ಬೆಂಕಿ ಇಡುವುದು ಬೇಡ, ಒಟ್ಟಾಗಿ ನೀರು ಬಿಡಲ್ಲ ಎನ್ನೋಣ, ಜೈಲಿಗೆ ಹೋದರೂ ಪರವಾಗಿಲ್ಲ ಎಂದ ನಿರ್ದೇಶಕ ಯೋಗರಾಜ್ ಭಟ್ ಪತ್ರದಲ್ಲೇನಿದೆ..?

Published : Sep 13, 2016, 10:52 AM ISTUpdated : Apr 11, 2018, 12:57 PM IST
ಬೆಂಕಿ ಇಡುವುದು ಬೇಡ, ಒಟ್ಟಾಗಿ ನೀರು ಬಿಡಲ್ಲ ಎನ್ನೋಣ, ಜೈಲಿಗೆ ಹೋದರೂ ಪರವಾಗಿಲ್ಲ ಎಂದ ನಿರ್ದೇಶಕ ಯೋಗರಾಜ್ ಭಟ್ ಪತ್ರದಲ್ಲೇನಿದೆ..?

ಸಾರಾಂಶ

ಬೆಂಗಳೂರು(ಸೆ.14): ಚಿತ್ರ ಸಾಹಿತಿ, ಸ್ಯಾಂಡಲ್'ವುಡ್ ನಿರ್ದೇಶಕ ಯೋಗರಾಜ್ ಭಟ್ ತಮ್ಮದೇ ಸ್ಟೈಲಿನಲ್ಲಿ ಕಾವೇರಿ ವಿಚಾರವಾಗಿ ರಾಜ್ಯದ ಜನತೆಗೆ, ರಾಜಕೀಯ ಮುಖಂಡರಿಗೆ ಪತ್ರವೊಂದನ್ನು ಬರೆದಿದ್ದಾರೆ.

ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಮುಖಂಡರೆಲ್ಲರು ಒಟ್ಟಿಗೆ ಸೇರಿ ತಮಿಳುನಾಡಿಗೆ ನೀರು ಹರಿಸುವುದಿಲ್ಲ ಎಂದು ಒಗ್ಗಟ್ಟು ಪ್ರದರ್ಶೀಸ ಬೇಕು ಎಂದು ಯೋಗರಾಜ್ ಭಟ್ ಮನವಿ ಮಾಡಿದ್ದಾರೆ. 

ನಮ್ಮಲ್ಲಿ ಕುಡಿಯುವ ನೀರಿನ ಕೊರತೆ ಇದೆ, ಆದರೆ ಅವರು ಬೆಳೆಗೆ ನೀರು ಕೇಳುತ್ತಿದ್ದಾರೆ ಈ ಹಿನ್ನಲೆಯಲ್ಲಿ ನಮ್ಮ ನಾಯಕರು ಸುಪ್ರೀಂ ಕೋರ್ಟ್'ಗೆ ಇಲ್ಲಿನ ಪರಿಸ್ಥಿತಿಯನ್ನು ತಿಳಿ ಹೇಳಬೇಕು. ಕೇಳಲಿಲ್ಲ ಎಂದರೆ ನೀರು ಕೊಡುವುದಿಲ್ಲ ಎನ್ನಬೇಕು ಎಂದಿದ್ದಾರೆ. 

ರಾಜಕೀಯ ಮುಖಂಡರು ನಮ್ಮಲೇ ನೀರಿಲ್ಲ, ಕಾವೇರಿಯನ್ನು ಬಿಡುವುದಿಲ್ಲ ಎನ್ನುವುದನ್ನು ಕೂಗಿ ಹೇಳಬೇಕು. ಈ ವಿಷಯದಲ್ಲಿ ಜೈಲಿಗೆ ಹೋಗಲು ನಾಯಕರು ಹೆದರಬಾರದು ಎಂದಿದ್ದಾರೆ. 

ಜೀವನದಲ್ಲಿ ಒಮ್ಮೆಯಾದರು ಎಲ್ಲಾರು ಒಟ್ಟಾಗಿ ಹೋರಾಡಿ ಎಂದು ಮನವಿ ಮಾಡಿದ್ದಾರೆ. ಹಿಂಸೆ ಬೇಡ, ಬೆಂಕಿ ಇಡುವುದು ಬೇಡ, ಇದರ ಬದಲು ನಮ್ಮ ಮುಖಂಡರನ್ನು ಹಿಡಿಯೋಣ ಅವರು ಬಂದು ನಮ್ಮೊಂದಿಗೆ ಹೋರಾಟ ಮಾಡಲಿ, ನೀರು ಕೊಡುವುದಿಲ್ಲ ಎಂಬುದು ಒಂದೇ ಉತ್ತರವಾಗಲಿ ಎಂದು ಭಟ್ಟರು ಪತ್ರ ಬರೆದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

Extreme fast-food consumer: ಸಿಕ್ಕಾಪಟ್ಟೆ ಫಾಸ್ಟ್‌ಫುಡ್‌ ತಿನ್ನುತ್ತಿದ್ದ 16ರ ಬಾಲಕಿ ಅನಾರೋಗ್ಯಕ್ಕೆ ಸಾವು
ಭಾರತದ ಪ್ರಜಾಪ್ರಭುತ್ವಕ್ಕೆ ಅಟಲ್ ಬಿಹಾರಿ ವಾಜಪೇಯಿ ಕೊಡುಗೆಗಳು: ಒಂದು ಸ್ಮರಣಾರ್ಥ ಲೇಖನ