ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ ರಂಜಾನ್ ಆಚರಣೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸದೇ ಇರುವುದಕ್ಕೆ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ನವದೆಹಲಿ (ಜೂ.26): ಈದ್ಗಾ ಮೈದಾನದಲ್ಲಿ ನಡೆಯುತ್ತಿರುವ ರಂಜಾನ್ ಆಚರಣೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸದೇ ಇರುವುದಕ್ಕೆ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.
ಆದಿತ್ಯನಾಥ್ ಅನುಪಸ್ಥಿತಿ ಬಗ್ಗೆ ಪ್ರತಿಕ್ರಿಯಿಸುತ್ತಾ, ಅಖಿಲೇಶ್ ಯಾದವ್, ಮಾಜಿ ಮುಖ್ಯಯಾದ ನಾನು ಇಲ್ಲಿಗೆ ಬಂದಿದ್ದೇನೆ. ರಾಜ್ಯದ ಮುಖ್ಯಮಂತ್ರಿಯಾಗಿ ಅವರ್ಯಾಕೆ ಇಲ್ಲಿಗೆ ಬಂದಿಲ್ಲ ಎನ್ನುವುದನ್ನು ಹೇಳಬೇಕು. ಈದ್ ಸಂದರ್ಭದಲ್ಲಿ ಈದ್ಗಾ ಮೈದಾನಕ್ಕೆ ಮಂತ್ರಿಗಳು ಭೇಟಿ ನೀಡುವುದು ಉತ್ತರ ಪ್ರದೇಶದ ಸಂಪ್ರದಾಯ ಎಂದು ಎಂದು ಹೇಳಿದ್ದಾರೆ.
ಜಗತ್ತಿಗೆ ಶಾಂತಿ ಮತ್ತು ಸಂತೋಷದ ಸಂದೇಶ ನೀಡಲು ಇದೊಂದು ವಿಶೇಷ ಸಂದರ್ಭ. ಈ ಹಬ್ಬವು ಭ್ರಾತೃತ್ವವನ್ನು ಹೆಚ್ಚಿಸಲಿ ಎಲ್ಲರಿಗೂ ರಂಜಾನ್ ಶುಭಾಶಯಗಳು ಎಂದು ಯೋಗಿ ಆದಿತ್ಯನಾಥ್ ಶುಭಾಶಯ ಕೋರಿದ್ದಾರೆ.