ನಮ್ಮ ಅನುದಾನ ಬೇಕಿದ್ರೆ ವಾಪಸ್ ತಗೊಂಡು ಬಡವರಿಗೆ ಅಕ್ಕಿ, ಹಣ ಕೊಡಿ: ಬಿಜೆಪಿ ಶಾಸಕ ಮನವಿ

Published : May 07, 2021, 06:21 PM IST
ನಮ್ಮ ಅನುದಾನ ಬೇಕಿದ್ರೆ ವಾಪಸ್ ತಗೊಂಡು ಬಡವರಿಗೆ ಅಕ್ಕಿ, ಹಣ ಕೊಡಿ: ಬಿಜೆಪಿ ಶಾಸಕ ಮನವಿ

ಸಾರಾಂಶ

ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಶಾಸಕರೊಬ್ಬರು ಲಾಕ್‌ಡೌನ್ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಯಾದಗಿರಿ, (ಮೇ.07): ರಾಜ್ಯದಲ್ಲಿ ಕೊರೋನಾ ಮಿತಿ ಮೀರುತ್ತಿದೆ. ಜನತಾ ಕರ್ಫ್ಯೂ ಜಾರಿಯಲ್ಲಿದ್ದರೂ ಸಹ ಕೊರೋನಾ ಕಂಟ್ರೋಲ್‌ಗೆ ಬರುತ್ತಿಲ್ಲ. ಇದರಿಂದ ಆಡಳಿತ ಪಕ್ಷದ ನಾಯಕರುಗಳಿಗೆ ಕರ್ನಾಟಕ ಲಾಕ್‌ಡೌನ್‌ಗೆ ಮನವಿ ಮಾಡುತ್ತಿದ್ದಾರೆ.

ಹೌದು... ಈ ಬಗ್ಗೆ ಸುರಪುರ ಬಿಜೆಪಿ ಶಾಸಕ ರಾಜುಗೌಡ ಪ್ರತಿಕ್ರಿಯಿಸಿದ್ದು, ನಿಮ್ಮ ಕೈ ಮಗಿತಿವಿ ಲಾಕ್​ಡೌನ್​ ಮಾಡಿ. ನಮಗೆ ಕೊಟ್ಟ ಅನುದಾನ ಎಲ್ಲಾ ವಾಪಸ್ ತಗೋಳಿ ಬೇಕಿದ್ರೆ. ಆದ್ರೆ ಬಡವರಿಗೆ ರೇಶನ್ ಕೊಡಿ. ಇಲ್ಲವೇ ಹಣ ಹಾಕಿ ಎಂದು ಸಿಎಂ ಬಿ.ಎಸ್​. ಯಡಿಯೂರಪ್ಪ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.

ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ: ವಾರದಲ್ಲಿ ಇದು 2ನೇ ಸಲ

ಸರ್ಕಾರಕ್ಕೆ ಸಾಲ ಆದ್ರೂ ಪರವಾಗಿಲ್ಲ ಲಾಕ್ ಡೌನ್ ಮಾಡಿ. ಜನತಾ ಕರ್ಫ್ಯೂದಿಂದ ನಾವು ಉಳಿಯುವುದಿಲ್ಲ. ಲಾಕ್ ಡೌನ್ ಮಾಡಿದ್ರೆ ಮಾತ್ರ ನಾವು ಉಳಿಯುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬಡವರು ಸಾಲ ಮಾಡೋದು ಆಸ್ಪತ್ರೆ ಸೇರಿದಾಗ, ಮದುವೆ ಮಾಡಿದಾಗ ಮಾತ್ರ. ನಾವು ಆಸ್ಪತ್ರೆ ಸೇರುತ್ತಿದ್ದೆವೆ ಸಾಲ ಆದ್ರೂ ಚಿಂತೆಯಿಲ್ಲ ದಯವಿಟ್ಟು ನಾಲ್ಕು ವಾರಗಳ ಕಾಲ ಲಾಕ್ ಡೌನ್ ಮಾಡಿ ಎಂದು ಎಂದು ಒತ್ತಾಯಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅಕ್ಕಿ ಅಕ್ರಮದಲ್ಲಿ ಬಿಜೆಪಿಯವರೇ ಶಾಮೀಲು: ಸಚಿವ ಪ್ರಿಯಾಂಕ್ ಖರ್ಗೆ
ಬಂಡವಾಳ ಆಕರ್ಷಣೆಗೆ ರಾಜ್ಯಗಳ ನಡುವೆ ಸ್ಪರ್ಧೆ ಹೆಚ್ಚಾಗಿದೆ: ಸಚಿವ ಎಂ.ಬಿ.ಪಾಟೀಲ್‌