
ನವದೆಹಲಿ (ಮಾ.06): ಬಾಲಿವುಡ್ ನಿರ್ದೇಶಕ ಕರಣ್ ಜೋಹರ್ ಮದುವೆಯನ್ನು ಆಗದೇ ಬಾಡಿಗೆ ತಾಯಿಯ ಮೂಲಕ ಅವಳಿ ಮಕ್ಕಳಿಗೆ ತಂದೆಯಾಗಿರುವುದಕ್ಕೆ ಸಮಾಜವಾದಿ ಪಕ್ಷದ ನಾಯಕ ಅಬು ಆಜ್ಮಿ ವ್ಯಂಗ್ಯವಾಡಿದ್ದಾರೆ. ಕರಣ್ ಜೋಹರ್ ಮದುವೆಯಾಗುವುದಕ್ಕೆ ಹುಡುಗಿ ಸಿಗಲಿಲ್ಲ ಹಾಗಾಗಿ ಬಾಡಿಗೆ ತಾಯಿಯನ್ನು ಅವಲಂಬಿಸಿದ್ದಾರೆ ಎಂದಿದ್ದಾರೆ.
ಮದುವೆಯಾಗಲು ಹುಡುಗಿ ಸಿಗಲಿಲ್ವಾ? ಇಲ್ಲ ಅಂತಾದರೆ ದೇಶದಲ್ಲಿ ಸಾಕಷ್ಟು ಬಡವರಿದ್ದಾರೆ. ಅವರಲ್ಲಿ ಅವಳಿ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದಿತ್ತು. ಅವರು ಬಡವರನ್ನು ಅಣಕಿಸುವಂತೆ ಭಾಸವಾಗುತ್ತಿದೆ ಎಂದು ಅಜ್ಮಿ ಹೇಳಿದ್ದಾರೆ.
ಈ ಹುಡುಗನಿಗೆ ಈ ಹುಡುಗಿ ಎಂದು ದೇವರೇ ಜೋಡಿ ಮಾಡಿರುತ್ತಾನೆ. ಆದರೆ ಕರಣ್ ಗೆ ಯಾರನ್ನೂ ಮಾಡಿಲ್ಲ. ಅವರಿಗೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಹೇಳಲಿ. ಬಹುಶಃ ಅದಕ್ಕಾಗಿಯೇ ಮದುವೆಯಾಗಿಲ್ಲದಿರಬಹುದು. ಏನಿದು ಬಾಡಿಗೆ ತಾಯ್ತನದ ನಾಟಕ? ಎಂದು ಅಜ್ಮಿ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.