ಅಂತಿಮ ದಿನದಲ್ಲಿ ನಾಮಪತ್ರಗಳ ಭರಾಟೆ: ದಾವಣಗೆರೆಯಲ್ಲಿ 69 ನಾಮಪತ್ರ ಸಲ್ಲಿಕೆ

Published : Apr 21, 2023, 12:00 AM IST
ಅಂತಿಮ ದಿನದಲ್ಲಿ ನಾಮಪತ್ರಗಳ ಭರಾಟೆ: ದಾವಣಗೆರೆಯಲ್ಲಿ 69 ನಾಮಪತ್ರ ಸಲ್ಲಿಕೆ

ಸಾರಾಂಶ

ಏ. 20 ರಂದು ಸಲ್ಲಿಸಿದ 69 ನಾಮಪತ್ರಗಳಲ್ಲಿ 66 ಪುರುಷ, 3 ಮಹಿಳೆಯರ ನಾಮಪತ್ರಗಳು ಸೇರಿವೆ.  ಬಿಜೆಪಿ 7, ಕಾಂಗ್ರೆಸ್ 5, ಆಮ್ ಆದ್ಮಿ 6, ಬಿಎಸ್‌ಪಿ 4, ಜೆಡಿಎಸ್ 7, ಇತರೆ ಪಕ್ಷ 9, ಪಕ್ಷೇತರ 31 ನಾಮಪತ್ರಗಳು ಸಲ್ಲಿಕೆಯಾಗಿವೆ.   

ವರದಿ: ವರದರಾಜ್ 

ದಾವಣಗೆರೆ(ಏ.21): ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಡೆಯುತ್ತಿದ್ದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ನಿನ್ನೆ(ಏಪ್ರಿಲ್ 20) ರಂದು ಜಿಲ್ಲೆಯ 7 ಕ್ಷೇತ್ರಗಳಲ್ಲಿ 69 ನಾಮಪತ್ರಗಳು ಸಲ್ಲಿಕೆಯಾಗಿವೆ. ಏ. 20 ರಂದು ಸಲ್ಲಿಸಿದ 69 ನಾಮಪತ್ರಗಳಲ್ಲಿ 66 ಪುರುಷ, 3 ಮಹಿಳೆಯರ ನಾಮಪತ್ರಗಳು ಸೇರಿವೆ.  ಬಿಜೆಪಿ 7, ಕಾಂಗ್ರೆಸ್ 5, ಆಮ್ ಆದ್ಮಿ 6, ಬಿಎಸ್‌ಪಿ 4, ಜೆಡಿಎಸ್ 7, ಇತರೆ ಪಕ್ಷ 9, ಪಕ್ಷೇತರ 31 ನಾಮಪತ್ರಗಳು ಸಲ್ಲಿಕೆಯಾಗಿವೆ. 

103 ಜಗಳೂರು ವಿಧಾನಸಭಾ ಕ್ಷೇತ್ರ

ಎಂ.ಓ.ದೇವರಾಜ್ (ಜೆಡಿಎಸ್), ದಿವಾಕರ .ಓ, ನಾಗರಾಜ ಎಂ, ರಾಘವೇಂದ್ರ ಕೆ.ಆರ್. ಹೆಚ್.ಪಿ.ರಾಜೇಶ್, ಡಿ.ತಿಪ್ಪೇಸ್ವಾಮಿ, ಭೀಮಪ್ಪ.ಜಿ.ಎನ್ ಪಕ್ಷೇತರ, ಜಿ.ಸ್ವಾಮಿ ಸಮಾಜವಾದಿ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿರುವರು.

Karnataka election 2023: ಕಾಂಗ್ರೆಸ್, ಬಿಜೆಪಿಗೆ ಬಂಡಾಯ ಬಿಸಿ, ಜೆಡಿಎಸ್‌ಗೆ ಸುಗ್ಗಿ!

105.ಹರಿಹರ ವಿಧಾನ ಸಭಾ‌ ಕ್ಷೇತ್ರ

ಶ್ರೀನಿವಾಸ ಎನ್.ಹೆಚ್. ಭಾರತೀಯ ರಾಷ್ಟ್ರೀಯ (ಕಾಂಗ್ರೆಸ್ ) ಬಿ.ಪಿ.ಹರೀಶ್ (ಬಿಜೆಪಿ), ಡಿ.ಹನುಮಂತಪ್ಪ ಬಿಎಸ್‌ಪಿ, ಜಿ.ಹೆಚ್.ಬಸವರಾಜ ಆಮ್ ಆದ್ಮಿ, ಜ್ಞಾನೇಶಪ್ಪ ದರುಗದ ಆಮ್ ಆದ್ಮಿ, ಜಯಕುಮಾರ್ ಟಿ.ಹೆಚ್,  ಕರಿಬಸಪ್ಪ ಮಠದಾವ, ಬಿ.ಎಸ್.ಉಜ್ಜನಪ್ಪ, ಮೂರ್ತಿ ಹೆಚ್.ಕೆ ಪಕ್ಷೇತರ,

106 ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರ

ಕೆ.ಹೆಚ್.ನಾಗರಾಜ( ಬಿಜೆಪಿ) ಮಂಜುನಾಥ.ಎನ್ ಪಕ್ಷೇತರ, ಎಂ.ಜಿ.ಶಿವಶಂಕರ ಜೆಡಿಎಸ್, ಮೊಹಮ್ಮದ್ ಹಯಾತ್ ಎಂ. ಪಕ್ಷೇತರ, ಸುರ್ಜಿತ್ ಜಿ ಸಂಯುಕ್ತ ವಿಕಾಸ ಪಾರ್ಟಿಯಿಂದ ನಾಮಪತ್ರ ಸಲ್ಲಿಸಿದ್ದಾರೆ

107 ದಾವಣಗೆರೆ ದಕ್ಷಿಣ ಕ್ಷೇತ್ರ, 

ಗೌಸ್‌ಪೀರ್ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ , ಅಜಯ್ ಕುಮಾರ್ ಬಿ.ಜಿ( ಬಿಜೆಪಿ) ಶಾಮನೂರು ಶಿವಶಂಕರಪ್ಪ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 2, ಜೆ.ಅಮಾನುಲ್ಲಾ ಖಾನ್ ಜೆಡಿಎಸ್, ಮೊಹಮದ್ ರಿಯಾಜ್ ಸಾಬ್ ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ, ಸಾಜಿದ್ ಆಮ್ ಆದ್ಮಿ ಪಾರ್ಟಿ, ಎಂ.ಬಿ.ಪ್ರಕಾಶ್, ಎಸ್.ಕೆ.ಅಫಜಲ್ ಖಾನ್, ಜಿ.ಆರ್.ಶಿವಕುಮಾರಸ್ವಾಮಿ, ದಿಲ್ ಜಾನ್ ಖಾನ್, ಶೇಖ್ ಅಹಮದ್, ಎಂ.ರಾಜಸಾಬ್ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದಾರೆ.

108.ಮಾಯಕೊಂಡ ವಿಧಾನಸಭಾ ಕ್ಷೇತ್ರ

ಕೆ.ಎಸ್.ಬಸವರಾಜ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ಕೆ.ಶೇಖರನಾಯ್ಕ ಕರ್ನಾಟಕ ರಾಜ್ಯ ರೈತ ಸಂಘ, ಜಿ.ಎಸ್.ಶ್ಯಾಮ್ ಬಿಜೆಪಿ, ಎಂ.ಬಸವರಾಜನಾಯ್ಕ ಬಿಜೆಪಿ, ಅಜ್ಜಪ್ಪ ಎನ್. ಎಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಧರ್ಮನಾಯ್ಕ ಆಮ್ ಆದ್ಮಿ ಪಾರ್ಟಿ, ಹೆಚ್.ಆನಂದಪ್ಪ ಜೆಡಿಎಸ್, ಆರ್.ಯಶೋದ ಬಿ.ಎಸ್.ಪಿ, ಜಿ.ಎಸ್.ಶ್ಯಾಮ್, ಶ್ರೀಧರ ಎನ್, ಶಿವಾನಂದ ಆರ್, ಕೆ.ಹೆಚ್.ವೆಂಕಟೇಶ್, ಪುಷ್ಪ ಬಿ.ಎಂ, ಪೆದ್ದಪ್ಪ.ಎಸ್, ರೇವ್ಯನಾಯ್ಕ ಸಿ  ಪಕ್ಷೇತರ,

109.ಚನ್ನಗಿರಿ ವಿಧಾನಸಭಾ ಕ್ಷೇತ್ರ

ಟಿ.ವಿ.ಪಟೇಲ್ ಜೆಡಿಎಸ್, ಎಂ.ರೂಪ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ, ಶಂಕರ ಶಾಮನೂರ ಐರಾ ನ್ಯಾಷನಲ್ ಪಾರ್ಟಿ, ಆದಿಲ್ ಖಾನ್ ಎಸ್.ಕೆ. ಆಮ್ ಆದ್ಮಿ ಪಾರ್ಟಿ,  ಕೆ.ಶಿವಲಿಂಗಪ್ಪ, ಎಂ.ವಿ.ಮಲ್ಲಿಕಾರ್ಜುನ, ರಂಗನಾಥ ಬಿ, ಪಕ್ಷೇತರ.  

ದಾವಣಗೆರೆ ಉತ್ತರ ದಕ್ಷಿಣ ಕ್ಷೇತ್ರಗಳಿಗೆ ಹೊಸಬರಿಗೆ ಮಣೆ: ಹಾಲಿ ಶಾಸಕರಿಗೆ ಶಾಕ್ ನೀಡಿ ಬಿಜೆಪಿ ಹೈಕಮಾಂಡ್!

110 ಹೊನ್ನಾಳಿ ವಿಧಾನಸಭಾ ಕ್ಷೇತ್ರ

ಎಂ.ಪಿ.ರೇಣುಕಾಚಾರ್ಯ ಬಿಜೆಪಿ, ಬಿ.ಜಿ.ಶಿವಮೂರ್ತಿ ಜೆಡಿಎಸ್ 2, ಕೃಷ್ಣಪ್ಪ ಬಿಎಸ್‌ಪಿ 2, ನರಸಿಂಹಪ್ಪ ಕೆ. ಆಮ್ ಆದ್ಮಿ ಪಾರ್ಟಿ, ರಂಗನಾಥಸ್ವಾಮಿ ಎಂ, ಲಕ್ಷ್ಮಿಕಾಂತ್  ಹೆಚ್.ಟಿ, ವಾಸಪ್ಪ, ಪಕ್ಷೇತರ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ