
ಕೊಪ್ಪಳ (ಮಾ.12) : ನಾಳೆ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೆಳನಕ್ಕೆ ಹಾಕಿದ್ದ ಬಲೂನ್ ಕಿತ್ತೊಗೆದಿರುವ ನಗರಸಭೆ ನಡೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.
ನಾಳೆ ತಾಲೂಕು ಸಾಹಿತ್ಯ ಸಮ್ಮೆಳನ ಹಿನ್ನೆಲೆ ಶಾಸಕ ರಾಘವೇಂದ್ರ ಹಿಟ್ನಾಳ್(Raghavendra Hitnal) ಸರ್ವಾಧ್ಯಕ್ಷರ ಫೋಟೋ ಇದ್ದ ಬಲೂನ್ ಹಾಕಿದ್ದರು. ಆದರೆ ಇಂದು ಸಂಜೆ ಬಿಜೆಪಿ ವಿಜಯಸಂಕಲ್ಪ ಸಮಾವೇಶದ ಹಿನ್ನಲೆ ನಗರಸಭೆ ಅಧಿಕಾರಿಗಳ ಮೂಲಕ ಬಿಜೆಪಿಯವರೇ ಕಿತ್ತುಹಾಕಿಸಿರುವ ಆರೋಪ ಕೇಳಿ ಬಂದಿದೆ.
KARNATAKA ELECTION 2023: ಕೊಪ್ಪಳಕ್ಕಿಂದು ವಿಜಯ ಸಂಕಲ್ಪ ಯಾತ್ರೆ ಆಗಮನ
ಸಾಹಿತ್ಯ ಸಮ್ಮೆಳನ ವಿಚಾರದಲ್ಲೂ ಬಿಜೆಪಿ ಬಲೂನ್ ಪಾಲಿಟಿಕ್ಸ್(Balloon politics) ಮಾಡ್ತಿದೆಯಾ? ತಾಲೂಕು ಸಾಹಿತ್ಯ ಸಮ್ಮೆಳನಕ್ಕೆ ಮೆರಗು ನೀಡಲು ಶಾಸಕ ಹಿಟ್ನಾಳ ನಗರಸಭೆ ಎದುರುಗಡೆ ಸರ್ವಾಧ್ಯಕ್ಷರ ಫೋಟೊ ಬಲೂನ್ ಹಾಕಿಸಿದ್ದರು. ಅಲ್ಲದೆ ಬಿಜೆಪಿ ಸಮಾವೇಶ ನಡೆಯುವ ಸ್ಥಳ, ಬಲೂನ್ ಹಾಕಿರುವ ಸ್ಥಳ ಬೇರೆ ಬೇರೆ.ಆದರೂ ನಗರಸಭೆ ಮುಂದಿನ ಬಲೂನ್ ಕಿತ್ತು ಹಾಕಿದ್ಯಾಕೆ? ಸಮಾವೇಶ ಹಿನ್ನೆಲೆ ಬಿಜೆಪಿಯವರೇ ಕಿತ್ತುಹಾಕಿದರೆ? ಬಿಜೆಪಿ ಕನ್ನಡ ಸಾಹಿತ್ಯ ವಿಚಾರದಲ್ಲೂ ಇಂಥ ರಾಜಕೀಯ ಮಾಡುತ್ತದೆಯೆ?
ಕೆಲವರು ಆರೋಪಿಸಿದಂತೆ ಬಿಜೆಪಿಯವರೇ ನಗರಸಭೆ ಅಧಿಕಾರಿಗಳ ಮೂಲಕ ಕಿತ್ತುಹಾಕಿಸಿದ್ದಾರೆ. ಬಿಜೆಪಿ ವಿಜಯಸಂಕಲ್ಪ ಸಮಾವೇಶಕ್ಕೆ ಎಲ್ಲೆಡೆ ಬ್ಯಾನರ್ ಹಾಕಲಾಗುತ್ತಿದೆ. ಇದರ ಮದ್ಯೆ ಕನ್ನಡ ಸಾಹಿತ್ಯದ ಬಲೂನ್ ಇರುವುದರಿಂದ ಕಿತ್ತುಹಾಕಿದ್ದಾರೆ ಎಂದು ಸಾಹಿತ್ಯಾಭಿಮಾನಿಗಳು ಆರೋಪಿಸಿದ್ದಾರೆ.ಬಿಜೆಪಿ ಕ್ರಮಕ್ಕೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ
Silver Jubilee Celebration: ಕೊಪ್ಪಳ ಜಿಲ್ಲೆಗೆ 25ನೇ ವರ್ಷದ ರಜತ ವೈಭವ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.