ಕಾನೂ​ನು: ಕೃಷಿ ವಲಯದಲ್ಲಿ ಅನೇಕ ವರ್ಷಗಳಿಂದ ಸುಧಾರಣೆಗಳು ಆಗಿ​ರ​ಲಿ​ಲ್ಲ. ಬೆಳೆಗೆ ಉತ್ತಮ ಬೆಲೆ ಸಿಗುತ್ತಿ​ರ​ಲಿಲ್ಲ. ಈ ಹಿನ್ನೆ​ಲೆ​ಯಲ್ಲಿ ಸರ್ಕಾರ ಹೊಸ​ತನ ತರಲು ಚಿಂತಿ​ಸಿ​ದೆ. ಆ ನಿಟ್ಟಿ​ನಲ್ಲಿ ಕೃಷಿ ಕಾಯ್ದೆ​ಯಲ್ಲಿ ಹಳೆಯ ಯಾವ ನಿಯ​ಮಾ​ವ​ಳಿ​ಗ​ಳನ್ನೂ ನಿಲ್ಲಿ​ಸಿಲ್ಲ. ಹೊಸ ಅವ​ಕಾ​ಶ​ಗ​ಳನ್ನು ನೀಡುವ ನಿಟ್ಟಿ​ನಲ್ಲಿ ಕಾನೂನು ರೂಪಿ​ಸಿ​ದೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜ.8, 9ರವರೆಗೆ ಕಾಯಿರಿ : ಡಿಕೆ ಬಣದ ‘ತಿರುಗೇಟು’!
ಕೆಪಿಎಸ್‌ ಶಾಲೆಗಾಗಿ ಯಾವುದೇ ಕನ್ನಡ ಶಾಲೆ ಮುಚ್ಚುವುದಿಲ್ಲ: ಮಧು ಬಂಗಾರಪ್ಪ ಸ್ಪಷ್ಟನೆ