ಆರ್ಥಿಕತೆ ಕುಸಿತಕ್ಕೆ ಯುಪಿಎ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ; ಮೋದಿ ಸರ್ಕಾರದ ವಿರುದ್ಧ ಬಿಜೆಪಿ ಧುರೀಣ ವಾಗ್ದಾಳಿ

Published : Sep 28, 2017, 03:45 PM ISTUpdated : Apr 11, 2018, 12:49 PM IST
ಆರ್ಥಿಕತೆ ಕುಸಿತಕ್ಕೆ ಯುಪಿಎ ಸರ್ಕಾರವನ್ನು ದೂಷಿಸಲು ಸಾಧ್ಯವಿಲ್ಲ; ಮೋದಿ ಸರ್ಕಾರದ ವಿರುದ್ಧ ಬಿಜೆಪಿ ಧುರೀಣ ವಾಗ್ದಾಳಿ

ಸಾರಾಂಶ

ಕೇಂದ್ರ ಸರ್ಕಾರದ ತಪ್ಪು ನೀತಿಗಳ ಪರಿಣಾಮ ದೇಶದ ಆರ್ಥಿಕತೆ ಪ್ರಪಾತದ ಹಾದಿ ಹಿಡಿದಿದೆ ಎಂದು ವಿವಾದ  ಹುಟ್ಟು ಹಾಕಿದ ಬಿಜೆಪಿ ಧುರೀಣ ಯಶವಂತ್ ಸಿನ್ಹಾ ಇಂದು ಇನ್ನು ಮುಂದುವರೆದು ನಾವು ಆರ್ಥಿಕತೆ ಕುಸಿತಕ್ಕೆ ನಾವು ಯುಪಿಎ ಸರ್ಕಾರವನ್ನು ನಿಂದಿಸಲು ಸಾಧ್ಯವಿಲ್ಲ. ಅವರಷ್ಟೇ ನಮಗೂ ಅವಕಾಶ ಸಿಕ್ಕಿದೆ ಎಂದು ಮೋದಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ.

ನವದೆಹಲಿ (ಸೆ.28): ಕೇಂದ್ರ ಸರ್ಕಾರದ ತಪ್ಪು ನೀತಿಗಳ ಪರಿಣಾಮ ದೇಶದ ಆರ್ಥಿಕತೆ ಪ್ರಪಾತದ ಹಾದಿ ಹಿಡಿದಿದೆ ಎಂದು ವಿವಾದ  ಹುಟ್ಟು ಹಾಕಿದ ಬಿಜೆಪಿ ಧುರೀಣ ಯಶವಂತ್ ಸಿನ್ಹಾ ಇಂದು ಇನ್ನು ಮುಂದುವರೆದು ನಾವು ಆರ್ಥಿಕತೆ ಕುಸಿತಕ್ಕೆ ನಾವು ಯುಪಿಎ ಸರ್ಕಾರವನ್ನು ನಿಂದಿಸಲು ಸಾಧ್ಯವಿಲ್ಲ. ಅವರಷ್ಟೇ ನಮಗೂ ಅವಕಾಶ ಸಿಕ್ಕಿದೆ ಎಂದು ಮೋದಿ ಸರ್ಕಾರದ ವಿರುದ್ಧ ಮಾತನಾಡಿದ್ದಾರೆ.

ಮೋದಿ ಸರ್ಕಾರದ ನೀತಿಗಳಿಂದಾಗಿ ದೇಶದ ಆರ್ಥಿಕ ಪ್ರಗತಿ ಪಾತಾಳಕ್ಕೆ ಇಳಿದಿದೆ. ಇದೇ ಸಂದರ್ಭದಲ್ಲಿ ಆರ್ಥಿಕತೆಯನ್ನು ಅವ್ಯವಸ್ಥೆ ಮಾಡಿದ್ದಾರೆಂದು ವಿತ್ತ ಸಚಿವ ಅರುಣ್ ಜೇಟ್ಲಿಯ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಬಡತನವನ್ನು ಬಹಳ ಹತ್ತಿರದಿಂದ ನೋಡಿದ್ದೇನೆಂದು ಹೇಳುತ್ತಾರೆ. ಭಾರತೀಯರು ಅದನ್ನು ಇನ್ನೂ ಹತ್ತಿರದಿಂದ ನೋಡುವಂತೆ ಅವರ ವಿತ್ತ ಸಚಿವರು ಇನ್ನಷ್ಟು ಕೆಲಸ ಮಾಡಿದ್ದಾರೆ ಎಂದು ಯಶವಂತ್ ಸಿನ್ಹಾ ವಾಗ್ದಾಳಿ ನಡೆಸಿದ್ದಾರೆ. ಯಶವಂತ್ ಸಿನ್ಹಾ ಸತ್ಯವನ್ನೇ ಹೇಳಿದ್ದಾರೆಂದು ಚಿದಂಬರಂ ಶ್ಲಾಘಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕನ್ನಡ ಭಾಷೆ ಕಲಿಸದ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ: ಸಚಿವ ಮಧು ಬಂಗಾರಪ್ಪ
ಹೆಣ್ಣು ಭ್ರೂಣ ಹತ್ಯೆ ತಡೆಗೆ ಪ್ರತಿ ಜಿಲ್ಲೆಗೆ ನೋಡಲ್‌ ಅಧಿಕಾರಿ ನೇಮಕ: ಸಚಿವ ದಿನೇಶ್‌ ಗುಂಡೂರಾವ್‌