ನೀರಿಗಾಗಿ ಯುದ್ಧ ನಮ್ಮ ರಾಜ್ಯದಿಂದಲೇ ಶುರುವಾಗಲೆದೆಯೇ !

Published : Mar 18, 2017, 02:12 AM ISTUpdated : Apr 11, 2018, 12:50 PM IST
ನೀರಿಗಾಗಿ ಯುದ್ಧ  ನಮ್ಮ ರಾಜ್ಯದಿಂದಲೇ ಶುರುವಾಗಲೆದೆಯೇ !

ಸಾರಾಂಶ

ಕೃಷ್ಣ, ಕಾವೇರಿ ಗೋದಾವರಿ ಮುಂದಾದ ನದಿಮೂಲಗಳೆಲ್ಲಾ ನಾಶವಾಗುತ್ತಿವೆ.  ಇದರಿಂದ ಕರುನಾಡು ಹತ್ತಾರು ವರ್ಷಗಳಲ್ಲೇ ಬೆಂಗಾಡಾಗಿ, ಜಿಲ್ಲೆ ಜಿಲ್ಲೆ, ಗ್ರಾಮ ಗ್ರಾಮದ ನಡುವೆ ನೀರಿಗಾಗಿ ಯುದ್ಧ ನಡೆಯೋ ಆತಂಕ ಇದೆ.

ಕರುನಾಡಿಗೆ ಹಿಂದೆಂದೂ ಕಂಡರಿಯದಂಥಾ ಬರ ಸಿಡಿಲು ಬಡಿದೆ. ಇದರ ಜೊತೆ ಇನ್ನೊಂದು ಶಾಕಿಂಗ್ ಸುದ್ದಿಯನ್ನು  ನಮ್ಮ ಕವರ್​ಸ್ಟೋರಿ ತಂಡ ಕೊಡುತ್ತಿದೆ ಅದೇನಂದ್ರೆ ನಮ್ಮ ನಾಡಿನ 25ಕ್ಕೂ ಹೆಚ್ಚು ನದಿಗಳ ಉಗಮ ಸ್ಥಾನ ಪಶ್ಚಿಮಘಟ್ಟಕ್ಕೆ ಬರ ಬಂದಿದೆ. ನದಿ ಮೂಲಗಳು ಶಾಶ್ವತವಾಗಿ ಸಾಯುತ್ತಿವೆ.

ಇಂಥಾ ಒಂದು ಆತಂಕ ನಮ್ಮನ್ನು ಈಗ ಕಾಡಲಾರಂಭಿಸಿದೆ. ಯಾಕಂದರೆ ನಮ್ಮ ರಾಜ್ಯದ 25ಕ್ಕೂ ಹೆಚ್ಚು ನದಿಗಳ ತವರೂರಾದ ಪಶ್ಚಿಮಘಟ್ಟ ಬೆಂಕಿ ಮಳೆಯಿಂದ ತತ್ತರಿಸಿ ಹೋಗಿದೆ. ಕೃಷ್ಣ, ಕಾವೇರಿ ಗೋದಾವರಿ ಮುಂದಾದ ನದಿಮೂಲಗಳೆಲ್ಲಾ ನಾಶವಾಗುತ್ತಿವೆ.  ಇದರಿಂದ ಕರುನಾಡು ಹತ್ತಾರು ವರ್ಷಗಳಲ್ಲೇ ಬೆಂಗಾಡಾಗಿ, ಜಿಲ್ಲೆ ಜಿಲ್ಲೆ, ಗ್ರಾಮ ಗ್ರಾಮದ ನಡುವೆ ನೀರಿಗಾಗಿ ಯುದ್ಧ ನಡೆಯೋ ಆತಂಕ ಇದೆ.

ಸುವರ್ಣ ನ್ಯೂಸ್​ ಕವರ್​ಸ್ಟೋರಿ ತಂಡ ಚಾರಣ ಮಾಡಿ ಪಶ್ಚಿಮ ಘಟ್ಟದ ನಾಶಕ್ಕೆ ಕಾರಣಗಳನ್ನು ಅಧ್ಯಯನ ಮಾಡಿತು. ಆಗ ಗೊತ್ತಾದ ಆತಂಕಕಾರಿ ವಿಚಾರ ಅಂದರೆ ಪಶ್ಚಿಮಘಟ್ಟ ಮಾಫಿಯಾಗಳ ಕಪಿಮುಷ್ಟಿಯಲ್ಲಿ ಸಿಲುಕಿ ನಲುಗುತ್ತಿದೆ.  ಈ ಮಾಫಿಯಾಗಳನ್ನ ಮಟ್ಟ ಹಾಕಬೇಕಾದ ಸರ್ಕಾರವೇ ಮಾಫಿಯಾ ಜೊತೆ ರಾಜಿ ಮಾಡಿಕೊಂಡಿದೆ. ನಮ್ಮ ಸರ್ಕಾರವೇ ಪಶ್ಚಿಮಘಟ್ಟದ ನಾಶಕ್ಕೆ ಸುಪಾರಿ ಕೊಟ್ಟಿರೋದು ದುರಂತವೇ ಸರಿ. ಇನ್ನಾದರೂ ಸರ್ಕಾರ ಮಾಫಿಯಾಗಳನ್ನು  ಗಂಭೀರ ವಾಗಿ ಮಟ್ಟ ಹಾಕದಿದ್ದರೆ ನಾಡಿಗೆ ನಿಜವಾಗಿಯೂ ಆವರಿಸಲಿದೆ ಗ್ರಹಚಾರ.

ವರದಿ: ವಿಜಯಲಕ್ಷ್ಮಿ ಶಿಬರೂರು, ಸುವರ್ಣ ನ್ಯೂಸ್​

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದರೂ ಸೂರ್ಯವಂಶಿ ಕುಟುಂಬಕ್ಕೆ ಅಘಾತ, ಆರಕ್ಕೆ 6 ಸದಸ್ಯರಿಗೆ ಸೋಲು
ಬಿಡದಿ ಟೌನ್ ಶಿಪ್ ಜಿದ್ದಿನಿಂದ ಅನುಷ್ಠಾನ ಮಾಡುತ್ತಿಲ್ಲ: ಶಾಸಕ ಎಚ್.ಸಿ.ಬಾಲಕೃಷ್ಣ