ಹಿಂದಿನ ಎಸ್ಪಿ ಸರ್ಕಾರ 85 ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಮುಸ್ಲಿಮರಿಗೆ ಶೇ.20ರಷ್ಟುಮೀಸಲು ನೀಡಿತ್ತು. ಈ ಮೀಸಲು ರದ್ದು ಮಾಡುವ ಶಿಫಾರಸಿಗೆ ಸಿಎಂ ಒಪ್ಪಿಗೆ ಸೂಚಿಸಿದ್ದಾರೆ,
ಲಖನೌ: ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಅಲ್ಪಸಂಖ್ಯಾತರಿಗೆ ನೀಡಿದ್ದ ಶೇ.20ರಷ್ಟುಮೀಸ ಲು ರದ್ದುಗೊಳಿಸಲು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರ ಚಿಂತಿಸಿದ್ದು, ವಿವಾದಕ್ಕೆ ಕಾರಣವಾಗುವ ಸಾಧ್ಯತೆ ಇದೆ.
ಹಿಂದಿನ ಎಸ್ಪಿ ಸರ್ಕಾರ 85 ಸಾಮಾಜಿಕ ಕಲ್ಯಾಣ ಯೋಜನೆಗಳಲ್ಲಿ ಮುಸ್ಲಿಮರಿಗೆ ಶೇ.20ರಷ್ಟುಮೀಸಲು ನೀಡಿತ್ತು. ಈ ಮೀಸಲು ರದ್ದು ಮಾಡುವ ಶಿಫಾರಸಿಗೆ ಸಿಎಂ ಒಪ್ಪಿಗೆ ಸೂಚಿಸಿದ್ದು, ಸಂಪುಟ ಸಭೆಯ ಒಪ್ಪಿಗೆಗೆ ಕಳುಹಿಸಿಕೊಡಲಾಗುತ್ತದೆ. ಬಿಜೆಪಿ ಯಾವುದೇ ಧರ್ಮದ ನಂಬಿಕೆಯ ವಿರುದ್ಧವಾಗಿಲ್ಲ. ನೈಜ ಫಲಾನುಭವಿಗಳಿಗೆ ಸೌಲಭ್ಯ ದೊರೆಯಲಿ ಎಂಬುದು ಸರ್ಕಾರದ ಉದ್ದೇಶವಾಗಿದೆ.