ಪ್ರವಾಸಿಗರಿಗೆ ಮತ್ತೊಬ್ಬ ಗೋವಾ ಸಚಿವರ ಎಚ್ಚರಿಕೆ

Published : Feb 12, 2018, 09:45 AM ISTUpdated : Apr 11, 2018, 12:54 PM IST
ಪ್ರವಾಸಿಗರಿಗೆ ಮತ್ತೊಬ್ಬ ಗೋವಾ ಸಚಿವರ ಎಚ್ಚರಿಕೆ

ಸಾರಾಂಶ

ಭಾರತೀಯ ಪ್ರವಾಸಿಗರನ್ನು ಕೊಳಕರು ಎಂದು ಸಚಿವ ವಿಜಯ್ ಸರ್‌ದೇಸಾಯಿ ದೂಷಿಸಿ ಟೀಕೆಗೊಳಗಾದ ಬೆನ್ನಲ್ಲೇ, ಗೋವಾದ ಮತ್ತೋರ್ವ ಸಚಿವರು ಪ್ರವಾಸಿಗರ ವಿರುದ್ಧ ಹರಿಹಾಯ್ದಿದ್ದಾರೆ. 

ಪಣಜಿ: ಭಾರತೀಯ ಪ್ರವಾಸಿಗರನ್ನು ಕೊಳಕರು ಎಂದು ಸಚಿವ ವಿಜಯ್ ಸರ್‌ದೇಸಾಯಿ ದೂಷಿಸಿ ಟೀಕೆಗೊಳಗಾದ ಬೆನ್ನಲ್ಲೇ, ಗೋವಾದ ಮತ್ತೋರ್ವ ಸಚಿವರು ಪ್ರವಾಸಿಗರ ವಿರುದ್ಧ ಹರಿಹಾಯ್ದಿದ್ದಾರೆ. ನಮ್ಮ ಸಂಸ್ಕೃತಿಯನ್ನು ಪಾಲಿಸಿದ ಪ್ರವಾಸಿಗರನ್ನು ನಾವು ಇಲ್ಲಿಂದ ಓಡಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇಲ್ಲಿ ಆಯೋಜಿತವಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗೋವಾದ ಪ್ರವಾಸೋದ್ಯಮ ಖಾತೆ ಸಚಿವ ಮನೋಹರ್ ಅಜ್ಗಾಂವ್ಕರ್, ‘ಇಲ್ಲಿಗೆ ಬರುವ ಪ್ರವಾಸಿಗರು ಗೋವಾ ಸಂಸ್ಕೃತಿ ಮತ್ತು ಗೋವನ್ನರನ್ನು ಗೌರವಿಸಬೇಕು. ಪ್ರವಾಸಿಗರು ಇಲ್ಲಿಗೆ ಬಂದು ಮಾದಕವಸ್ತುಗಳನ್ನು ಮಾರುವುದನ್ನು ನಾವು ಸಹಿಸುವುದಿಲ್ಲ.

ನಮ್ಮ ಸಂಸ್ಕೃತಿಯನ್ನು ಒಪ್ಪದವರನ್ನು ನಾವು ಓಡಿಸಲು ಹಿಂಜರಿಯುವುದಿಲ್ಲ. ಈ ವಿಷಯದಲ್ಲಿ ನಾವು ಯಾರ ಮಾತನ್ನೂ ಆಲಿಸುವುದಿಲ್ಲ. ನಮ್ಮ ಸಂಸ್ಕೃತಿ ಕುರಿತಂತೆ ನಮ್ಮ ನಿಲುವು ಸ್ಪಷ್ಟವಿದೆ’ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಿಳಾ ಆಯೋಗ ವಿರೋಧಕ್ಕೂ ಡೋಂಟ್ ಕೇರ್ , 569 ಮದ್ಯದ ಲೈಸೆನ್ಸ್ ಇ-ಹರಾಜು; ಸರ್ಕಾರದ ಖಜಾನೆಗೆ ಬರಲಿದೆಯೇ ₹1,000 ಕೋಟಿ?
ಆಟವಾಡುತ್ತಿದ್ದ 6 ವರ್ಷದ ಮಗು ಮೊದಲ ಮಹಡಿಯಿಂದ ಬಿದ್ದು ಗಂಭೀರ ಗಾಯ, ಪ್ರಾಣಾಪಾಯದಿಂದ ಪಾರು!